Get Updates
Get notified of breaking news, exclusive insights, and must-see stories!

ಯೋಧ ಗುರು ಕುಟುಂಬಕ್ಕೆ ಅರ್ಧ ಎಕರೆ ಜಮೀನು ಕೊಟ್ಟ ಸುಮಲತಾ ಅಂಬರೀಶ್‌

ಮಂಡ್ಯ, ಫೆಬ್ರವರಿ 16: ಊರಿನಲ್ಲಿ ಸ್ವಂತ ಜಮೀನು ಇಲ್ಲದೆ ಹುತಾತ್ಮ ಯೋಧ ಗುರು ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಎಲ್ಲಿ ನಡೆಸುವುದು ಎಂದು ಗೊಂದಲದಲ್ಲಿದ್ದ ಕುಟುಂಬ ಹಾಗೂ ಜಿಲ್ಲಾಡಳಿತಕ್ಕೆ ಸುಮಲತಾ ಅಂಬರೀಶ್‌ ನೆರವಿನ ಹಸ್ತ ಚಾಚಿದ್ದಾರೆ.

ಅಂತ್ಯ ಸಂಸ್ಕಾರ ಸ್ಥಳಕ್ಕೆಂದು ಒದ್ದಾಡುತ್ತಿದ್ದ ಕುಟುಂಬಕ್ಕೆ ಸುಮಲತಾ ಅಂಬರೀಶ್‌ ಅವರು ಅರ್ಧ ಎಕರೆ ಜಮೀನನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂಬರೀಶ್, ಸುಮಲತಾ ಅಂಬರೀಶ್ ಮತ್ತು ಮಗ ಅಮರ್ ವತಿಯಿಂದ ಈ ನಿರ್ಣಯ ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೆ ಗೊಂದಲದಲ್ಲಿದ್ದಾಗ ಸುಮಲತಾ ಅವರು ಈ ನಿರ್ಣಯ ಪ್ರಕಟಿಸಿದ್ದರು. ಆದರೆ ನಂತರ ಯೋಧ ಗುರು ಅವರ ಅಂತ್ಯಸರ್ಕಾರವನ್ನು ಸರ್ಕಾರಿ ಜಮೀನಿನಲ್ಲಿ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಆದರೂ ತಮ್ಮ ನಿರ್ಣಯದಿಂದ ಹಿಂದೆ ಸರಿಯದ ಸುಮಲತಾ ಅವರು ಆ ಅರ್ಧ ಎಕರೆ ಜಮೀನು ಯೋಧನ ಕುಟುಂಬಕ್ಕೆ ಮೀಸಲು ಎಂದು ಘೋಷಿಸಿದ್ದಾರೆ.

Sumalatha Ambareesh gave half acer land to martyr soldier Guru

ಅಂಬರೀಶ್ ಅವರ ಹುಟ್ಟೂರಾದ ದೊಡ್ಡರಸಿನಕೆರೆಯಲ್ಲಿ ಇರುವ ಜಮೀನಿನಲ್ಲಿ ಅರ್ಧ ಎಕರೆ ಜಮೀನನ್ನು ಯೋಧ ಗುರು ಅವರ ಕುಟುಂಬಕ್ಕೆ ನೀಡಲಾಗುತ್ತಿದೆ. ಮಂಡ್ಯದ ಸೊಸೆಯಾಗಿ ಇದು ನನ್ನ ಕರ್ತವ್ಯ ಎಂದು ಸುಮಲತಾ ಅವರು ನುಡಿದಿದ್ದಾರೆ.

ಪ್ರಸ್ತುತ ಶೂಟಿಂಗ್‌ ನಿಮಿತ್ತ ಎಂದು ಮಲೇಷ್ಯಾದಲ್ಲಿ ಇದ್ದೇನೆ ಆದಷ್ಟು ಬೇಗ ಮಂಡ್ಯಕ್ಕೆ ವಾಪಸ್ಸಾಗುತ್ತೇನೆ, ಬಂದ ಕೂಡಲೇ ಅರ್ಧ ಎಕರೆ ಜಮೀನನ್ನು ಯೋಧ ಗುರು ಅವರ ಕುಟುಂಬಕ್ಕೆ ರಿಜಿಸ್ಟರ್ ಮಾಡಿಕೊಡುತ್ತೇನೆ ಎಂದು ಸುಮಲತಾ ಅವರು ಹೇಳಿದ್ದಾರೆ.

ಅಂಬರೀಶ್‌ ಅವರು ಸಹ ಮಂಡ್ಯದ ಕರ್ಣ ಎಂದು ಹೆಸರುವಾಸಿಯಾಗಿದ್ದರು. ಇಂತಹಾ ಸಂದರ್ಭ ಎದುರಾದಾಗ ತಮ್ಮ ವಿಶಾಲ ಹೃದಯದ ಪ್ರದರ್ಶನ ಮಾಡುತ್ತಿದ್ದರು. ಇಂದು ಸುಮಲತಾ ಅವರು ಮಾಡಿದ ಕಾರ್ಯವೂ ಸಹ ಅಂಬರೀಶ್‌ ಅವರನ್ನೇ ನೆನಪಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+