ಆದೇಶ್ ಶ್ರೀವಾಸ್ತವ ನಿಧನಕ್ಕೆ ಮೊಸಳೆ ಕಣ್ಣೀರು ಸುರಿಸಬೇಡಿ ಪ್ಲೀಸ್
ಮುಂಬೈ, ಸೆ. 05: ಪ್ರತಿಭಾವಂತ ಗಾಯಕ, ಸಂಗೀತಗಾರ ಆದೇಶ್ ಶ್ರೀವಾಸ್ತವ ಅವರು ಕ್ಯಾನ್ಸರಿಗೆ ಬಲಿಯಾಗಿದ್ದಾರೆ. 49 ವರ್ಷ ವಯಸ್ಸಿನ ಆದೇಶ್ ಅವರ ಸಾವಿನ ಬಗ್ಗೆ ಮೊಸಳೆ ಕಣ್ಣೀರಿಡುತ್ತಿರುವವರ ಬಗ್ಗೆ ಅವರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.
ಕ್ಯಾನ್ಸರ್ ಗೆ ತುತ್ತಾಗಿದ್ದ ಆದೇಶ್ ಅವರು ಮುಂಬೈನ ಕೋಕಿಲಬೇನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ನರಳುತ್ತಿದ್ದಾಗ ಸಾಂತ್ವನ ಹೇಳಲು ಬರದಿದ್ದ ಜನ ಈಗ ಟ್ವೀಟ್ ಮಾಡುತ್ತಿದ್ದಾರೆ ಎಂದು ಆದೇಶ್ ಅವರ ಫ್ಯಾನ್ಸ್ ಖಂಡಿಸಿದ್ದಾರೆ.
2010ರಿಂದಲೂ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಆದೇಶ್ ಅವರಿಗೆ 2015ರಲ್ಲಿ ಮತ್ತೊಮ್ಮೆ ಕ್ಯಾನ್ಸರ್ ಆವರಿಸಿಕೊಂಡಿತ್ತು. ಇತ್ತೀಚೆಗೆ ರೋಗ ಉಲ್ಬಣಗೊಂಡಿದ್ದರಿಂದ ಕೀಮೋಥೆರಪಿಯನ್ನು ವೈದ್ಯರು ನಿಲ್ಲಿಸಿದ್ದರು. ಸೆ.2ರಂದೇ ವೈದ್ಯರು ಕೈಚೆಲ್ಲಿದ್ದರು ಎಂದು ಆದೇಶ್ ಅವರ ಪತ್ನಿ ವಿಜಯತಾ ಪಂಡಿತ್ ನೊಂದು ನುಡಿದಿದ್ದಾರೆ.
ಆದೇಶ್ ಅವರು ಚಿಕಿತ್ಸೆಗಾಗಿ ನಾವು ಅಮೆರಿಕಕ್ಕೆ ತೆರಳಿ ಹಿಂತಿರುಗಿದ್ದರು. ಅದರೆ, ಆದೇಶ್ ಮೂಗಿನಿಂದ ರಕ್ತ ಸೋರಲು ಆರಂಭಿಸಿತು. ತಕ್ಷಣವೇ ಆಸ್ಪತ್ರೆಗೆ ಸೇರಿದೆವು. ಒಂದು ತಿಂಗಳ ನರಳಾಟವನ್ನು ನೋಡಿದರೆ ಕರಳು ಕಿತ್ತು ಬರುವಂತೆ ಇತ್ತು ಎಂದು ಆಪ್ತರು ಹೇಳಿದ್ದಾರೆ. ಆದರೆ, ಆದೇಶ್ ಅವರಿಗೆ ಚಿತ್ರರಂಗದ ನೆರವು ಸಿಕ್ಕಿದ್ದು, ತೀರಾ ತಡವಾಗಿ, ಮಾಧ್ಯಮಗಳಂತೂ ಆದೇಶ್ ಅವರನ್ನು ಮರೆತು ಬಿಟ್ಟಿತ್ತು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂರಾರು ಚಿತ್ರಕ್ಕೆ ಸಂಗೀತ ನೀಡಿರುವ ಆದೇಶ್
ನೂರಾರು ಚಿತ್ರಕ್ಕೆ ಸಂಗೀತ ನೀಡಿರುವ ಆದೇಶ್ ಅವರು ಜಭಲ್ ಪುರ್ ಮೂಲದವರು. ಮೊದಲ ಸಂಯೋಜನೆಯನ್ನು ಮೇರು ಗಾಯಕಿ ಲತಾ ಮಂಗೇಷ್ಕರ್ ಅವರು ಹಾಡಿದ್ದು ವಿಶೇಷ. 2010ರ ರಾಜ್ ನೀತಿ, ರೆಹನಾ ಹೇ ತೇರೆ ದಿಲ್ ಮೇ, ಚಲ್ತೆ ಚಲ್ತೆ ಸಂಗೀತ ಹಾಗೂ ಬಾರ್ಡರ್ ಚಿತ್ರದ ಹಿನ್ನೆಲೆ ಸಂಗೀತಗಾರರಾಗಿ ಜನಪ್ರಿಯತೆ ಗಳಿಸಿದ್ದರು.
|
ಇದ್ದಾಗ ನೆರವಾಗದ ಮಂದಿ, ಸತ್ತಾಗ ಅಳುತ್ತಿದ್ದಾರೆ
ಇದ್ದಾಗ ನೆರವಾಗದ ಮಂದಿ, ಸತ್ತಾಗ ಅಳುತ್ತಿದ್ದಾರೆ, ಸಂತಾಪ ಸಂದೇಶ ಇಟ್ಟುಕೊಂಡು ಏನು ಮಾಡೋಣ.
|
ಚಿಕಿತ್ಸೆಗಾಗಿ ದುಬಾರಿ ಕಾರು ಮಾರಿದ್ದ ಆದೇಶ್
ಕ್ಯಾನ್ಸರ್ ಚಿಕಿತ್ಸೆಗಾಗಿ ಹಮ್ಮರ್ ಕಾರು ಮಾರಿದ್ದ ಆದೇಶ್ ಗೆ ಜೀವಿಸುವ ಆಸೆ ಹೆಚ್ಚಾಗಿತ್ತು.
|
ಮಾಧ್ಯಮಗಳಿಗೆ ಈ ಸುದ್ದಿ ಬೇಡವಾಯಿತೆ
ಮಾಧ್ಯಮಗಳಿಗೆ ಈ ಸುದ್ದಿ ಬೇಡವಾಯಿತೆ, ಆದೇಶ್ ಅವರ ಮಕ್ಕಳ ಮುಖ ನೋಡಿಯಾದರೂ ಸುದ್ದಿ ಮಾಡಬಹುದಾಗಿತ್ತು.
|
ಆದೇಶ್ ಅವರ ಸಂಗೀತ ಸದಾ ಸ್ಮರಣೀಯ
ಆದೇಶ್ ಅವರ ಸಂಗೀತ ಸದಾ ಸ್ಮರಣೀಯ, ಮೋರಾ ಪಿಯಾ.. ಸುನೋ ನಾ ಸುನೋ ನಾ ನನ್ನ ನೆಚ್ಚಿನ ಹಾಡು
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications