Get Updates
Get notified of breaking news, exclusive insights, and must-see stories!

Mangaluru blast case: ಕುಕ್ಕರ್ ಬಾಂಬ್ ಸ್ಫೋಟ ಸಂತ್ರಸ್ತನಿಗೆ ಮನೆ ನವೀಕರಿಸಿ ಯುಗಾದಿ ಗಿಫ್ಟ್‌ ನೀಡಿದ ಗುರುಬೆಳದಿಂಗಳು ಟ್ರಸ್ಟ್

ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸ್ಫೋಟದಲ್ಲಿ ಗಾಯಗೊಂಡಿದ್ದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ ಇಂದಿನ ಯುಗಾದಿ ಭರವಸೆಯ ಬೆಳಕಿನ ಆಶಾಕಿರಣ ಮೂಡಿಸಿದೆ.

ಮಂಗಳೂರು, ಮಾರ್ಚ್‌, 22: ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸ್ಫೋಟದಲ್ಲಿ ಗಾಯಗೊಂಡಿದ್ದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿಯವರಿಗೆ ಇಂದಿನ ಯುಗಾದಿ ಭರವಸೆಯ ಬೆಳಕಿನ ಆಶಾಕಿರಣ ಮೂಡಿಸಿದೆ.

ಕುಕ್ಕರ್ ಬಾಂಬ್ ಸ್ಪೋಟದಿಂದ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಅವರಿಗೆ 'ಗುರುಬೆಳದಿಂಗಳು' ಟ್ರಸ್ಟ್‌ ಆಸರೆಯಾಗಿತ್ತು. ಹಾಗೆಯೇ ಈ ಸಂಸ್ಥೆ ನೀಡಿದ ಭರವಸೆಯಂತೆ ಸುಸಜ್ಜಿತವಾಗಿ ಮನೆಯನ್ನು ನವೀಕರಣ ಮಾಡಿ ಪುರುಷೋತ್ತಮ ಅವರಿಗೆ ಹಸ್ತಾಂತರ ಮಾಡಿದೆ.

Mangaluru blast case: Gurubeladingalu Trust gave renovated house for Cooker bomb blast victim

ಪುರುಷೋತ್ತಮಗೆ ಆಸರೆಯಾದ ಟ್ರಸ್ಟ್‌
ಪುರುಷೋತ್ತಮ ಪೂಜಾರಿಯವರಿಗೆ ಕುಕ್ಕರ್ ಬಾಂಬ್ ಸ್ಫೋಟದಿಂದ ಆದ ಗಾಯದ ನೋವು ಒಂದೆಡೆಯಾದರೆ, ಮತ್ತೊಂದೆಡೆ ನಿಶ್ಚಿತಾರ್ಥಗೊಂಡ ಪುತ್ರಿಯ ವಿವಾಹ, ಮನೆ ನವೀಕರಣ ಚಿಂತೆಯೂ ತೀವ್ರವಾಗಿ ಕಾಡುತ್ತಿತ್ತು. ಸರ್ಕಾರ ಆಸ್ಪತ್ರೆಯ ಖರ್ಚುವೆಚ್ಚವನ್ನು ಭರಿಸುವ ಭರವಸೆ ನೀಡಿತ್ತು. ಆದರೆ ಸಚಿವರಿಬ್ಬರು ವೈಯುಕ್ತಿಕ ನೆಲೆಯಲ್ಲಿ ಹಣ ನೀಡಿದ್ದು, ಶಾಸಕ ವೇದವ್ಯಾಸ ಕಾಮತ್ ಅವರು ಆಟೋರಿಕ್ಷಾ ನೀಡಿದ್ದು ಬಿಟ್ಟರೆ ಈವರೆಗೆ ಸರ್ಕಾರದಿಂದ ಯಾವ ಪರಿಹಾರವೂ ದೊರಕಿಲ್ಲ. ಪುತ್ರಿಯ ಮದುವೆ, ಮನೆ ನವೀಕರಣ ವಿಚಾರದಲ್ಲಿ ಪುರುಷೋತ್ತಮ ತೀವ್ರ ಚಿಂತೆಗೊಳಗಾಗಿದ್ದರು.

ಮನೆ ನವೀಕರಣಗೊಳಿಸಿದ ಟ್ರಸ್ಟ್‌
ನಂತರ ಪುರುಷೋತ್ತಮ ಪೂಜಾರಿಯವರನ್ನು ಗುರುಬೆಳದಿಂಗಳು ಟ್ರಸ್ಟ್ ಕೈಹಿಡಿಯಿತು. ಈ ಟ್ರಸ್ಟ್‌ ಅಧ್ಯಕ್ಷ ಪದ್ಮರಾಜ್ ಆರ್. ಭರವಸೆಯ ಮಾತಿನಿಂದ ಪುರುಷೋತ್ತಮ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡರು. ಡಿಸೆಂಬರ್ ವೇಳೆಗೆ ಗುರುಬೆಳದಿಂಗಳು ಟ್ರಸ್ಟ್ ನೀಡಿದ ಭರವಸೆಯಂತೆ ಸುಮಾರು ಎರಡೂವರೆ ತಿಂಗಳಲ್ಲಿ ಮನೆಯನ್ನು ಸುಸಜ್ಜಿತವಾಗಿ ನವೀಕರಣಗೊಳಿಸಿದೆ.‌

ಹಾಗೆಯೇ ಇಂದು ಮನೆಯ ಹಸ್ತಾಂತರ ಕಾರ್ಯ ನಡೆದಿದೆ. ಅಲ್ಲದೆ ಮೇ 3ರಂದು ನಡೆಯುವ ಪುರುಷೋತ್ತಮ ಪೂಜಾರಿಯವರ ಪುತ್ರಿಯ ವಿವಾಹವನ್ನು ಮುಂದೆ ನಿಂತು ನೆರವೇರಿಸುವುದಾಗಿ ಪದ್ಮರಾಜ್ ಆರ್. ಭರವಸೆ ನೀಡಿದ್ದಾರೆ. ಇದು ಪುರುಷೋತ್ತಮ ಪೂಜಾರಿಯವರ ಬಾಳಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ.

ಕುಕ್ಕರ್ ಬಾಂಬ್ ಸ್ಫೋಟದಿಂದ ನೊಂದಿದ್ದ ಪುರುಷೋತ್ತಮ ಪೂಜಾರಿಗೆ ಬದುಕುವ ಭರವಸೆಯೇ ಇರಲಿಲ್ಲ. ಸಚಿವರು, ಶಾಸಕರು ಪರಿಹಾರದ ಭರವಸೆಯನ್ನು ನೀಡಿದ್ದರು. ಆದರೆ ಅವರ ಜೊತೆಗೆ ಗಟ್ಟಿಯಾಗಿ ನಿಂತಿದ್ದು ಬಿಲ್ಲವ ಮುಖಂಡರ ನೇತೃತ್ವದ ಗುರು ಬೆಳದಿಂಗಳು ಫೌಂಡೇಶನ್.

ಮಗಳ ಮದುವೆ ಮತ್ತು ಬೀಳುವ ಸ್ಥಿತಿಯಲ್ಲಿದ್ದ ಹಳೆ ಮನೆಯ ಕುರಿತು ಚಿಂತಿಸುತ್ತಾ ಪುರುಷೋತ್ತಮ ಪೂಜಾರಿ ಕುಸಿದು ಹೋಗಿದ್ದರು. ಆದರೆ, ನಾಲ್ಕೇ ತಿಂಗಳಲ್ಲಿ ಈ ಫೌಂಡೇಶನ್ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು ನವೀಕರಣಗೊಳಿಸಿದೆ. ಯುಗಾದಿಯ ದಿನದಂದೇ ಪುರುಷೋತ್ತಮ ಪೂಜಾರಿಗೆ ಹೊಸ ಮನೆಯನ್ನು ಹಸ್ತಾಂತರಿಸಿದ್ದಾರೆ.

Mangaluru blast case: Gurubeladingalu Trust gave renovated house for Cooker bomb blast victim

ಸರ್ಕಾರದಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ
ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಚರ್ಚ್ ಧರ್ಮಗುರು ನೇತೃತ್ವದಲ್ಲಿ ಮನೆಯನ್ನು ಗುರು ಬೆಳದಿಂಗಳು ಹೆಸರಲ್ಲಿಯೇ ಅನಾವರಣ ಮಾಡಲಾಗಿದೆ. ಸರಳ ಕಾರ್ಯಕ್ರಮದಲ್ಲಿ ಪುರುಷೋತ್ತಮ ಪೂಜಾರಿಗೆ ಮನೆ ಹಸ್ತಾಂತರಗೊಂಡಿದೆ. ಚಿಕಿತ್ಸಾ ವೆಚ್ಚ ಎಂಟು ಲಕ್ಷ ರೂಪಾಯಿ ಆಗಿದ್ದು, ಅದನ್ನು ಮಗಳ ಇಎಸ್ಐ ಸೌಲಭ್ಯದಿಂದ ಭರಿಸಲಾಗಿದೆ. ಬಾಂಬ್ ಸ್ಫೋಟ ಸಂದರ್ಭದಲ್ಲಿ ಸರ್ಕಾರ ಪರಿಹಾರದ ಭರವಸೆ ನೀಡಿತ್ತು. ಆದರೆ ಈವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಪುರುಷೋತ್ತಮ ಪೂಜಾರಿ ಅಳಲು ತೋಡಿಕೊಂಡರು.

ಪದ್ಮರಾಜ್ ರಾಮಯ್ಯ ಹೇಳಿದ್ದೇನು?
ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ರಾಮಯ್ಯ ಅವರು ಕುಸಿಯುವ ಹಂತದಲ್ಲಿದ್ದ ಪುರುಷೋತ್ತಮ ಅವರ ಮನೆಯನ್ನು ನವೀಕರಣಗೊಳಿಸಲು ಮುಂದಾಗಿದ್ದರು. ಕಳೆದ ಮೂರು ವರ್ಷಗಳಿಂದ ಟ್ರಸ್ಟ್ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿರುವ ಪದ್ಮರಾಜ್ ಅವರ ಈ ಕಾರ್ಯವು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಮೂರು ವರ್ಷದ ಹಿಂದೆ ಯುಗಾದಿಯಂದೇ ಸ್ಥಾಪನೆಯಾದ ಈ ಫೌಂಡೇಶನ್, ಇಂದು ಯುಗಾದಿಯಂದೇ ಮನೆ ಹಸ್ತಾಂತರಿಸಿದೆ. ಇದೇ ವೇಳೆ ಐದು ತಿಂಗಳು ಕಳೆದರೂ ಬಾಂಬ್ ಸ್ಫೋಟದ ಸಂತ್ರಸ್ತನಿಗೆ ಪರಿಹಾರ ಸಿಗದೇ ಇರುವುದನ್ನು ಖಂಡಿಸಿದ್ದಾರೆ.

ಒಟ್ಟಿನಲ್ಲಿ ಒಂದೆಡೆ ಯುಗಾದಿ ದಿನದಂದೇ ಮನೆಯನ್ನು ನವೀಕರಣಗೊಳಿಸಿ ಹಸ್ತಾಂತರ ಮಾಡಿದರೆ, ಸಂತ್ರಸ್ತನಿಗೆ ಪರಿಹಾರ ಸಿಕ್ಕಿಲ್ಲ ಎಂಬ ಕೊರಗು ಎದ್ದಿರುವುದು ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರದ ಕಿವಿ ಹಿಂಡಿದಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+