ಹಳದಿ ಜೋಡಿ ಅನಕೊಂಡಗಳ ಆಗಮನಕ್ಕೆ ಕಾದಿದೆ ಪಿಲಿಕುಳ
ಬೇಸಿಗೆ ಕಾಲದಲ್ಲಿ ಪ್ರಾಣಿಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಟ ಮಾಡುವುದು ಪ್ರಯಾಸದ ಕೆಲಸ. ಹೀಗಾಗಿ ತಾಪಮಾನದಲ್ಲಿ ಸ್ವಲ್ಪ ಇಳಿಕೆ ಕಂಡು ಬಂದರೆ ಅನಕೊಂಡಗಳನ್ನು ಪಿಲಿಕುಳಕ್ಕೆ ಕರೆತರಲಾಗುವುದು.
ಮಂಗಳೂರು, ಮೇ 8: ಅನಕೊಂಡ.. ಈ ಹೆಸರು ಕೇಳಿದೊಡನೆಯೇ ಮೈ ಝುಮ್ಮೆನ್ನುತ್ತದೆ. ದೈತ್ಯ ಅನಕೊಂಡಗಳನ್ನು ಪರದೆಯ ಮೇಲೆ ನೋಡಿದ ಹಲವಾರು ಹಾಲಿವುಡ್ ಚಿತ್ರಗಳೂ ಮನಸ್ಸಿನಲ್ಲಿ ಹಾದು ಹೋಗಬಹುದು.
ಇದೇ ಅನಕೊಂಡಗಳನ್ನು ನಗರದ ವಾಮಂಜೂರಿನಲ್ಲಿರುವ ಪಿಲಿಕುಳ ನಿಸರ್ಗಧಾಮಕ್ಕೆ ಕರೆ ತರುವ ತಯಾರಿ ನಡೆಯುತ್ತಿದೆ. ಸದ್ಯದಲ್ಲಿಯೇ ನಾಲ್ಕು ಹಳದಿ ಅನಕೊಂಡಗಳು ಇಲ್ಲಿಗೆ ಬರಲಿವೆ. ಪಿಲಿಕುಳಕ್ಕೆ ಆಗಮಿಸುವವರಿಗೆ ಇವು ಒಂದು ಹೊಸ ಆಕರ್ಷಣೆಯಾಗಲಿವೆ.[3ರಿಂದ 63ಕ್ಕೆ ಕುಸಿತ, ಸ್ವಚ್ಛತೆಯಲ್ಲಿ ಮಂಗಳೂರು ಎಡವಿದ್ದೆಲ್ಲಿ?]

ಈ ಅನಕೊಂಡಗಳನ್ನು ಚೆನ್ನೈನಲ್ಲಿರುವ ಕ್ರೊಕಡೈಲ್ ಪಾರ್ಕ್ ಅಥವಾ ಶ್ರೀಲಂಕಾದಲ್ಲಿರುವ ನ್ಯಾಷನಲ್ ಝೂಲಾಜಿಕಲ್ ಗಾರ್ಡನ್ಸ್ ನಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಂಗವಾಗಿ ಪಿಲಿಕುಳಕ್ಕೆ ತರುವ ಯೋಚನೆಯಿದೆ ಎಂದು ಪಿಲಿಕುಳ ವನ್ಯಜೀವಿಧಾಮದ ನಿರ್ದೇಶಕ ಎಚ್ ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ.[ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಎಂಎಸ್ ಕೃಷ್ಣಾಗೆ ಅವಮಾನ]
ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದಿಂದ ಅನುಮತಿ ಪಡೆದ ನಂತರ ಈ ಪ್ರಕ್ರಿಯೆ ನಡೆಯುತ್ತಿದೆ.
ಮೈಸೂರಿನ ಜಯಚಾಮರಾಜೇಂದ್ರ ಪ್ರಾಣಿಸಂಗ್ರಹಾಲಯದಲ್ಲಿ 2011ರಿಂದಲೇ ಹಸಿರು ಅನಕೊಂಡಾಗಳಿದ್ದು ಪಿಲಿಕುಳಕ್ಕೂ ಅವುಗಳು ಆಗಮಸಿದರೆ ಅನಕೊಂಡಾಗಳಿರುವ ರಾಜ್ಯದ ಎರಡನೇ ಪ್ರಾಣಿಸಂಗ್ರಹಾಲಯ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಇನ್ನು ಹಳದಿ ಅನಕೊಂಡಗಳಿರುವ ರಾಜ್ಯದ ಮೊದಲನೇ ಪ್ರಾಣಿ ಸಂಗ್ರಹಾಲಯ ಪಿಲಿಕುಳ ನಿಸರ್ಗಧಾಮವಾಗಲಿದೆ.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ












Click it and Unblock the Notifications