'New Year, Same Beer' ಎಂದ ಮದ್ಯದ ದೊರೆ ಮಲ್ಯಗೆ ಮರ್ಮಾಘಾತ!
ಮುಂಬೈ, ಜನವರಿ.01: ವಿಶ್ವದಲ್ಲೇ ಮದ್ಯದ ದೊರೆ ಎಂದಾಕ್ಷಣ ನೆನಪಿಗೆ ಬರುವ ಹೆಸರೇ ವಿಜಯ್ ಮಲ್ಯ. ಹೊಸ ವರ್ಷಾಚರಣೆ ದಿನ ಎಣ್ಣೆ ಹೊಡೆಯುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಇವರನ್ನು ಜ್ಞಾಪಿಸಿಕೊಳ್ಳುತ್ತಾರೆ.
New Year, Same Beer ಹೊಸ ವರ್ಷವನ್ನು ಹಳೆಯ ಬಿಯರ್ ಜೊತೆ ಆಚರಿಸಿಕೊಳ್ಳಿ ಎಂದು ಸ್ವತಃ ವಿಜಯ್ ಮಲ್ಯ ಎಲ್ಲರಿಗೂ ವಿಶಿಷ್ಟವಾಗಿ ಹೊಸ ವರ್ಷದ ಶುಭಾಷಯವನ್ನು ಕೋರಿದ್ದರು. ಹೀಗೆ ಹೊಸ ವರ್ಷಾಚರಣೆಯ ಮೂಡ್ ನಲ್ಲಿದ್ದ ಮದ್ಯದ ದೊರೆಗೆ ವರ್ಷಾರಂಭದಲ್ಲೇ ಕೋರ್ಟ್ ಶಾಕ್ ಕೊಟ್ಟಿದೆ.
ಆರ್ಥಿಕ ಅಪರಾಧಿ ಎಂದು ಗುರುತಿಸಿಕೊಂಡಿರುವ ವಿಜಯ್ ಮಲ್ಯರ ಆಸ್ತಿ ಹರಾಜು ಹಾಕಲು ಮುಂಬೈನ ಆರ್ಥಿಕ ಅಪರಾಧ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಕೋರ್ಟ್ ಅನುಮತಿ ನೀಡಿದೆ. ಆ ಮೂಲಕ ಸಾಲ ಮರುಪಾವತಿ ಮಾಡಿಕೊಳ್ಳಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ಮೇಲ್ಮನವಿ ಸಲ್ಲಿಕೆಗೆ ಅವಕಾಶ ನೀಡಿದ ಕೋರ್ಟ್
ಮದ್ಯದ ದೊರೆ ವಿಜಯ್ ಮಲ್ಯರಿಂದ ವಶಕ್ಕೆ ಪಡೆದ ಅಸ್ಥಿರ ಆಸ್ತಿಗಳನ್ನು ಹರಾಜು ಹಾಕಲು ಮುಂಬೈನ ಪಿಎಂಎಲ್ಎ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಜನವರಿ.18ರವರೆಗೂ ಈ ಆದೇಶವನ್ನು ತಡೆ ಹಿಡಿಯಲಾಗಿದ್ದು, ವಿಜಯ್ ಮಲ್ಯ ಅಥವಾ ಬ್ಯಾಂಕ್ ಗಳು ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ.

ವಿಜಯ್ ಮಲ್ಯ ಅಸ್ಥಿರ ಆಸ್ತಿ ಹರಾಜಿಗೆ ಒಪ್ಪಿಗೆ
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ವಿಜಯ್ ಮಲ್ಯ ಅವರಿಗೆ ಸಂಬಂಧಿಸಿದ ಅಸ್ಥಿರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ಪೈಕಿ ಅಸ್ಥಿರ ಆಸ್ತಿ, ಎಂದರೆ ಬ್ಯಾಂಕ್ ಬಾಂಡ್, ಕಂಪನಿ ಷೇರುಗಳನ್ನು ಹರಾಜು ಹಾಕಲು ಎಬಿಐ ಒಕ್ಕೂಟ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆ ಕೋರ್ಟ್ ಅಸ್ಥಿರ ಆಸ್ತಿಗಳನ್ನು ಹರಾಜು ಹಾಕುವ ಮೂಲಕ ಹಣ ಮರುಪಾವತಿಗೆ ಅನುಮತಿ ನೀಡಿದೆ.

ಅಸ್ಥಿರ ಆಸ್ತಿ ಹರಾಜಿಗೆ ವಿಜಯ್ ಮಲ್ಯ ಅಭ್ಯಂತರವಿಲ್ಲ
ಕಳೆದ ಜನವರಿ.05ರಂದು ವಿಜಯ್ ಮಲ್ಯರನ್ನು ದೇಶದಿಂದ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲಾಗಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ ಒಕ್ಕೂಟದಿಂದ ವಿಜಯ್ ಮಲ್ಯ 6,203.35 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದರು. ಕಳೆದ 2013ರಿಂದ ಈವರೆಗೆ ಪಡೆದ ಸಾಲದ ಮೇಲೆ ಶೇ.11.5ರಷ್ಟು ಬಡ್ಡಿ ಸೇರಿದಂತೆ ಒಟ್ಟು ಸಾಲದ ಮೊತ್ತ 11 ಸಾವಿರ ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ.

ಸಾಲ ಮರುಪಾವತಿಸಲು ಟೈಮ್ ಕೇಳಿದ್ದ ಮಲ್ಯ
ಕೋಟಿ ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿ ಆಗಿರುವ ವಿಜಯ್ ಮಲ್ಯ, ಸಾಲ ಮರು ಪಾವತಿ ಮಾಡಲು ತಾವು ಸಿದ್ಧ ಎಂದೇ ಹೇಳಿಕೊಳ್ಳುತ್ತಾ ಬಂದಿದ್ದಾರೆ. ಲಂಡನ್ ನಲ್ಲಿರುವ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕೇಂದ್ರ ಸರ್ಕಾರವು ಮನವಿ ಸಲ್ಲಿಸಿದೆ. ಇನ್ನೊಂದಡೆ ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ಬ್ಯಾಂಕ್ ನಿಂದ ಸಾಲ ಪಡೆದಿದ್ದೇನೆಯೇ ಹೊರತೂ ಅದು ವೈಯಕ್ತಿಕ ಸಾಲವಲ್ಲ ಎಂಬ ವಾದ ಮಂಡಿಸುತ್ತಿದ್ದಾರೆ. ಜೊತೆಗೆ ಸಾಲ ಮರುಪಾವತಿಗೆ ತಾವು ಸಿದ್ಧರಿದ್ದು, ಅದಕ್ಕಾಗಿ ಕಾಲಾವಕಾಶ ನೀಡುವಂತೆ ಹೇಳುತ್ತಿದ್ದಾರೆ.
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications