ಸೂರ್ಯರಶ್ಮಿಯಂತೆ ಕಂಗೊಳಿಸಿದರೇ ಸಾಯಿಬಾಬಾ? ನಿಜಕ್ಕೂ ಇದು ಪವಾಡವೇ?
ಬೆಳಕಿನ ಕಿರಣಗಳು ವ್ಯಕ್ತಿಯ ಸ್ವರೂಪದಂತೆ ಕಂಗೊಳಿಸಿದ್ದು ಹುಣಸೂರಿನ ಸಾಯಿಬಾಬಾ ದೇಗುಲಕ್ಕೆ ಹೊಸ ಪ್ರಸಿದ್ಧಿಯನ್ನು ತಂದಿದೆ.
ಹುಣಸೂರು, ಫೆಬ್ರವರಿ 28: ಇಲ್ಲಿನ ಸಾಯಿಬಾಬಾ ದೇವಾಲಯವೊಂದರಲ್ಲಿ ಬೆಳಕಿನ ಕಿರಣಗಳು ಸಾಯಿಬಾಬಾ ಸ್ವರೂಪ ಪಡೆದು ದೇಗುಲದಲ್ಲಿ ಓಡಾಡಿದೆಯೆಂಬ ಸುದ್ದಿ ಈಗ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡಿದೆ.
ದೇಗುಲದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸಾಯಿಬಾಬಾ ಮೂರ್ತಿಯ ಮುಂದೆ ಮನುಷ್ಯನಾಕೃತಿಯ ಬೆಳಕು ಸೋಮವಾರ (ಫೆ. 28) ಸಂಜೆ ಓಡಾಡಿರುವುದು ದಾಖಲೆಯಾಗಿದೆ. ಇದನ್ನು ಕಂಡ ದೇಗುಲದ ವ್ಯವಸ್ಥಾಪಕರು ಹಾಗೂ ಇತರ ಸಿಬ್ಬಂದಿ ಇದನ್ನು ಪವಾಡ ಎಂದು ನಂಬಿ ಸಾಯಿಬಾಬಾಗೆ ವಿಶೇಷ ಪೂಜೆ ಮಾಡಿಸಿದ್ದಾರೆ.

ಇದು ಗೊತ್ತಾಗಿದ್ದೇ ತಡ, ದೇಗುಲ ಭಕ್ತಾದಿಗಳು ಈ ಕಥೆಗೆ ಮತ್ತಷ್ಟು ರೆಕ್ಕೆ ಪುಕ್ಕಗಳನ್ನು ಸೇರಿಸಿ ಕಥೆ ಕಟ್ಟಿ ಹರಿಯಬಿಟ್ಟಿದ್ದಾರೆ. ಬಾಯಿಂದ ಬಾಯಿಗೆ ಹರಡಿ ಘಟನೆ ನಡೆದು 24 ಗಂಟೆ ಕಳೆಯುವದರೊಳಗಾಗಿ ಎಲ್ಲೆಲ್ಲೂ ಪ್ರಚಲಿತವಾಗಿ ಈ ದೇಗುಲಕ್ಕೆ ಭಕ್ತಾದಿಗಳ ದಂಡೇ ಹರಿದುಬರಲಾರಂಭಿಸಿದೆ.
ಇಷ್ಟೇ ಅಲ್ಲ, ಸಿಸಿಟಿವಿ ಕ್ಯಾಮೆರಾದ ವೀಡಿಯೊ ತುಣುಕುಗಳನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದರಿಂದ ಈ ವಿಚಾರ ವೈರಲ್ ಆಗಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications