ಮಂಗಳೂರು: ಅಪಘಾತದಲ್ಲಿ ಬಾಲಕ ಸಾವು, ಗುರುಪುರ ಪ್ರಕ್ಷುಬ್ದ
ಮಂಗಳೂರು, ಜೂ.5: ಇಲ್ಲಿನ ಕೈಕಂಬ ಸಮೀಪದ ಗುರುಪುರದಲ್ಲಿ ಗುರುವಾರ ಶಾಲಾ ಬಾಲಕನೊಬ್ಬನ ಸಾವಿನ ಸೂತಕ ಊರಿನ ಜನರನ್ನು ತಟ್ಟಿದ್ದಲ್ಲದೆ, ಹಲವು ಗಂಟೆಗಳ ಕಾಲ ಪ್ರತಿಭಟನೆಯ ಕಾವು ಹಬ್ಬಿತ್ತು. ರೋಹಿತ್ ಎಂಬ 6 ವರ್ಷ ವಯಸ್ಸಿನ ಹುಡುಗನೇ ಮೃತ ದುರ್ದೈವಿ. ಪೊಪಾಯಿ ಶಾಲೆಯ ಮೊದಲನೇ ತರಗತಿಯಲ್ಲಿ ಈತ ಓದುತ್ತಿದ್ದ.
ಎಂದಿನಂತೆ ರೋಹಿತ್ ನನ್ನು ಕರೆದುಕೊಂಡು ಆತನ ತಾಯಿ ಶಾಲಾ ವ್ಯಾನ್ ಗಾಗಿ ಕಾಯುತ್ತಾ ನಿಂತಿದ್ದಾರೆ. ಗುರುತಿನವರು ಯಾರೋ ಕರೆದರು ಎಂದು ತಾಯಿ ಆ ಕಡೆ ತಿರುಗಿದ ಸಂದರ್ಭದಲ್ಲಿ ವೇಗವಾಗಿ ಬಂದ ಟೆಂಪೋವೊಂದು ರೋಹಿತ್ ಗೆ ಗುದ್ದಿದೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರೋಹಿತ್ ಕಂಡು ಅವರ ತಾಯಿ ಪ್ರಜ್ಞೆ ತಪ್ಪಿದ್ದಾರೆ. ಇದೇ ಅವಕಾಶ ಬಳಸಿಕೊಂಡು ಟೆಂಪೋ ಚಾಲಕ ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಗುರುಪುರದಲ್ಲಿ ನಡೆದ ಪ್ರತಿಭಟನೆಯ ಚಿತ್ರಗಳು ಮುಂದಿವೆ ನೋಡಿ [ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು]

ಕೈಕಂಬ ಸಮೀಪದ ಗುರುಪುರದಲ್ಲಿ
ಕೈಕಂಬ ಸಮೀಪದ ಗುರುಪುರದಲ್ಲಿ ಗುರುವಾರ ಶಾಲಾ ಬಾಲಕನೊಬ್ಬನ ಸಾವಿನ ಸೂತಕ ಊರಿನ ಜನರನ್ನು ತಟ್ಟಿದ್ದಲ್ಲದೆ, ಹಲವು ಗಂಟೆಗಳ ಕಾಲ ಪ್ರತಿಭಟನೆಯ ಕಾವು ಹಬ್ಬಿತ್ತು.

ಮೊದಲನೇ ತರಗತಿ ವಿದ್ಯಾರ್ಥಿ ಮೃತ
ರೋಹಿತ್ ಎಂಬ 6 ವರ್ಷ ವಯಸ್ಸಿನ ಹುಡುಗನೇ ಮೃತ ದುರ್ದೈವಿ. ಪೊಪಾಯಿ ಶಾಲೆಯ ಮೊದಲನೇ ತರಗತಿಯಲ್ಲಿ ಈತ ಓದುತ್ತಿದ್ದ.

ತಾಯಿ ರೋದನ ಮುಗಿಲು ಮುಟ್ಟಿತ್ತು
ಸ್ಥಳೀಯರು ರೋಹಿತ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದರೆ, ಚಿಕಿತ್ಸೆ ಫಲಕಾರಿಯಾಗದೆ ರೋಹಿತ್ ಸಾವನ್ನಪ್ಪಿದ್ದಾನೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಸಂಚಾರ ಅಸ್ತವ್ಯಸ್ತಗೊಂಡಿತ್ತು
ಗುರುಪುರ, ಕೈಕಂಬ ಸುತ್ತಮುತ್ತಾ ಹಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಾಲಕ ರೋಹಿತ್ ಕಳೆದುಕೊಂಡ ತಾಯಿ ರೋದನ ಮುಗಿಲು ಮುಟ್ಟಿತ್ತು.

ಟೆಂಪೋ ಚಾಲಕ ನಾಪತ್ತೆ
ಘಟನೆಗೆ ಕಾರಣವಾದ ಟೆಂಪೋ ಚಾಲಕ ನಾಪತ್ತೆಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications