ಗೋದ್ರೇಜ್ ಪಾಲಾದ ರಾಜ್ ಕಪೂರ್ ಕುಟುಂಬದ ನೆನಪಿನ ಸ್ಟುಡಿಯೋ
ಮುಂಬೈ, ಮೇ 03: ಮುಂಬೈನ ಚೆಂಬೂರ್ ನಲ್ಲಿ ರಾಜ್ ಕಪೂರ್ ನಿರ್ಮಿಸಿದ್ದ ಪ್ರತಿಷ್ಟಿತ 'ಆರ್.ಕೆ.ಸ್ಟುಡಿಯೋಸ್' ಈಗ ಗೋದ್ರೇಜ್ ಸಂಸ್ಥೆ ಪಾಲಾಗಿದೆ.
ಆರ್ ಕೆ ಸ್ಟುಡಿಯೋ ಮಾರಾಟದ ಬಗ್ಗೆ ಕಳೆದ ವರ್ಷ ಆಗಸ್ಟ್ ನಲ್ಲಿ ಸುಳಿವು ನೀಡಿದ್ದ ನಟ ರಿಷಿ ಕಪೂರ್ ಅವರು ನಂತರ ತಮ್ಮ ಕುಟುಂಬದ ಹೆಮ್ಮೆಯ ಸ್ಟುಡಿಯೋವನ್ನು ಗೋದ್ರೇಜ್ ಪ್ರಾಪರ್ಟೀಸ್ ಲಿಮಿಟೆಡ್ ಸಂಸ್ಥೆಗೆ ಮಾರಲು ನಿರ್ಧರಿಸಿದರು. ರಣಧೀರ್, ರಿಷಿ ಮತ್ತು ರಾಜೀವ್, ಸೋದರಿಯರಾದ ರಿತು ಮತ್ತು ರಿಮಾ ಒಮ್ಮತದ ನಿರ್ಣಯ ಕೈಗೊಂಡು 'ಆರ್.ಕೆ.ಸ್ಟುಡಿಯೋಸ್'ನ ಮಾರಾಟ ಮಾಡಿದ್ದಾರೆ.
ಮಾರಾಟಕ್ಕಿರುವ ಪ್ರತಿಷ್ಟಿತ 'ಆರ್.ಕೆ.ಸ್ಟುಡಿಯೋಸ್' ಎಷ್ಟು ಬೆಲೆ ಬಾಳುತ್ತೆ ಗೊತ್ತೇ.?
ಬರ್ಸಾತ್, ಜಾಗ್ತೇ ರಹೋ, ಆವಾರ. ಶ್ರೀ420, ಸಂಗಮ್, ಮೇರಾನಾಮ್ ಜೋಕರ್ ಮುಂತಾದ ಮಹೋನ್ನತ ಚಿತ್ರಗಳು ಇದೇ ಆರ್.ಕೆ. ಸ್ಟುಡಿಯೋದಲ್ಲಿ ಚಿತ್ರೀಕರಣ ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆರ್.ಕೆ.ಸ್ಟುಡಿಯೋಸ್'ನಲ್ಲಿ ನರ್ಗಿಸ್ ರಿಂದ ಹಿಡಿದು ವೈಜಯಂತಿಮಾಲಾ ವರೆಗೂ ಎಲ್ಲಾ ರಾಜ್ ಕಪೂರ್ ನಾಯಕಿಯರ ಕಾಸ್ಟ್ಯೂಮ್ಸ್, 'ಮೇರಾ ನಾಮ್ ಜೋಕರ್' ಮಾಸ್ಕ್, 'ಅವಾರಾ' ಸಿನಿಮಾದಲ್ಲಿ ಬಳಸಿದ ಪಿಯಾನೋ ಸೇರಿದಂತೆ ಎಷ್ಟೋ ಸ್ಮರಣೀಯ ವಸ್ತುಗಳು ಕೆಲ ವರ್ಷಗಳ ಹಿಂದೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೂದಿಯಾಗಿತ್ತು. ಇದಾದ ಬಳಿಕ ಸ್ಟುಡಿಯೋ ನಿರ್ವಹಣೆ ಕಷ್ಟಕರವಾಗಿತ್ತು.

2.2 ಎಕರೆ ಪ್ರದೇಶದ ಸ್ಟುಡಿಯೋ
ಗೋದ್ರೇಜ್ ಗ್ರೂಪ್ ನ ರಿಯಲ್ ಎಸ್ಟೇಟ್ ವಿಭಾಗವು ಚೆಂಬೂರಿನಲ್ಲಿರುವ ಸ್ಟುಡಿಯೋಗೆ ಸೇರಿದ 2.2 ಎಕರೆ ಜಾಗವನ್ನು ಖರೀದಿಸುತ್ತಿದೆ. ಈಗಾಗಲೇ ಮುಂಗಡ ಪಾವತಿ ರೂಪದಲ್ಲಿ 150 ಕೋಟಿ ರು ನೀಡಲಾಗಿದೆ. ಕಪೂರ್ ಕುಟುಂಬದವರು 250 ಕೋಟಿ ರು ಮೌಲ್ಯ ಕೇಳಿದ್ದರು ಎಂಬ ಸುದ್ದಿಯಿದೆ. ಕನಿಷ್ಠ 200 ಕೋಟಿ ರು ಗೆ ಮಾರಾಟವಾಗಿರುವ ಸಾಧ್ಯತೆಯಿದೆ. ಆದರೆ, ಅಂತಿಮ ಮಾರಾಟ ಮೌಲ್ಯ ಇನ್ನು ಬಹಿರಂಗವಾಗಿಲ್ಲ.

ಚೆಂಬೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ
ಚೆಂಬೂರ್ ಪ್ರದೇಶದಲ್ಲಿ ಈಗ ರಿಯಲ್ ಎಸ್ಟೇಟ್ ವ್ಯವಹಾರ ಜೋರಾಗಿದೆ. ಇತ್ತೀಚೆಗೆ ಚೆಂಬೂರ್ ಏರಿಯಾದ 2 ಎಕರೆ ನಿವೇಶನವನ್ನು ಬೆಂಗಳೂರು ಮೂಲದ ಪುರುವಂಕರ ಲಿಮಿಟೆಡ್ ಅವರು 147ಕೋಟಿ ರು ನೀಡಿ ಖರೀದಿಸಿತ್ತು. ಕಳೆದ ವರ್ಷ ಪೆಪ್ಸಿಕೋ 2.3 ಎಕರೆ, ಡ್ಯೂಕ್ ಘಟಕವನ್ನು ವಾಧ್ವಾ ಸಮೂಹ 167 ಕೋಟಿ ರು ಗೆ ಖರೀದಿ ಮಾಡಿತ್ತು.

ವಸತಿ ಸಮುಚ್ಚಯ ನಿರ್ಮಿಸಲಿರುವ ಗೋದ್ರೇಜ್
2.2 ಎಕರೆ ವಿಸ್ತೀರ್ಣದ ಜಾಗದಲ್ಲಿ 33,000 ಬಿಲ್ಡಪ್ ಪ್ರದೇಶ ಸಿಗಲಿದ್ದು, ವಸತಿ ಸಮುಚ್ಚಯ ನಿರ್ಮಿಸುವ ಯೋಜನೆಯನ್ನು ಗೋದ್ರೇಜ್ ಸಂಸ್ಥೆ ಹಾಕಿಕೊಂಡಿದೆ. ಸಿಯೊನ್ ಪನ್ವೆಲ್ ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಕಟ್ಟಡ ಪ್ರದೇಶವು ಶಾಲೆ, ಆಸ್ಪತ್ರೆ, ರೀಟೈಲ್ ಮಳಿಗೆ, ವಾಣಿಜ್ಯ ಸಂಕೀರ್ಣಗಳಿಂದ ಆವರಿಸಿದೆ ಎಂದು ಕಾರ್ಯಕಾರಿ ಚೇರ್ಮನ್ ಪಿರೋಶ್ನಾ ಗೋದ್ರೇಜ್ ಹೇಳಿದ್ದಾರೆ.

ರಿಷಿ ಕಪೂರ್ ಪ್ರತಿಕ್ರಿಯೆ
''ಅಗ್ನಿ ಅವಘಡ ಸಂಭವಿಸಿದ್ಮೇಲೆ, ನವೀಕರಣ ಮಾಡಬೇಕು ಅಂತ ಎಷ್ಟೋ ಪ್ರಯತ್ನ ಪಟ್ವಿ. ಆದ್ರೆ, ಆಗಲಿಲ್ಲ. ಸ್ಟುಡಿಯೋ ಬಗ್ಗೆ ನಮ್ಮೆಲ್ಲರಿಗೂ ಭಾವನಾತ್ಮಕ ನಂಟು ಇದೆ. ಇದೊಂದು ನೋವಿನ ವಿಚಾರ, ಆದರೆ, ಗೋದ್ರೇಜ್ ಪ್ರಾಪರ್ಟೀಸ್ ಗತ ಇತಿಹಾಸದ ಮೇಲೆ ಹೊಸ ಅದ್ಯಾಯವನ್ನು ಬರೆಯಲಿದೆ ಎಂದು ರಿಷಿ ಕಪೂರ್ ಪ್ರತಿಕ್ರಿಯಿಸಿದ್ದಾರೆ.
-
Asha Bhosle: ಆಶಾ ಭೋಸ್ಲೆಗೆ 16ನೇ ವರ್ಷದಲ್ಲೇ ಮದುವೆ, 2ನೇ ಮದುವೆಯಲ್ಲೂ ಸಂಕಷ್ಟ - ಕಾರಣವೇನು -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications