ಆಸ್ಪತ್ರೆ ಸೇರಿದ ಶೋಭಾ ಡೇ ಟ್ವೀಟ್ ಖ್ಯಾತಿಯ ದಢೂತಿ ಪೊಲೀಸ್ !
ಲೇಖಕಿ ಶೋಭಾ ಡೇ ಅವರ ಟ್ವಿಟ್ಟರ್ ಪೋಸ್ಟ್ ನಿಂದಾಗಿ ಜನಪ್ರಿಯತೆ ಪಡೆದುಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ಈಗ ಸ್ಥೂಲಕಾಯ ಕಳೆದುಕೊಳ್ಳಲು ಆಸ್ಪತ್ರೆ ಸೇರಿದ್ದಾರೆ.
ಮುಂಬೈ, ಫೆಬ್ರವರಿ 28: ಲೇಖಕಿ ಶೋಭಾ ಡೇ ಅವರ ಟ್ವಿಟ್ಟರ್ ಪೋಸ್ಟ್ ನಿಂದಾಗಿ ಜನಪ್ರಿಯತೆ ಪಡೆದುಕೊಂಡ ಪೊಲೀಸ್ ಇನ್ಸ್ ಪೆಕ್ಟರ್ ಈಗ ಸ್ಥೂಲಕಾಯ ಕಳೆದುಕೊಳ್ಳಲು ಆಸ್ಪತ್ರೆ ಸೇರಿದ್ದಾರೆ.
ಮಧ್ಯಪ್ರದೇಶದ ದಢೂತಿ ದೇಹದ ಪೊಲೀಸ್ ಇನ್ಸ್ಪೆಕ್ಟರ್ ದೌಲತ್ ರಾಮ್ ಜೋಗಾವತ್ (58) ಅವರು ತಮ್ಮ ಭಾರೀ ತೂಕ ಇಳಿಸಿಕೊಳ್ಳಲು ಬ್ಯಾರಿಯಾಟ್ರಿಕ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. [ಪೊಲೀಸರನ್ನು ಅಣಕಿಸಲು ಹೋಗಿ ತಿರುಗೇಟು ತಿಂದ ಲೇಖಕಿ]

ಮುಂಬೈಗೆ ಆಗಮಿಸಿದ ದೌಲತ್ ರಾಮ್ ಅವರಿಗೆ ಸೈಫಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀದಲಾಗುತ್ತಿದೆ. ಸುಮಾರು 185 ಕೆಜಿ ತೂಕದ ಇವರ ಚಿತ್ರಗಳು ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ, ಶೋಭಾ ಡೇ ಟ್ವೀಟ್ ನಂತರ ದೌಲತ್ ರಾಮ್ ಯಾರು ಎಂಬುದು ಎಲ್ಲರಿಗೂ ತಿಳಿದು ಬಿಟ್ಟಿತು.
ಹಾರ್ಮೋನ್ ವ್ಯತ್ಯಾಸದಿಂದ ನನಗೆ ಈ ಸಮಸ್ಯೆ ಬಂದಿದೆ ಇದು ನನ್ನ ತಪ್ಪಲ್ಲ. 1993ರಲ್ಲಿ ಗಲ್ ಬ್ಲಾಡರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಶೋಭಾ ಡೇ ಅವರ ಟ್ವೀಟ್ ಬಗ್ಗೆ ಅಸಮಾಧಾನವಿದೆ ಎಂದು ಇನ್ಸ್ ಪೆಕ್ಟರ್ ಜೋಗೆವಾತ್ ಹೇಳಿಕೊಂಡಿದ್ದಾರೆ.[ತೂಕ ಇಳಿಸಲು ಮುಂಬೈಗೆ ಬಂದ 500ಕೆಜಿ ತೂಕದ ಮಹಿಳೆ]
ಡೊಳ್ಳು ಹೊಟ್ಟೆಯ ಪೇದೆಯ ಚಿತ್ರವನ್ನು ಹಾಕಿ 'ಹೆವಿ ಬಂದೋಬಸ್ತ್' ಎಂದು ಡೇ ಅವರು ಕಾಮಿಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಂಬೈ ಪೊಲೀಸರು, ಈ ಫೋಟೋದಲ್ಲಿರುವ ವ್ಯಕ್ತಿ ಮುಂಬೈ ಪೊಲೀಸ್ ಇಲಾಖೆಗೆ ಸೇರಿಲ್ಲ. ಮಧ್ಯಪ್ರದೇಶದವರಿರಬಹುದು. ಜವಾಬ್ದಾರಿಯುತ ನಾಗರಿಕರಾದ ನೀವು ಈ ರೀತಿ ಟ್ವೀಟ್ ಮಾಡುವ ಮೊದಲು ಪರಿಶೀಲಿಸಿ ಎಂದು ಮುಂಬೈ ಪೊಲೀಸ್ ಅವರು ಟ್ವೀಟ್ ಮಾಡಿದ್ದರು. (ಪಿಟಿಐ)
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications