ಮೈಸೂರಿನಲ್ಲಿ ಅ.18ರಿಂದ ವೈನ್ ಮೇಳ
ಮೈಸೂರು, ಅ.10 : ಈ ಬಾರಿಯ ದಸಾರಕ್ಕೆ ಮೈಸೂರಿಗೆ ಆಗಮಿಸಿದ ಪ್ರವಾಸಿಗರು ಕೈಯಲ್ಲಿ ವೈನ್ ಹಿಡಿದು ಮೈಸೂರು ತೊರೆಯಬಹುದು. ನಗರದಲ್ಲಿ ಮೊದಲ ಬಾರಿಗೆ ವೈನ್ ಮೇಳವನ್ನು ಕರ್ನಾಟಕ ವೈನ್ ಬೋರ್ಡ್ ಆಯೋಜಿಸಿದೆ.
ಕರ್ನಾಟಕದ ವೈನ್ ಉದ್ಯಮದ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡುತ್ತಾ, ಉದ್ಯಮವನ್ನು ವಿಸ್ತರಿಸಲು ಸರ್ಕಾರ ಈ ವೈನ್ ಮೇಳವನ್ನು ಹಮ್ಮಿಕೊಂಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ವೈನ್ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ.

ಅ.18ರಂದು ಆರಂಭವಾಗುವ ಮೇಳ ಮೂರು ದಿನಗಳ ಕಾಲ ನಡೆಯುಲಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಮಾರು ಹದಿನೆಂಟು ವೈನ್ ಕಂಪನಿಗಳು ಮೇಳದಲ್ಲಿ ಭಾಗವಹಿಸಿ, ಪ್ರವಾಸಿಗರಿಗೆ ವೈನ್ ರುಚಿ ತೋರಿಸಲಿವೆ.
ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ಹೆಚ್ಚು ಪ್ರವಾಸಿಗರಿರುತ್ತಾರೆ. ಆದ್ದರಿಂದ ದಸರಾ ಮುಕ್ತಾಯವಾದ ಬಳಿಕ ಸರ್ಕಾರ ವೈನ್ ಮೇಳ ಆಯೋಜಿಸಿದೆ. ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಕರ್ನಾಟಕ ವೈನ್ ಬೋರ್ಡ್ ನಿರ್ದೇಶ ಬಿ.ಕೃಷ್ಣ ಹೇಳಿದ್ದಾರೆ.
ದಸರಾಕ್ಕೆ ದೇಶ-ವಿದೇಶಗಳಿಂದ ಹಲವಾರು ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಕರ್ನಾಟಕ ವೈನ್ ಪರಿಚಯಿಸುವುದು ಮೇಳದ ಉದ್ದೇಶ ಆದ್ದರಿಂದ ದಸರಾ ಮುಗಿದ ತಕ್ಷಣ ಮೇಳ ಆಯೋಜಿಸಲಾಗಿದೆ. ಆದರೆ, ಮೇಳದ ಸ್ಥಳ ಇನ್ನೂ ನಿಗದಿಯಾಗಿಲ್ಲ.
ಕರ್ನಾಟಕದಲ್ಲಿ ವೈನ್ ಉದ್ಯಮ ಪ್ರಗತಿ ಹೊಂದುತ್ತಿದೆ. ಮೇಳದ ಮೂಲಕ ಇದನ್ನು ಮತ್ತಷ್ಟು ಜನಪ್ರಿಯಗೊಳಿಸುವುದು ವೈನ್ ಬೋರ್ಡ್ ಉದ್ದೇಶ. 2012-13ನೇ ಸಾಲಿನಲ್ಲಿ 1.44 ಲಕ್ಷ ಕೇಸ್ ವೈನ್ ರಾಜ್ಯದಲ್ಲಿ ಮಾರಾಟವಾಗಿದೆ.
ಬೆಂಗಳೂರಿನಲ್ಲಿ ವೈನ್ ಮೇಳ ಪ್ರತಿವರ್ಷ ನಡೆಯುತ್ತದೆ. ಕರ್ನಾಟಕ ವೈನ್ ಬೋರ್ಡ್ ಬೆಂಗಳೂರಿನ ಹಾಪ್ ಕಾಮ್ಸ್ ನಲ್ಲಿ ವೈನ್ ಮಾರಾಟ ಮಾಡಲು ಬೋರ್ಡ್ ಸಿದ್ಧತೆ ನಡೆಸಿದೆ. ಸದ್ಯ ಮೈಸೂರಿನಲ್ಲಿ ಮೇಳ ಆಯೋಜಿಸಿದೆ. (ಐದು ಹಾಪ್ ಕಾಮ್ಸ್ ನಲ್ಲಿ ವೈನ್ ಸಿಗುತ್ತೆ)
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications