ಪಣಂಬೂರು ಕಡಲ ತೀರದಲ್ಲಿ ಮಕ್ಕಳ ಮೈನವಿರೇಳಿಸುವಂತಹ ಪ್ರದರ್ಶನ
ಮಂಗಳೂರು, ಜನವರಿ. 09 : ಪಣಂಬೂರಿನಲ್ಲಿ ಸರ್ಫಿಂಗ್ ಕ್ಲಾಸ್ ಶುರುವಾಗಿದೆ. ಬಿಳಿನೊರೆಯ ಅಲೆಯಲ್ಲಿ ಪುಳಕದ ಮೋಜಿನಾಟ. ಹೌದು.. ಈಗ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲ ಆರ್ಭಟಿಸುವ ಕಡಲ ತೀರದಲ್ಲಿ ಸಾಹಸ ಪ್ರದರ್ಶಿಸುವ ಸರ್ಫಾರ್ ಗಳು ನೋಡೋಕೆ ಸಿಕ್ತಾರೆ.
ಸಮುದ್ರ ಸ್ನಾನದ ಮಜಾ, ಬೋಟಿಂಗ್, ಕುದುರೆ ಸವರಿ ಇಷ್ಟೆಲ್ಲ ನೋಡ ಸಿಗುತಿತ್ತು. ಆದರೆ, ಈಗ ಪಣಂಬೂರ್ ಬೀಚ್ ನಲ್ಲಿ ಆಳೆತ್ತರದ ಅಲೆಗಳ ಜತೆ ಮೈನವಿರೇಳಿಸುವಂತಹ ಮಕ್ಕಳು ಆಟವಾಡುವುದನ್ನು ಕಾಣಬಹುದು.

ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಸದಸ್ಯ ಮುಲಕ್ಕಿಯ ಧ್ರುವ ಮಕ್ಕಳಿಗೆ ಸಮುದ್ರ ಅಲೆಗಳ ಜತೆ ಆಟವಾಡುವ ಈ ಸರ್ಫಿಂಗ್ ಕಲಿಸುತ್ತಿದ್ದಾರೆ. ಪ್ರಸ್ತುತ 30 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ.
ಪಣಂಬೂರು, ಬೈಕಂಪಾಡಿ ಅನುವಾಸಿನ 7ರಿಂದ 14 ವರ್ಷದೊಳಗಿನ ಮಕ್ಕಳ ಸಮುದ್ರ ಅಲೆಗಳ ಜತೆ ಸಾಹಸ ಪ್ರದರ್ಶಿಸವ ಬಗ್ಗೆ ತರಬೇತಿ ಕೊಡಲಾಗುತ್ತದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ತರಬೇತಿ: ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ 2 ತಾಸು ಅವಧಿಯಲ್ಲಿ ತರಬೇತಿ ನಡೆಯುತ್ತಿದೆ. ಇನ್ನು ಸ್ಥಳೀಯ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಪಣಂಬೂರು ಬೀಚ್ ಅಭಿವೃದಿ ಸಮತಿ ಸಿಇಓ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.
ಪಣಂಬೂರು ಬೀಚ್ ಅಭಿವೃದಿ ಸಮತಿ ನೇತೃತ್ವದಲ್ಲಿ ದೇಶದ ಮೊದಲ ಸರ್ಫಿಂಗ್ ಕ್ಲಬ್ ಎಂಬ ಖ್ಯಾತಿಯ ಮುಲ್ಕಿಯ ಮಂತ್ರ ಸರ್ಫಿಂಗ್ ಕ್ಲಬ್ ಪ್ರೇರಣೆಯಿಂದ ಪಣಂಬೂರು ಸರ್ಫಿಂಗ್ ಕ್ಲಬ್ ಪ್ರಾರಂಭಗೊಂಡಿದೆ.

ಹತ್ತಾರು ಬೀಚ್ ಗಳಿರುವ ಮಂಗಳೂರಿನಲ್ಲಿ ಸರ್ಫಿಂಗ್ ಜನಪ್ರಿಯಗೊಳುತ್ತಿರುವ ಹೊತ್ತಿಗೆ ಮಕ್ಕಳಲ್ಲಿ ಸರ್ಫಿಂಗ್ ಬಗ್ಗೆ ಕುತೂಹಲ ಮೂಡಿಸಿ, ಅವರನ್ನು ಭವಿಷ್ಯದಲ್ಲಿ ಸರ್ಫಿಂಗ್ ಸ್ಪರ್ಧೆಗೆ ತಯಾರಿ ಮಾಡುವ ಉದ್ದೇಶದಿಂದ ಈ ಪಣಂಬೂರು ಸರ್ಫಿಂಗ್ ಕ್ಲಬ್ ಹೊಟ್ಟಿಕೊಂಡಿದೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications