ಮಕ್ಕಳ ಕಲರವದಲ್ಲಿ ನಲಿದ ಬೈಲಕುಪ್ಪೆ ಟಿಬೆಟ್ ಕ್ಯಾಂಪ್
ಮೈಸೂರು,ಮಾರ್ಚ್,14: ಒಂದೆಡೆ ವ್ಯಾಪಾರದ ಭರಾಟೆ..ಮತ್ತೊಂದೆಡೆ ಮನರಂಜನೆಯ ರಸದೂಟ..ತಮಗೆ ಬೇಕಾದ ತಿಂಡಿ ತಿನಿಸು ತಿಂದು ಬಾಯಿ ಚಪ್ಪರಿಸುವ ಸದಾವಕಾಶ..ಎಲ್ಲೆಡೆ ಸಡಗರ ಸಂಭ್ರಮ..ಇದೆಲ್ಲಾ ಕಂಡು ಬಂದಿದ್ದು ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಒಂದನೇ ಟಿಬೆಟ್ ಕ್ಯಾಂಪಿನಲ್ಲಿ.
ಬೈಲಕುಪ್ಪೆಯ ಒಂದನೇ ಕ್ಯಾಂಪಿನ ಎಸ್.ಓ.ಎಸ್ ವಿದ್ಯಾಕೇಂದ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮನೋರಂಜನಾ ಜಾತ್ರೆ ನಡೆಯಿತು. ಈ ಜಾತ್ರೆಯಲ್ಲಿ ಮಕ್ಕಳೇ ವ್ಯಾಪಾರಸ್ಥರು, ಖರೀದಿದಾರರಾಗಿ ವ್ಯಾಪಾರ ಜ್ಞಾನದ ಜೊತೆಯಲಿ ನಕ್ಕು ನಲಿದರು.[ಇವರು ಬಡವರಿರಬಹುದು, ಇವರ ಜೀವನ ಪ್ರೀತಿಗೆ ಬಡತನವಿಲ್ಲ!]

ಎಸ್.ಓ.ಎಸ್ ವಿದ್ಯಾಕೇಂದ್ರದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪಿಯುಸಿ ಓದುತ್ತಿರುವ ಮಕ್ಕಳು ಇಲ್ಲಿದ್ದಾರೆ. ಅಲ್ಲದೇ ಹೊರಗಿನಿಂದ ಸುಮಾರು 1300 ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿಯೇ ಬಂದಿದ್ದಾರೆ. ಇಲ್ಲಿ ವರ್ಷಕ್ಕೊಮ್ಮೆ ಮನೋರಂಜನಾ ಜಾತ್ರೆ ಏರ್ಪಡಿಸಲಾಗುತ್ತದೆ. ಈ ಸಂದರ್ಭ ದಾನಿಗಳಿಂದ ಹಣ ಸಂಗ್ರಹಿಸಿ ಕಡಿಮೆ ದರದಲ್ಲಿ ಬಟ್ಟೆ, ಚಪ್ಪಲಿ, ಹೀಗೆ ವಿವಿಧ ವಸ್ತುಗಳನ್ನು ತಂದು ಮಾರಾಟ ಮಾಡಲಾಗುತ್ತದೆ.
ಎಲ್ಲರೂ ಒಂದೆಡೆ ಕಲೆತು ಅಲ್ಲಲ್ಲಿ ಟೆಂಟ್ ಹಾಕಿ ಬಟ್ಟೆ, ಚಪ್ಪಲಿ ಹೀಗೆ ನಾನಾ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ವಿದ್ಯಾಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲದೆ, ಸುತ್ತಮುತ್ತಲಿನ ಟಿಬೆಟ್ ಕ್ಯಾಂಪಿನ ಜನರೂ ಇಲ್ಲಿ ಮಾರಾಟಕ್ಕೆ ಬರುತ್ತಾರೆ.[ನೀರಿನಲ್ಲಿ ಆಡುವ ಮೈಸೂರು ಮಕ್ಕಳಿಗೆ ಬುದ್ಧಿ ಹೇಳುವವರು ಯಾರು?]

ಜೊತೆಗೆ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುತ್ತಾರೆ. ಇದರಿಂದ ಕಡಿಮೆ ದರದಲ್ಲಿ ಮಕ್ಕಳಿಗೆ ವಸ್ತುಗಳು ದೊರೆಯುವುದಲ್ಲದೆ, ಸಂಸ್ಥೆಗೂ ಒಂದಷ್ಟು ಆದಾಯ ಬರುತ್ತದೆ ಎಂದು ಎಸ್.ಓ.ಎಸ್ ಮುಖ್ಯ ಶಿಕ್ಷಕರಾದ ಲೊಬ್ ಸಂಗ್ ಶರೀಫ್ ಹೇಳುತ್ತಾರೆ.[ಇಬ್ಬರು ಮಕ್ಕಳ ಬಾಳಿಗೆ ಬೆಳಕಾದ ವಿಜಯಪುರದ 'ಜ್ಯೋತಿ']
ಜಾತ್ರೆಯು ಬಟ್ಟೆ ಪ್ರಿಯರ ಮನತಣಿಸುವುದಲ್ಲದೇ ತಿಂಡಿ ಪ್ರಿಯರಿಗೂ ಇಲ್ಲಿ ಅವಕಾಶವಿದೆ. ಇಲ್ಲಿ ಟಿಬೆಟಿಯನ್ನರ ವಿಶೇಷ ತಿಂಡಿ ತಿನಿಸುಗಳನ್ನು ಕೂಡ ಮಾರಾಟ ಮಾಡಲಾಗುತ್ತದೆ. ತಮಗೆ ಬೇಕಾದ ಖಾದ್ಯಗಳನ್ನು ಸ್ಥಳದಲ್ಲೇ ಅಥವಾ ಮನೆಗೂ ಕೊಂಡೊಯ್ಯಬಹುದಾಗಿರುತ್ತದೆ.
ಒಟ್ಟಾರೆ ಬೈಲಕುಪ್ಪೆಯ ಒಂದನೇ ಟಿಬೆಟ್ ಕ್ಯಾಂಪಿನಲ್ಲಿ ನಡೆದ ಮಕ್ಕಳ ಮನೋರಂಜನಾ ಜಾತ್ರೆ ತುಂಬಾ ವಿಶಿಷ್ಟವಾಗಿತ್ತು.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications