ಎಸ್ಪಿಬಿಗೆ ಹೇರ್ ಕಟ್ ಮಾಡಿದ್ದ ಮೈಸೂರಿಗನ ನೆನಪಿನ ಮಾತು...
ಮೈಸೂರು, ಸೆಪ್ಟೆಂಬರ್ 26: ಚೆನ್ನೈನ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು, ಅವರ ಮುಗ್ಧತೆ, ಸರಳತೆಯನ್ನು ಕೊಂಡಾಡದವರೇ ಇಲ್ಲ. ಅಂಥದ್ದೇ ಒಂದು ಪುಟ್ಟ ನೆನಪನ್ನು ಮೈಸೂರಿನ ಈ ವ್ಯಕ್ತಿ ಮೆಲುಕು ಹಾಕಿದ್ದಾರೆ.
ಬಾಲಸುಬ್ರಹ್ಮಣ್ಯಂ ಅವರಿಗೆ ಹೇರ್ಕಟ್ ಮಾಡುವ ಅವಕಾಶ ಒಮ್ಮೆ ಮೈಸೂರಿನ ಈ ವ್ಯಕ್ತಿಗೆ ದೊರೆತಿತ್ತು. ಇವರ ಹೆಸರು ಲೋಕೇಶ್ ಬಾಬು. ಎಸ್ಪಿಬಿ ನಿಧನದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡಿರುವ ಬಾಬು, ಈ ಹಿಂದೆ ಅವರಿಗೆ ಹೇರ್ಕಟ್ ಮಾಡಿದ್ದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ.
"ನಾನು ಆಗ ಸಂತೋಷ್ ಹೇರ್ ಕಟಿಂಗ್ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದೆ. ಒಬ್ಬರು ಬಂದು, ನಾಳೆ ನೀನು ಎಸ್ಪಿ ಸರ್ ಅವರಿಗೆ ಹೇರ್ಕಟ್ ಮಾಡಬೇಕು ಎಂದು ಕೇಳಿದರು. ನಾನು ಸರಿ ಸರ್ ಎಂದೆ. ಮತ್ತೆ ಆ ವ್ಯಕ್ತಿ ಮುಂಜಾನೆ ಬೆಳಿಗ್ಗೆ 7.30ಕ್ಕೆ ಬಂದು ನನ್ನನ್ನು ಅಂಬಾಸಿಡರ್ ಕಾರಿನಲ್ಲಿ ಕೂರಿಸಿಕೊಂಡು ಆರ್ಎಂಸಿಗೆ ಹೋದರು. ನಾನು ಕುತೂಹಲದಿಂದ ಸರ್ ಯಾವ ಎಸ್ಪಿ? ಮೈಸೂರಿನ ಎಸ್ಪಿ (ಸೂಪರಿಂಟೆಂಡೆಂಟ್ ಆಫ್ ಪೊಲೀಸ್) ಅವರಿಗೆ ಹೇರ್ಕಟ್ ಮಾಡಬೇಕಾ ಎಂದು ಕೇಳಿದೆ. ಅದಕ್ಕೆ ಆ ವ್ಯಕ್ತಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕಣ್ರೀ ಎಂದರು. ಒಂದು ಕ್ಷಣ ನನಗೆ ಶಾಕ್ ಆಯಿತು" ಎಂದು ಲೋಕೇಶ್ ಆಗಿನ ಕ್ಷಣವನ್ನು ನೆನೆದರು.

ಮುಂದುವರಿದು, ʻಎಸ್ ಪಿಬಿ ಅವರ ಹೆಸರು ಕೇಳಿದಾಕ್ಷಣ ನನಗೆ ನನ್ನ ವೃತ್ತಿಯೇ ಹೊಸದೇನೊ ಎನ್ನಿಸಿತು. ಈ ದೊಡ್ಡ ಸ್ಟಾರ್ಗೆ ಹೇರ್ಕಟ್ ಮಾಡುವಾಗ ನನ್ನಲ್ಲಿ ಅಳುಕಿತ್ತು. ದೊಡ್ಡ ಸ್ಟಾರ್ ಆದರೂ ಸಾಮಾನ್ಯ ವ್ಯಕ್ತಿಯಂತೆ ನನ್ನೊಂದಿಗೆ ನಡೆದುಕೊಂಡರು. ನನ್ನ ಹೆಸರು ಕೇಳಿಕೊಂಡರು. ಕೊನೆಯಲ್ಲಿ 800 ರೂ. ಕೊಟ್ಟರು. ಇದೆಲ್ಲ ಯಾಕೆ ಸರ್ ಎಂದೆ. ಇಟ್ಟುಕೊಳ್ಳಪ್ಪ ಎಂದರು. ಈ ಕ್ಷಣ ನನ್ನ ಜೀವನದಲ್ಲಿ ಮರೆಯಲಾರದ ಅಮೂಲ್ಯ ಕ್ಷಣ ಸರ್ ಎಂದಿದ್ದೆʼ ಎಂದು ಭಾವುಕರಾದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications