ಬೆಂಗಳೂರು –ಮೈಸೂರು ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್
ಮೈಸೂರು, ಡಿಸೆಂಬರ್ 05 : ಬೆಂಗಳೂರು - ಮೈಸೂರಿನಲ್ಲಿ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೊಂದು ಸಂತಸದ ಸುದ್ದಿ. ಬಹುದಿನಗಳ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ.
ಹೌದು ಮೈಸೂರು ಬೆಂಗಳೂರು ನಡುವಿನ ರೈಲು ಹಳಿ ವಿದ್ಯುಧೀಕರಣ ಕಾಮಗಾರಿ ಸಂಪೂರ್ಣಗೊಂಡಿದೆ. ಇದೇ ಹಿನ್ನೆಲೆ ಮೊದಲ ಬಾರಿಗೆ ಈ ಮಾರ್ಗದಲ್ಲಿ ಎಲೆಕ್ಟ್ರಿಕ್ ಇಂಜಿನ್ ಟೆಸ್ಟ್ ರನ್ ಜೋಡಿ ಹಳಿಯಲ್ಲಿ ಸಂಚರಿಸಿದ್ದು ಸಫಲಗೊಂಡಿರುವುದಕ್ಕಾಗಿ ಮೈಸೂರು ರೈಲ್ವೆ ಇಲಾಖೆ ಸಿಬ್ಬಂದಿ ವರ್ಗ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಆರಂಭದ ದಿನಗಳಲ್ಲಿ ಶತಾಬ್ದಿ ಎಕ್ಸ್ಪ್ರೆಸ್ ರೈಲು ಪ್ರಯಾಣ ಆರಂಭಿಸಲಿದ್ದು, ನಂತರ ಇತರ ರೈಲುಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ಓಡಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಬೆಂಗಳೂರು ನಡುವಿನ ರೈಲು ಹಳಿ ವಿದ್ಯುಧೀಕರಣ ಪೂರ್ಣಗೊಂಡ ಪರಿಣಾಮ, ಸುರಕ್ಷತಾ ಅಧಿಕಾರಿಗಳು ಹಳಿಯ ಕ್ಷಮತೆ, ಕಾಮಗಾರಿಯನ್ನು ಟೆಸ್ಟ್ ರನ್ ಮೂಲಕ ಪರಿಶೀಲಿಸಿದ್ದಾರೆ. ಒಂದು ವೇಳೆ ಇದು ಸಫಲಗೊಂಡಲ್ಲಿ ಇನ್ಮುಂದೆ ಬೆಂಗಳೂರು -ಮೈಸೂರು ಮಾರ್ಗದ ಎಲ್ಲಾ ರೈಲು ಮಾರ್ಗಗಳು ಎಲೆಕ್ಟ್ರಿಕ್ ಇಂಜಿನ್ ಸಹಾಯದ ಮೂಲಕವೇ ಸಂಚರಿಸಲಿದೆ.
ವೇಗದೂತವಾಗಲಿದೆ ಈ ಉಗಿಬಂಡಿ : ಬೆಂಗಳೂರು - ಮೈಸೂರು ಅಥವಾ ಮೈಸೂರು - ಬೆಂಗಳೂರು ಮಾರ್ಗದಲ್ಲಿ ದಿನನಿತ್ಯ ಷ್ಟು ರೈಲುಗಳು ಸಂಚರಿಸದರೂ ಸಾಲದು. ಕಾರಣ ಜನವೋ ಜನ. ಕೇವಲ 3 ಗಂಟೆ ಅವಧಿಯಲ್ಲಿ ಸಂಚರಿಸಬೇಕಾದ ರೈಲು ಕೆಲವೊಮ್ಮೆ ಇಂಜಿನ್ ಕೆಟ್ಟು ಹೋಯಿತು ಎಂದು ಗಂಟೆಗಟ್ಟಲೇ ನಿಲ್ಲುವುದಂಟು. ಅಷ್ಟೇ ಅಲ್ಲದೇ ಇದರ ವೇಗವೂ ಕಡಿಮೆ. ಆದರೆ ಎಲೆಕ್ಟ್ರಿಕ್ ಟ್ರೈನ್ ಓಡಾಡಲೂ ಶುರುವಿಟ್ಟುಕೊಂಡರೆ ಡೀಸೆಲ್ ಇಂಜಿನ್ ಗಿಂತ ವೇಗವಾಗಿ ಸಂಚರಿಸಲಿದೆ ಎನ್ನುತ್ತಾರೆ ಅಧಿಕಾರಿ ವರ್ಗ.
ವಾಯುಮಾಲಿನ್ಯ ಹತೋಟಿಗೆ :ಸಾಮಾನ್ಯವಾಗಿ ಡೀಸೆಲ್ ಇಂಜಿನ್ ಗಳು ಹೊಗೆಸಹಿತವಾಗಿರುತ್ತದೆ. ಆದರೆ ಇನ್ಮುಂದೆ ಹಳಿಗಳಿಗೆ ಇಳಿಯಲಿರುವ ಎಲೆಕ್ಟ್ರಿಕ್ ಇಂಜಿನ್ ಇಂತಹ ಹೊಗೆರಹಿತ ಇಂಜಿನ್ ಗಳಾಗಿ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲದೇ ಇದರ ನಿರ್ವಹಣಾ ವೆಚ್ಚವೂ ಡೀಸೆಲ್ ಇಂಜಿನ್ ಗಿಂತ ಕಡಿಮೆ.
ಸಮಯದ ಉಳಿತಾಯ :ಮೈಸೂರಿನಿಂದ ದಿನನಿತ್ಯ 20ಕ್ಕೂ ಹೆಚ್ಚು ರೈಲುಗಳು ರಾಜ್ಯದ ಮೂಲೆ -ಮೂಲೆಗೂ ಸಂಚರಿಸಲಿದೆ.. ಇಲ್ಲಿಂದ ಬೆಂಗಳೂರಿಗೆ ತೆರಳುವ ಅನೇಕ ಗಾಡಿಗಳು ಡೀಸೆಲ್ ಇಂಜಿನ್ ನಿಂದ ಎಲೆಕ್ಟ್ರಿಕ್ ಗೆ ಬದಲಿಸಿಕೊಳ್ಳಲು 30 ನಿಮಿಸಗಳ ಕಾಲಾವದಿ ಬೇಕು. ಆದರೆ ಎಲೆಕ್ಟ್ರಿಕ್ ಇಂಜಿನ್ ಸಂಚರಿಸಿದ್ದಲ್ಲಿ ಅಲ್ಲಿ ಬದಲಿಸುವ ಪ್ರಮೇಯವೇ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.
ಒಟ್ಟಾರೆ, ಮೈಸೂರು - ಬೆಂಗಳೂರು ನಡುವೆ ವಿದ್ಯುದ್ದೀಕರಣದ ರೈಲು ಸಂಚರಕ್ಕೆ ಗ್ರೀನ್ ಸಿಗ್ನಲ್ ಬಿದ್ದಲ್ಲಿ ಪ್ರಯಾಣಿಕರಿಗೆ ಬಹುದಿನಗಳ ವರಪ್ರಸಾದ ಸಿಕ್ಕಿದ ಅನುಭವವೇ ಸರಿ..
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications