ಮಂಗಳೂರು: 29ರ ಹರೆಯದ ಈ ಯುವಕ ಐಶ್ವರ್ಯಾ ರೈ ಮಗನಂತೆ!
Recommended Video

ಮಂಗಳೂರು, ಡಿಸೆಂಬರ್ 30: ನಾನು ವಿಶ್ವ ಸುಂದರಿ , ಬಾಲಿವುಡ್ ತಾರೆ ಐಶ್ವರ್ಯ ರೈ ಅವರ ಮಗ ಪ್ಲೀಸ್ ಇದನ್ನು ನಂಬಿ ಎಂದು ಹೇಳಿಕೊಂಡು ಯುವಕನೋರ್ವ ಮಂಗಳೂರಿನಲ್ಲಿ ಪ್ರತ್ಯಕ್ಷನಾಗಿ ಸಂಚಲನ ಮೂಡಿಸಿದ್ದಾನೆ . ಆಂದ್ರದ ವಿಶಾಖಪಟ್ಟಣಂ ಮೂಲದ 29 ವರ್ಷದ ಯುವಕ ತಾನು ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಅವರ ಮಗನೆಂದು ಹೇಳಿಕೊಂಡು ಹೊಸ ಬಾಂಬ್ ಸಿಡಿಸಿದ್ದಾನೆ.
ಸಂಗೀತ್ ಕುಮಾರ್ ರೈ ಹೆಸರಿನ ಈ ಯುವಕ ಮಂಗಳೂರಿಗೆ ಬಂದು ಮಾಧ್ಯಮಗಳ ಎದುರು ಈ ಹೇಳಿಕೆ ನೀಡಿದ್ದಾನೆ. ಈತ ಹೇಳುವ ಪ್ರಕಾರ 1988ರಲ್ಲಿ ಈತನ ಜನನವಾಗಿದ್ದು, ಐಶ್ವರ್ಯ ಕೃಷ್ಣರಾಜ ರೈ ತನ್ನ ತಾಯಿ ಎಂದು ಹೇಳುತ್ತಿದ್ದಾನೆ. ಐಶ್ವರ್ಯ ರೈಯ ಇಡೀ ಕುಟುಂಬ ಬಗ್ಗೆ ಹಾಗೂ ಐಶ್ವರ್ಯ ರೈ ಯಾವ ವರ್ಷದಲ್ಲಿ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟರು ಮತ್ತು ಆಕೆ ನಟಿಸಿದ ಚಿತ್ರಗಳ ಬಗ್ಗೆಯೂ ಈತ ಮಾಹಿತಿ ಹೊಂದಿದ್ದಾನೆ.

ತನ್ನ ತಂದೆ ವಿಶಾಖಪಟ್ಟಣ ಮೂಲದ ಮವುಲು ಆದಿರೆಡ್ಡಿಯಾಗಿದ್ದು, ಐಶ್ವರ್ಯಾ ರೈ ಹಾಗೂ ತನ್ನ ತಂದೆ ಐ.ವಿ.ಎಫ್ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು. ಪದ್ಮಜಾ ಅವರು ನನ್ನ ಮಲತಾಯಿಯಾಗಿದ್ದಾರೆ. ನನ್ನ ಜನನ ಲಂಡನ್ ನಲ್ಲಿ ಆಗಿದೆ. ತನ್ನ ತಾಯಿ ಐಶ್ವರ್ಯ ರೈ ಇದೀಗ ಅಭಿಷೇಕ್ ಬಚ್ಚನ್ ಅನ್ನು ಮದುವೆಯಾಗಿದ್ದು, ಆರಾಧ್ಯ ಕೂಡಾ ಐವಿಎಫ್ ಮೆಥಡ್ ಮೂಲಕವೇ ಹುಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಾನೆ.
ತಾನು ಹುಟ್ಟಿದ ಆರಂಭದ ಎರಡು ವರ್ಷ ಐಶ್ವರ್ಯಾ ಕುಟುಂಬದ ಜೊತೆಗಿದ್ದೆ. ಆನಂತರ ಸುರಕ್ಷತೆಯ ದೃಷ್ಠಿಯಿಂದ ತನ್ನನ್ನು ತಂದೆ ವಿಶಾಖಪಟ್ಟಣಂಗೆ ತಂದು ಸಾಕಿದರು ಅಂತ ಹೇಳುತ್ತಾನೆ ಸಂಗೀತ್ ಕುಮಾರ್. ತಾನು ಆಕೆಯ ಮಗನೆಂದು ಹೇಳಿಕೊಳ್ಳಲು ಯಾವುದೇ ದಾಖಲೆ ತನ್ನಲ್ಲಿ ಇಲ್ಲ. ಎಲ್ಲಾ ದಾಖಲೆಗಳು ಐಶ್ವರ್ಯಾ ರೈ ತಾಯಿಯ ಬಳಿಯಿದೆ. ಐಶ್ವರ್ಯಾ ರೈ ಕುಟುಂಬಸ್ಥರು ನನ್ನನ್ನು ನೋಡಿದರೆ ಒಪ್ಪಿಕೊಳ್ಳುತ್ತಾರೆ ಎಂದು ಹೇಳುತ್ತಾನೆ.

ಚೆನ್ನೈ ಯಲ್ಲಿ ಸೌಂಡ್ ಇಂಜಿನಿಯರ್ ಆಗಿದ್ದೇನೆ ಅಂತಾ ಹೇಳಿಕೊಂಡಿರುವ ಈತ ತನಗೆ ಬಚ್ಚನ್ ಕುಟುಂಬ ಇಷ್ಟವಿಲ್ಲ. ಅಭಿಷೇಕ್ ಬಚ್ಚನ್ ತನ್ನ ತಾಯಿಯ ಜತೆ ಇರೋದು ಇಷ್ಟವಿಲ್ಲ. ತಾನು ತಾಯಿ ಬಳಿ ಹೋಗಬೇಕಿದ್ದು, ತಾಯಿ ಐಶ್ವರ್ಯ ರೈ ಜತೆಯೇ ಇರಬೇಕೆಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications