ಮರೆಯಾಗಿದ್ದ ಗೋಲಿ ಸೋಡಾ ಲಕ್ಷದೀಪೊತ್ಸವದಲ್ಲಿ ಪ್ರತ್ಯಕ್ಷ
ಸೋಡಾ ಹೆಸರು ಕೇಳಿದಾಗ ನೆನಪಾಗೋದು ಗೋಲಿ ಸೋಡಾ ಒಂದೇ. ಆ ಗೋಲಿ ಸೋಡಾವನ್ನು ತೆರೆಯುವುದೇ ಒಂದು ಮಜಾ. ಈಗಲೂ ಗೋಲಿ ಸೋಡಾ ತೆರೆಯುವುದು ಒಂದು ಟ್ರೆಂಡ್ ಆಗಿ ಉಳಿದುಕೊಂಡಿದೆ.ಆದರೆ ಈಗ ಅದೊಂದು ಕಲ್ಪನೆ ಮಾತ್ರ.
ಈಗಿನವರಿಗೆ ಈ ಗೊಲಿ ಸೋಡಾ ಯಾವ ಅಂಗಡಿಯಲ್ಲಿ ಕೇಳಿದರು ಸಿಗುವುದಿಲ್ಲ. ಇದು ಅಪರೂಪದ ಪಾನೀಯವಾಗಿ ಬಿಟ್ಟಿದೆ. ಈಗಿನ ಹೊಸ ರೆಡಿಮೆಡ್ ಸೋಡಾಗಳ ನಡುವಿನಲ್ಲಿ ಗೋಲಿ ಸೋಡ ಮರೆಯಾಗಿಬಿಟ್ಟಿತ್ತು. [ಗ್ಯಾಲರಿ: ಕಾರ್ತೀಕ ದೀಪದ ಬೆಳಕಲ್ಲಿ ಮಿಂದೆದ್ದ ಧರ್ಮಸ್ಥಳ]
ಹೆಚ್ಚಿನವರಿಗೆ ಅದರ ಬಗ್ಗೆ ಗೊತ್ತಿಲ್ಲದೇ ಇರುವುದರಿಂದ ಹಾಗೂ ಅದರ ಮಾರುಕಟ್ಟೆಯೂ ಮರೆಯಾಗಿರುವುದರಿಂದ ಗೋಲಿ ಸೋಡಾದ ಹೆಸರೇ ಗೊತ್ತಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಆಗಿ ಬಿಟ್ಟಿದೆ. [ಲಕ್ಷದೀಪೋತ್ಸವ: ಧರ್ಮಸ್ಥಳಕ್ಕೆ ಭಕ್ತರಿಂದ ಪಾದಯಾತ್ರೆ]
ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ನೀವು ಇನ್ನೊಮ್ಮೆ ಗೋಲಿ ಸೋಡಾದ ಆ ರುಚಿಯನ್ನು ಆಸ್ವಾದಿಸಬಹುದು. ಪರಮೇಶ್ವರ್ ಮತ್ತು ವಿಮಲಾ ದಂಪತಿ ಜನರಿಗೆ ಪುನಃ ಗೋಲಿ ಸೋಡಾದ ನೆನಪನ್ನು ತರುತ್ತಿದ್ದಾರೆ. [ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಕೆರೆಕಟ್ಟೆ ಉತ್ಸವ]
ದೇವಸ್ಥಾನದ ಎದುರಿನ ದಾರಿಯಲ್ಲಿ ನೇರ ಮುಂದಕ್ಕೆ ಕೊನೆಯಲ್ಲಿ ಇವರ ಗೋಲಿ ಸೋಡಾದ ಒಂದು ಚಿಕ್ಕ ಮಳಿಗೆ ಇದೆ. ಪ್ರತಿ ವರ್ಷವೂ ಗೋಲಿ ಸೋಡಾದ ಮಳಿಗೆ ಹಾಕುವ ಇವರು ತುಂಬಾ ಸಮಯಗಳಿಂದ ವ್ಯಾಪಾರ ಮಾಡುತ್ತಿದ್ದಾರೆ. [ತಮಿಳುನಾಡಿನ ನಷ್ಟ, ಕರ್ನಾಟಕದ ಲಾಭ, ಏನಿದು ಬಿಜಿನೆಸ್?]
ವ್ಯಾಪಾರದ ಬಗ್ಗೆ ವಿಮಲಾ ಅವರ ಮಕ್ಕಳಿಗೂ ಖುಷಿ ಇದೆ. ಸೋಡಾ ಬಾಟಲಿಗೆ ತುಂಬಿಸುವುದು ಹಾಗೂ ಅದನ್ನು ತೆರೆಯುವ ಬಗ್ಗೆ ಮಕ್ಕಳು ಕಲಿತುಕೊಂಡಿದ್ದಾರೆ. ಮಕ್ಕಳು ಶಾಲೆಗೆ ಹೋಗುತ್ತಿದ್ದರೂ ಲಕ್ಷದೀಪದ ಸಂಧರ್ಭದಲ್ಲಿ ಹೆತ್ತವರಿಗೆ ಸಹಾಯ ಮಾಡುತ್ತಿದ್ದಾರೆ.

