'ಮಾಜಿ ಸಚಿವ ರಮಾನಾಥ್ ರೈಗೇಕೆ ಪೊಲೀಸ್ ಎಸ್ಕಾರ್ಟ್?'
ಮಂಗಳೂರು, ಸೆಪ್ಟೆಂಬರ್. 19: "ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ" ಅನ್ನೋ ನುಡಿಗಟ್ಟು ನಮ್ಮ ಮಾಜಿ ಸಚಿವರಾದ ಬಿ ರಮಾನಾಥ್ ರೈ ಅವರಿಗೆ ಸರಿಯಾಗಿ ಹೊಂದುತ್ತದೆ. ಯಾಕಂದ್ರೆ ಅವರು ಮಾಜಿ ಅದರೂ ಇಂದಿಗೂ ಸಚಿವರಾಗಿದ್ದ ಗತ್ತಿನ ಗುಂಗಿನಿಂದ ಹೊರಬಂದಿಲ್ಲ.
ಈ ಹಿಂದೆ ತಮಗೆ ನೀಡಲಾಗಿದ್ದ ಪೊಲೀಸ್ ಸವಲತ್ತುಗಳನ್ನು ಅರ್ಹತೆ ಇಲ್ಲದಿದ್ದರೂ ಬಳಸಿಕೊಳ್ಳುತ್ತಿದ್ದಾರೆ. ಸರಕಾರದ ಕೆಲವೊಂದು ಸವಲತ್ತುಗಳನ್ನು ರಾಜಕಾರಣಿಗಳು ದುರುಪಯೋಗ ಪಡಿಸಿಕೊಂಡಿರುವ ಹಲವಾರು ನಿದರ್ಶನಗಳು ನಮ್ಮ ಮುಂದಿವೆ.
ಕೆಲವರಿಗೆ ಗೂಟದ ಕಾರಿನಲ್ಲಿ ತಿರುಗುವ ಹುಚ್ಚು, ಕೆಲವರಿಗೆ ಕೆಂಪು ದೀಪದ ಕಾರಿನ ಗಮ್ಮತ್ತು. ಇನ್ನೂ ಕೆಲವರಿಗೆ ತಾವು ಮಾಜಿ ಅದರೂ ಹಿಂದೆ ಮುಂದೆ ಪೊಲೀಸರು ಇರಲೇಬೇಕೆಂಬ ಖಯಾಲಿ. ಇದಕ್ಕೆ ಸ್ಪಷ್ಟ ನಿದರ್ಶನ ಮಾಜಿ ಸಚಿವ ಹಾಗು ಮಾಜಿ ಶಾಸಕ ರಮಾನಾಥ್ ರೈ.

ತಮ್ಮ ಬಳಿ ಅಧಿಕಾರವಿದ್ದಾಗ ಸರಕಾರದ ಸೌಲಭ್ಯಗಳನ್ನು ಪಡೆದರೆ ಅದನ್ನು ಪ್ರಶ್ನಿಸೋದು ಅಭಾಸವಾಗುತ್ತದೆ. ಆದರೆ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಸರಕಾರದ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಏನೆನ್ನಬೇಕು?
ಬಿ. ರಮಾನಾಥ ರೈ ಅವರ ನಡೆಯ ಬಗ್ಗೆ ಈಗ ಪ್ರಶ್ನೆ ಎತ್ತಲಾಗುತ್ತಿದೆ. ಒರ್ವ ಮಾಜಿ ಶಾಸಕರಾಗಿದ್ದರೂ ಅವರು ಇಂದಿಗೂ ಸರಕಾರದ ಹಲವು ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇಂದಿಗೂ ಅವರು ಸುತ್ತುವುದು ಪೊಲೀಸ್ ಎಸ್ಕಾರ್ಟ್ ಸೌಲಭ್ಯದೊಂದಿಗೆ. ಮಾಜಿ ಆದ ಮೇಲೂ ಈ ಎಸ್ಕಾರ್ಟ್ ಸೌಲಭ್ಯ ಬಳಸಿಕೊಳ್ಳುತ್ತಿರೋದು ರಮಾನಾಥ ರೈ ಮಾತ್ರ ಎಂದು ಹೇಳಲಾಗಿದೆ. ಅದಲ್ಲದೇ ರಮಾನಾಥ್ ರೈ ಅವರ ಮನೆ ಭದ್ರತೆಗೂ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.
ಅಷ್ಟೇ ಅಲ್ಲ, ಒಬ್ಬ ಪೊಲೀಸ್ ಗನ್ ಮ್ಯಾನ್ ನನ್ನು ಹೊಂದಿದ್ದಾರೆ. ಈ ಎಲ್ಲಾ ಸೌಲಭ್ಯಗಳು ಸಚಿವರಾಗಿದ್ದಾಗ ಪೊಲೀಸ್ ಇಲಾಖೆ ಒದಗಿಸಿತ್ತು. ಆದರೆ ರೈ ಮಾಜಿ ಆದಾಗಲೂ ಈ ಸೌಲಭ್ಯ ಬಳಸಿಕೊಳ್ಳುತ್ತಿರುವುದಾದರೂ ಏಕೆ ? ಎಂಬ ಪ್ರಶ್ನೆ ಮೂಡಲಾರಂಭಿಸಿದೆ.
ಜೀವ ಬೆದರಿಕೆ ಇರುವ ರಾಜಕೀಯ ಮುಖಂಡರಿಗೆ ಮಾತ್ರ ನಿಯಮದ ಪ್ರಕಾರ ಇಂತಹ ಭದ್ರತೆಯನ್ನು ನೀಡಲು ಅವಕಾಶಗಳಿವೆ. ರಮಾನಾಥ ರೈ ಎಲ್ಲರೊಂದಿಗೂ ಬೆರೆಯುವ ರಾಜಕಾರಣಿ . ಅವರಿಗೆ ಜೀವ ಬೆದರಿಕೆ ಇರುವ ಬಗ್ಗೆ ಈವರೆಗೆ ಯಾವುದೇ ಘಟನೆಗಳು ವರದಿಯಾಗಿಲ್ಲ.
ಅದಲ್ಲದೇ ಈ ಹಿಂದೆ ಅವರ ಮನೆಗೆ ಮುತ್ತಿಗೆ ಹಾಕಿದ ಯಾವುದೇ ಘಟನೆ ಬಂಟ್ವಾಳದಲ್ಲಿ ನಡೆದಿಲ್ಲ. ಯಾರೊಂದಿಗೂ ದ್ವೇಷ ಕಟ್ಟಿಕೊಂಡಿಲ್ಲ.
ರಮಾನಾಥ ರೈ ಪಾಲ್ಗೊಳ್ಳುವ ಮದುವೆ, ಮುಂಜಿ, ಸಭೆ ಸಮಾರಂಭ ಸೇರಿದಂತೆ ಮೊನ್ನೆ ಮೊನ್ನೆ ನಡೆದ ಭಾರತ್ ಬಂದ್ ಸಂದರ್ಭದಲ್ಲೂ ಈ ಪೋಲೀಸರು ರಮಾನಾಥ ರೈ ಅವರನ್ನು ಹಿಂಬಾಲಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 8 ಶಾಸಕರಿದ್ದು, ಇವರಲ್ಲಿ ಉಳ್ಳಾಲ ಶಾಸಕ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಹೊರತುಪಡಿಸಿ ಯಾರೊಬ್ಬರಿಗೂ ಗನ್ ಮ್ಯಾನ್ ಗಳಿಲ್ಲ.
ಅಲ್ಲದೆ, ಈ ಹಿಂದೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮೊಯಿದೀನ್ ಬಾವಾ ಕೂಡಾ ತಮಗೆ ಗನ್ ಮ್ಯಾನ್ ನೀಡಬೇಕೆಂಬ ಬೇಡಿಕೆ ಪೋಲೀಸರ ಮುಂದೆ ಇಟ್ಟ ಸಂದರ್ಭದಲ್ಲಿ ಯಾವುದೇ ಬೆದರಿಕೆ ಇಲ್ಲದ ಹಿನ್ನೆಲೆಯಲ್ಲಿ ಗನ್ ಮ್ಯಾನ್ ಸೌಲಭ್ಯವನ್ನು ಪೊಲೀಸ್ ಇಲಾಖೆ ನೀಡಿರಲಿಲ್ಲ.
ಆದರೆ ರಮಾನಾಥ ರೈಯವರಿಗೆ ಯಾವುದೇ ಬೆದರಿಕೆಯೂ ಇಲ್ಲದೇ ಇದ್ದರೂ, ಪೋಲೀಸ್ ಎಸ್ಕಾರ್ಟ್ ಜೊತೆಗೆ ಇಷ್ಟೊಂದು ಪೊಲೀಸರನ್ನು ನೀಡಿರುವುದರ ಹಿಂದಿನ ಮರ್ಮವೇನು ಎನ್ನುವುದು ಸ್ಪಷ್ಟವಾಗಬೇಕಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭದ್ರತೆಗೆ ಪೋಲೀಸ ಕೊರತೆ ಇಲಾಖೆಯನ್ನು ಕಾಡುತ್ತಿದೆ. ಈ ಕಾರಣ ಗೃಹ ರಕ್ಷಕದಳದ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತದೆ. ಪೊಲೀಸರ ಕೊರತೆ ಕಾಡುತ್ತಿದ್ದರೂ ರೈ ಅವರಿಗೆ ಎಸ್ಕಾರ್ಟ್ ನೀಡಿ ಭದ್ರತೆಗೆ ಪೊಲೀಸರನ್ನು ನೇಮಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳ ನಡೆಯ ಬಗ್ಗೆ ಈಗ ಪ್ರಶ್ನೆ ಎತ್ತಲಾಗುತ್ತಿದೆ.
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications