ಹುಣಸೂರಿನಲ್ಲಿ ಟಿಕೇಟ್ ಹಂಚಿಕೆ ವಿಚಾರಕ್ಕೆ ಕಾಂಗ್ರೆಸ್ ನಲ್ಲಿ ಕಿತ್ತಾಟ
ಮೈಸೂರು, ಅಕ್ಟೋಬರ್ 4 : ಹುಣಸೂರು ವಿಧಾನ ಸಭಾ ಕ್ಷೇತ್ರಕ್ಕೆ ವಕೀಲ ರಾಮಕೃಷ್ಣಗೆ ಟಿಕೇಟ್ ನೀಡುವಂತೆ ಅಭಿಮಾನಿಗಳು, ಬೆಂಬಲಿಗರು ಒತ್ತಾಯಿಸಿದ್ದಾರೆ.
ಮೈಸೂರಿನ ಸಿಎಂ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಆಗಮಿಸಿದ ವಕೀಲ ರಾಮಕೃಷ್ಣ ಅವರ ಅಭಿಮಾನಿಗಳು, ಹಾಲಿ ಶಾಸಕ ಮಂಜುನಾಥ್ ವರ್ತನೆಯಿಂದ ಬೇಸತ್ತಿದ್ದೇವೆ. ಹೀಗಾಗಿ ಕುರುಬ ಸಮುದಾಯದ ರಾಮಕೃಷ್ಣ ಅವರಿಗೆ ಈ ಭಾರಿ ಕಾಂಗ್ರೆಸ್ ಟಿಕೇಟ್ ನೀಡಿ.ಇಲ್ಲವಾದರೆ ಕೈ ಅಭ್ಯರ್ಥಿ ಸೋಲಿಸುತ್ತೆವೆ ಎಂದು ಒತ್ತಾಯಿಸಿದರು.

ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ವಕೀಲ ರಾಮಕೃಷ್ಣ ಅವರಿಗೇ ಟಿಕೇಟ್ ನೀಡಿ ಎಂದು ವಕೀಲ ರಾಮಕೃಷ್ಣರ ಭಾವ ಚಿತ್ರ ಹಿಡಿದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಕೀಲ ರಾಮಕೃಷ್ಣ ಅವರಿಗೆ ಜೈಕಾರ ಹಾಕಿದ್ದಾರೆ. ಹಾಲಿ ಎಂ.ಎಲ್.ಎ. ಮಂಜುನಾಥ್ ಇರುವಾಗಲೇ ಹುಣಸೂರು ಕ್ಷೇತ್ರಕ್ಕೆ ಮತ್ತೊಬ್ಬರಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದ್ದಾರೆ.











Click it and Unblock the Notifications