ಗೋಲಿ ಸೋಡಾ: ಖರ್ಚು ಕಡಿಮೆ ಲಾಭವೂ ಹೆಚ್ಚು
ವಿಮಲಾ ಹಾಗೂ ಪರಮೇಶ್ವರ್ ಅವರ ಸ್ವಂತ ಉದ್ಯಮವಾದ ಇದನ್ನು ಲಕ್ಷದೀಪೋತ್ಸವದ ಸಂಧರ್ಭದಲ್ಲಿ ಮಾತ್ರ ವ್ಯಾಪಾರ ಮಾಡುತ್ತಾರೆ. ಈ ಸೋಡಾ ಬಾಟಲಿಗೆ ಸೋಡಾ ಹಾಕುವ ಯಂತ್ರವು ಇವರಲ್ಲಿಯೇ ಇರುವುದರಿಂದ ಇವರಿಗೆ ಖರ್ಚು ಕಡಿಮೆ ಲಾಭವೂ ಹೆಚ್ಚು.

ಸೋಡಾವನ್ನು ತುಂಬಿಸುವುದು ಅಪಾಯದ ಕೆಲಸ
ಈ ಗೋಲಿ ಸೋಡಾದಲ್ಲಿ ಅಪಾಯವೂ ಇರುವುದರಿಂದ ಇದರ ಬೇಡಿಕೆ ಕಡಿಮೆಯಾಗಿತ್ತು ಆದರೆ ಪರಮೇಶ್ವರ್ ಪ್ರಕಾರ "ಬಾಟಲಿಗೆ ಸೋಡಾವನ್ನು ತುಂಬಿಸುವುದರ ಮೇಲೆ ಅಪಾಯವನ್ನು ಪರಿಗಣಿಸಬಹುದಷ್ಟೇ. ಅದಕ್ಕೆ ಇಂತಿಷ್ಟೇ ಸೋಡಾವನ್ನುವನ್ನು ತುಂಬಿಸಬೇಕೆಂಬ ನಿಯಮವಿದೆ ಅಷ್ಟನ್ನು ಮಾತ್ರವೇ ತುಂಬಿಸಬೇಕು ಅದಕ್ಕಿಂತ ಹೆಚ್ಚಾದರಷ್ಟೇ ಬಾಟಲಿ ಒಡೆಯುವ ಸಂದರ್ಭವಿರುತ್ತದೆ. ಹಾಗು ಸೋಡಾ ಬಾಟಲಿಯನ್ನು ತೆರೆಯುವಾಗಲೂ ಅಷ್ಟೇ ಅಪಾಯವೇನು ಇರುವುದಿಲ್ಲ

ಗೋಲಿಸೋಡಾದಲ್ಲಿ ಹಲವಾರು ವೆರೈಟಿಗಳಿವೆ
ಗೋಲಿಸೋಡಾದಲ್ಲಿ ಹಲವಾರು ವೆರೈಟಿಗಳಿವೆ ಆರೆಂಜ್, ಪೈನಾಪಲ್, ಲಿಂಬೂ, ಸಿಹಿ ಹೀಗೆ ಹಲವಾರು ವೆರೈಟಿಗಳಲ್ಲಿ ದೊರಕುತ್ತದೆ.ಆರೋಗ್ಯದ ಮೇಲೆ ಇದು ಯಾವುದೇ ದುಷ್ಪರಿಣಾಮಗಳನ್ನು ಬೀರುವುದಿಲ್ಲ ಎಂದು ಪರಮೇಶ್ವರ್ ಹೇಳುತ್ತಾರೆ

ಆರೋಗ್ಯವರ್ಧಕ ಪಾನೀಯ
ಪಿತ್ತ, ಅಜೀರ್ಣ, ಗ್ಯಾಸ್ ಟ್ರಬಲ್ ನಂಥ ಎಲ್ಲಾ ಸಮಸ್ಯೆಗಳಿಗೂ ಇದು ರಾಮಬಾಣ. ಜನರಿಗೆ ಇದರ ಬಾಟಲ್ ಹಾಗು ಇದೊಂದು ಬ್ರಾಂಡೆಡ್ ಸೋಡಾ ಅಲ್ಲ ಎಂಬಂತಹ ಅಭಿಪ್ರಾಯ ಇರುವುದರಿಂದ ಈಗ ಬೇಡಿಕೆ ಕಡಿಮೆಯಾಗಿದೆ.

ಹೆಗ್ಗಡೆಯವರ ಅಣತಿಯಂತೆ ಮಳಿಗೆ ಹಾಕಿದೆವು
ಧರ್ಮಸ್ಥಳದ ಹೆಗ್ಗಡೆಯವರೇ ಈ ಮಳಿಗೆಯನ್ನು ಲಕ್ಷದೀಪದಲ್ಲಿ ಹಾಕಬೇಕೆಂದು ಹೇಳಿದ್ದರೆ.ಹಾಗು ಸ್ವತಃ ಅವರೇ ಗೋಲಿ ಸೋಡಾವನ್ನು ನಮ್ಮಲ್ಲಿಂದ ತರಿಸಿ ಗೋಲಿ ಸೋಡಾ ಕುಡಿಯುತ್ತಾರೆ ಎನ್ನುತ್ತಾರೆ ಪರಮೇಶ್ವರ್ ದಂಪತಿ.
ಗೋಲಿ ಸೋಡಾವನ್ನು ನೋಡದವರು, ಸೇವಿಸದವರು, ಹಾಗು ಇದರ ಬಗ್ಗೆ ತಿಳಿಯದವರಿಗೆ ಲಕ್ಷದೀಪೋತ್ಸವ ಒಂದು ಒಳ್ಳೆಯ ಅವಕಾಶ ಎನ್ನಬಹುದು.-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications