ದಸರಾ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ
ಮೈಸೂರು, ಅ.17 : ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ತೆರೆ ಬಿದ್ದಿದೆ. ದಸರಾದ ಪ್ರಮುಖ ಆಕರ್ಷಣೆಯಾಗಿದ್ದ ಗಜಪಡೆಗಳಿಗೆ ಮೈಸೂರಿನಲ್ಲಿ ಗುರುವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು. ಪೂಜೆ ಸಲ್ಲಿಸಿ ಎಲ್ಲಾ ಆನೆಗಳನ್ನು ಅವುಗಳ ಶಿಬಿರಕ್ಕೆ ಮರಳಿ ಕಳಿಸಲಾಯಿತು.
ಅರಮನೆ ಆವರಣದಲ್ಲಿ ಗುರುವಾರ ಅರ್ಜುನ, ಬಲರಾಮ, ಗಜೇಂದ್ರ, ಅಭಿಮನ್ಯು, ಸರಳಾ, ವರಲಕ್ಷ್ಮೀ, ವಿಜಯಾ, ವಿಕ್ರಮ, ಗೋಪಾಲಸ್ವಾಮಿ, ಪ್ರಶಾಂತ್, ಶ್ರೀರಾಮ, ದುರ್ಗಪರಮೇಶ್ವರಿ, ಹರ್ಷ ಮತ್ತು ಗೋಪಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿಗಳಾದ ಶಿಖಾ, ವಲಯ ಅರಣ್ಯಾಧಿಕಾರಿ ದೇವರಾಜ್, ಮೈಸೂರು ಮೇಯರ್ ರಾಜೇಶ್ವರಿ ಆನೆಗಳಿಗೆ ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ ನೀಡಿ ಅವುಗಳಿಗೆ ಬೀಳ್ಕೊಡುಗೆ ನೀಡಿದರು. ನಂತರ ಆನೆಗಳನ್ನು ಲಾರಿಗಳ ಮೂಲಕ ಬಳ್ಳೆ, ದುಬಾರೆ, ತಿಥಿಮತಿ, ಕೆ.ಗುಡಿ ಶಿಬಿರಗಳಿಗೆ ಕಳುಹಿಸಿಕೊಡಲಾಯಿತು.
ಆನೆಗಳೊಂದಿಗೆ ಆಗಮಿಸಿದ 28 ಮಾವುತರು ಮತ್ತು ಕಾವಾಡಿಗರು ಮತ್ತು ಅವರ ಕುಟುಂಬದ ಸುಮಾರು 200 ಮಂದಿಯೂ ಸಹ ಗುರುವಾರ ಮೈಸೂರು ತೊರೆಯುತ್ತಿದ್ದಾರೆ. ಮುಂದಿನ ದಸರಾ ವೇಳೆಗೆ ಮತ್ತೆ ನಗರಕ್ಕೆ ಆಗಮಿಸುತ್ತಾರೆ. (ಮೈಸೂರು ದಸರಾದ ಚಿತ್ರಗಳು)
ಆನೆಗಳು ಆರೋಗ್ಯವಾಗಿವೆ : ದಸರಾದಲ್ಲಿ ಪಾಲ್ಗೊಂಡು ಕಾಡಿಗೆ ಮರಳುತ್ತಿರುವ ಎಲ್ಲಾ ಆನೆಗಳು ಆರೋಗ್ಯಕರವಾಗಿವೆ ಎಂದು ವಲಯ ಅರಣ್ಯಾಧಿಕಾರಿ ದೇವರಾಜ್ ಹೇಳಿದ್ದಾರೆ. ಎಲ್ಲಾ 14 ಆನೆಗಳು ಆರೋಗ್ಯಕರವಾಗಿದ್ದು, ನಗರಕ್ಕೆ ಬಂದ ನಂತೆ 200ರಿಂದ 600 ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿವೆ ಎಂದರು.
ದುರ್ಗಪರಮೇಶ್ವರಿ ಆನೆಯನ್ನು ದಸರಾಗೆ ಮೊದಲ ಬಾರಿಗೆ ಕರೆಸಲಾಗಿತ್ತು. ಅದಕ್ಕೆ ಅಗತ್ಯ ತಾಲೀಮು ನೀಡಿದ್ದೆವು. ಆದರೆ, ಜಂಬೂ ಸವಾರಿಯಲ್ಲಿ ಅದು ಪಾಲ್ಗೊಳ್ಳಲಿಲ್ಲ. ಮುಂದಿನ ಬಾರಿ ಅದನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಬಲರಾಮ ಮತ್ತೆ ಬರ್ತಾನೆ : ಜಂಬೂ ಸವಾರಿಗೆ ಎರಡು ದಿನ ಮೊದಲು ತಾಲೀಮಿನ ವೇಳೆ ಅರ್ಧಕ್ಕೆ ಹಿಂದಿರುಗಿದ್ದ ಬಲರಾಮ ಆನೆ ಆರೋಗ್ಯಕರವಾಗಿದೆ. ಮುಂದಿನ ದಸರಾ ಉತ್ಸವದಲ್ಲೂ ಬಲರಾಮ ಪಾಲ್ಗೊಳ್ಳುತ್ತಾನೆ ಎಂದು ಭರವಸೆ ವ್ಯಕ್ತಪಡಿಸಿದರು. (ಮೈಸೂರಿನಲ್ಲಿ ಅ.18ರಿಂದ ವೈನ್ ಮೇಳ)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications