ಮೈಸೂರಿನಲ್ಲಿ ಅಪಘಾತ; ಮಾಜಿ ನಗರ ಸಭಾ ಸದಸ್ಯೆ ಪುತ್ರ ಸಾವು
ಮೈಸೂರು, ಮೇ 19: ಹಿಂದಿನಿಂದ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಂಜನಗೂಡಿನ ಮಲ್ಲನ ಮೂಲೆ ಬಳಿ ನಡೆದಿದೆ.
ಮಾಜಿ ನಗರ ಸಭಾ ಸದಸ್ಯೆ ಸುಧಾ ಅವರ ಪುತ್ರ ಪ್ರವೀಣ (25) ಅಪಘಾತದಲ್ಲಿ ಮೃತಪಟ್ಟವರು. ಸೋಮವಾರ ಸಂಜೆ ಮಲ್ಲನ ಮೂಲೆ ಬಳಿ ಹೊರಟಿದ್ದ ಬೈಕ್ ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ಸಂದರ್ಭ ಬಿದ್ದ ಬೈಕ್ ಸವಾರ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications