Get Updates
Get notified of breaking news, exclusive insights, and must-see stories!

ಕೋಮಾದಲ್ಲಿದ್ದ ಶಿಕ್ಷಕರ ಮನೆಗೆ ಭೇಟಿ ನೀಡಿ ನೈತಿಕ ಸ್ಥೈರ್ಯ ತುಂಬಿದ ಶಿಕ್ಷಣ ಸಚಿವ

ಮೈಸೂರು, ಡಿಸೆಂಬರ್ 16: ಕಳೆದ ವರ್ಷ ನವೆಂಬರ್‌ನಲ್ಲಿ ಅಪಘಾತಕ್ಕೀಡಾದ ನಂತರ ಒಂದು ವರ್ಷದಿಂದ ಕೋಮಾದಲ್ಲಿದ್ದ ಸರ್ಕಾರಿ ಶಾಲಾ ಶಿಕ್ಷಕರ ಮನೆಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ಕುಟುಂಬಕ್ಕೆ ನೈತಿಕ ಸ್ಥೈರ್ಯ ತುಂಬಿದ್ದಾರೆ.

52 ವರ್ಷದ ಶಿಕ್ಷಕ ಮಹಾದೇವಸ್ವಾಮಿ ಅವರ ಪತ್ನಿ ಮಂಜುಳಾ ಅವರ ಮನವಿಯ ಮೇರೆಗೆ ನಂಜನಗೂಡಿನ ಹಂದುವಿನಹಳ್ಳಿ ಲೇಔಟ್‌ನಲ್ಲಿರುವ ಶಿಕ್ಷಕರ ಮನೆಗೆ ಸೋಮವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಶಿಕ್ಷಕ ಮಹಾದೇವಸ್ವಾಮಿ ಅವರು ಭುಜಂಗಯ್ಯನಹುಂಡಿ ಗ್ರಾಮದ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದರು. ಒಂದು ವರ್ಷದ ಹಿಂದೆ ಕೆಲಸ ಮಗಿಸಿ ವಾಪಸ್‌ ಸಂಜೆ ನಂಜನಗೂಡಿಗೆ ಹಿಂತಿರುಗುತಿದ್ದಾಗ, ವಾಹನವೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದರು.

 Mysuru: Education Minister Suresh Kumar Has Visit To Sickness Prone Teachers Home

ಬೆನ್ನು ಮೂಳೆಗೆ ಬಿದ್ದ ಪೆಟ್ಟಿನಿಂದಾಗಿ ಅವರು ಈಗಲೂ ಹಾಸಿಗೆಯಲ್ಲೆ ಇರಬೇಕಾಗಿದೆ. ಇಲಾಖೆಯಿಂದ ನೈತಿಕ ಬೆಂಬಲವನ್ನು ನೀಡಲು ಕುಟುಂಬಕ್ಕೆ ಭೇಟಿ ನೀಡಿದ್ದೇನೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ಮಹಾದೇವಸ್ವಾಮಿ ಅವರಿಗೆ 11 ವರ್ಷದ ಮಗನಿದ್ದಾನೆ.

ಮಹಾದೇವಸ್ವಾಮಿ ಅವರು ಸ್ವಯಂಪ್ರೇರಿತ ನಿವೃತ್ತಿಗೆ ಅರ್ಜಿ ಸಲ್ಲಿಸಬೇಕೆಂದು ಸುರೇಶ್‌ ಕುಮಾರ್‌ ಅವರು ಸೂಚಿಸಿದ್ದು, ಇಲಾಖೆಯಿಂದ ದೊರೆಯುವ ಎಲ್ಲ ಆರ್ಥಿಕ ಸವಲತ್ತುಗಳನ್ನೂ ಶೀಘ್ರವಾಗಿ ಕೊಡಿಸಿಕೊಡುವ ಭರವಸೆ ನೀಡಿದರು. ಇದಲ್ಲದೆ ಶಿಕ್ಷಕರ ಪತ್ನಿ ಮಂಜುಳಾ ಅವರಿಗೆ ಇಲಾಖೆಯಲ್ಲೆ ಕೆಲಸ ನೀಡುವುದಾಗಿ ಭರವಸೆ ನೀಡಿದರು.

 Mysuru: Education Minister Suresh Kumar Has Visit To Sickness Prone Teachers Home

ಇದಲ್ಲದೆ ಅಪಘಾತದಿಂದ ಪರಿಹಾರವನ್ನು ಪಡೆಯಲು ನ್ಯಾಯಾಲಯದಲ್ಲಿ ಹೋರಾಡಲು ವಕೀಲರನ್ನು ಕೂಡ ನಿಯೋಜಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪಾಂಡುರಂಗ, ಬ್ಲಾಕ್ ಶಿಕ್ಷಣ ಅಧಿಕಾರಿ ಸಿ.ಎನ್ ರಾಜು ಸಚಿವರ ಭೇಟಿ ಸಮಯದಲ್ಲಿ ಹಾಜರಿದ್ದರು. ಶಿಕ್ಷಕರ ಮನೆಗೆ ಸಚಿವರ ಭೇಟಿಯು ಕುಟುಂಬದವರಿಗೆ ನೆಮ್ಮದಿ ಜತೆಗೆ ಚೈತನ್ಯವನ್ನೂ ನೀಡಿದೆ ಎಂದು ಮಂಜುಳಾ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+