Get Updates
Get notified of breaking news, exclusive insights, and must-see stories!

ನಾಗರಹೊಳೆ: ಆನೆ ದಾಳಿಗೆ ಅರಣ್ಯಾಧಿಕಾರಿ ಬಲಿ

ಮೈಸೂರು, ಮಾರ್ಚ್ 03: ನಾಗರಹೊಳೆ ಹುಲಿ ಯೋಜನೆ ನಿದೇಶಕ ಎಸ್. ಮಣಿಕಂಠನ್ ಆನೆ ದಾಳಿಗೆ ಸಿಲುಕಿ ಶನಿವಾರ ಮೃತಪಟ್ಟಿದ್ದಾರೆ.

ದಕ್ಷ ಅರಣ್ಯಾಧಿಕಾರಿ ಎಂದು ಗುರುತಿಸಿಕೊಂಡಿದ್ದ ಎಸ್ ಮಣಿಕಂಠನ್ ಆನೆ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಡಿಬಿ ಕುಪ್ಪೆ ವಲಯದ ಬಳ್ಳೆ ಅರಣ್ಯದಲ್ಲಿ ಜಿಪಿಎಸ್ ಲೊಕೇಶನ್ ಕಾರ್ಯದಲ್ಲಿ ತೊಡಗಿದ್ದಾಗ ಆನೆ ಏಕಾಏಕಿ ದಾಳಿ ಮಾಡಿದೆ. ಅನಿರೀಕ್ಷಿತ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ಮಣಿಕಂಠನ್, ಗಂಭೀರವಾಗಿ ಗಾಯಗೊಂಡರು.

IFS officer Manikanthan killed in an Elephant attack

ಎಚ್ ಡಿ ಕೋಟೆಯ ಸರಕಾರಿ ಆಸ್ಪತ್ರೆಗೆ ಕರೆ ತರುವಷ್ಷರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮಣಿಕಂಠನ್ ಮತ್ತವರ ತಂಡ ಜೀಪು ನಿಲ್ಲಿಸಿ ಹುಲಿ ಗಣತಿಗೆ ಸಂಬಂಧಿಸಿದ ಜಿಪಿಎಸ್ ಲೊಕೇಶನ್ ಕಾರ್ಯದಲ್ಲಿ ತೊಡಗಿದ್ದರು. ಪೊದೆಯಿಂದ ಏಕಾಏಕಿ ಬಂದ ಆನೆ ಬಿಳಿ ಅಂಗಿ ಧರಿಸಿದ್ದ ಮಣಿಕಂಠನ್ ಅವರ ಮೇಲೆ ಎರಗಿದೆ. ಜತೆಗಿದ್ದ ಆರ್ ಎಫ್ ಒ ಸುಬ್ರಮಣ್ಯ ಓಡಿ ಪಾರಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+