ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವಸ್ಥಾನದ ಪ್ರಸಾದದಲ್ಲೂ ಮೈಸೂರಿನ ಸಿಎಫ್ ಟಿಆರ್ ಐ ತಂತ್ರಜ್ಞಾನ

|
Google Oneindia Kannada News

ಮೈಸೂರು, ಫೆಬ್ರವರಿ 12: ಮೈಸೂರಿನ ಪ್ರತಿಷ್ಠಿತ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್ ಟಿಆರ್ಐ) ತಂಡ ಈಗಾಗಲೇ ಗುಣಮಟ್ಟದ ಆಹಾರವನ್ನು ನೀಡಿ ಜನಮೆಚ್ಚುಗೆ ಪಡೆದಿದೆ. ಇದಕ್ಕೆ ಪೂರಕವೆಂಬಂತೆ ಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸಾದ ಗೋಧಿ ಹುಗ್ಗಿ ಹಾಗೂ ಅವಧೂತ ದತ್ತಪೀಠದ ಪ್ರಸಾದವನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿದೆ.

ಈ ತಿನಿಸುಗಳನ್ನು ಟಿನ್‌ ರಹಿತ ಉಕ್ಕಿನ ಡಬ್ಬಗಳಲ್ಲಿ ದೀರ್ಘಕಾಲ ಬಾಳಿಕೆ ಬರುವಂತೆ ಅಭಿವೃದ್ಧಿಪಡಿಸಿ ಶೇಖರಿಸುವಂತೆ ಮಾಡಲಾಗಿದೆ. ಗೋಧಿ ಹುಗ್ಗಿಯು ಗೋಧಿಯಿಂದ ತಯಾರಿಸಲ್ಪಡುವ ಪಾಯಸದಂತಹ ಸಿಹಿ ತಿನಿಸು.

ಅಪೌಷ್ಟಿಕತೆ ಹೋಗಲಾಡಿಸಲು ಸಿಎಫ್ ಟಿಆರ್ ಐನಿಂದ ವಿಶೇಷ ಉಪಾಹಾರಅಪೌಷ್ಟಿಕತೆ ಹೋಗಲಾಡಿಸಲು ಸಿಎಫ್ ಟಿಆರ್ ಐನಿಂದ ವಿಶೇಷ ಉಪಾಹಾರ

ಇಷ್ಟು ದಿನ ಧಾರವಾಡದ ಲತ್ತಿ, ಲಟ್ಟಿ ಫುಡ್ಸ್ ಕಂಪನಿಯು ಈ ತಿನಿಸನ್ನು ತಯಾರಿಸಿ ಮಾರಾಟ ಮಾಡುತ್ತಿತ್ತು. ಅಂತೆಯೇ, ಅವಧೂತ ದತ್ತ ಪೀಠವು ಭಕ್ತರಿಗೆ 'ಪ್ರಸಾದಂ' ಸಂಸ್ಥೆಯಿಂದ ಅಭಿವೃದ್ಧಿಪಡಿಸಿರುವ ಪ್ರಸಾದವನ್ನು ಗೋಧಿಹಿಟ್ಟು, ಬೆಲ್ಲ, ತುಪ್ಪ, ಗೋಡಂಬಿ-ಬಾದಾಮಿ ಬೀಜಗಳನ್ನು ಸೇರಿಸಿ ತಯಾರಿಸುತ್ತಿತ್ತು.

CFTRI team given prasada facility to ganapathi sachidananda ashrama

 ಸಿಎಫ್ ​​​ಟಿಆರ್​ಐನಿಂದ ನೆರೆ ಸಂತ್ರಸ್ತರಿಗೆ ರುಚಿಯಾದ ಪೌಷ್ಟಿಕಾಂಶ ಆಹಾರ ಪೂರೈಕೆ ಸಿಎಫ್ ​​​ಟಿಆರ್​ಐನಿಂದ ನೆರೆ ಸಂತ್ರಸ್ತರಿಗೆ ರುಚಿಯಾದ ಪೌಷ್ಟಿಕಾಂಶ ಆಹಾರ ಪೂರೈಕೆ

ಗಣಪತಿ ಸಚ್ಚಿದಾನಂದ ಆಶ್ರಮ ಎಂದು ಹೆಸರಿರುವ ದತ್ತಪೀಠ ದೀರ್ಘ ಬಾಳಿಕೆಯ ಪ್ರಸಾದ ಅಭಿವೃದ್ಧಿಪಡಿಸಿಕೊಡುವಂತೆ ಮನವಿ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ಹರ್ಡಲ್ ತಂತ್ರಜ್ಞಾನವನ್ನು ಬಳಸಿ ಸಂಸ್ಕರಿಸಿ ಪ್ಯಾಕ್‌ ಮಾಡಿದ್ದೇವೆ. ಸಾಮಾನ್ಯ ಉಷ್ಣತೆಯಲ್ಲಿ ಇದು 3 ತಿಂಗಳು ಬಾಳುತ್ತದೆ ಎಂದು ಸಿಎಫ್ ಟಿಆರ್ ಐನ ಆಹಾರ ಪ್ಯಾಕೇಜಿಂಗ್‌ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಎಚ್‌.ಎಸ್.‌ಸತೀಶ್ ತಿಳಿಸಿದ್ದಾರೆ.

English summary
Central Food Technological Research Institute (CFTRI) has developed two new traditional products that have long shelf-life. This Prasada has given to Mysuru Ganapathi Satchidananda ashrama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X