ನಾಗಮಂಗಲದಲ್ಲಿ ನ.25ರಿಂದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ: ಇಲ್ಲಿದೆ ಸಂಪೂರ್ಣ ವಿವರ
ಮಂಡ್ಯ, ನವೆಂಬರ್ 22: ಮಂಡ್ಯ ಜಿಲ್ಲೆಯ ನಾಗಮಂಗಲದ ಕನ್ನಡ ಸಂಘವು ಪ್ರತಿ ವರ್ಷದಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ ಆಚರಿಸುತ್ತಿದ್ದು ಬೆಳಕಿನ ಮಾಸದಲ್ಲಿ ನಾಟಕೋತ್ಸವ ರಂಗಸಜ್ಜಿಕೆಯು ಕನ್ನಡ ಸಂಘ ಆಯೋಜನೆ ಮಾಡಲಾಗುತ್ತಿದೆ. ನವಂಬರ್ 25 ರಿಂದ ಡಿಸೆಂಬರ್ 1ರವರೆಗೆ ನಾಗರಂಗ ನಾಟಕೋತ್ಸವ ನಡೆಯಲಿದ್ದು, ಬೆಂಗಳೂರು, ಮೈಸೂರು ಹಾಗೂ ಇತರ ಜಿಲ್ಲೆಗಳಲ್ಲಿ ಬೇರೆ ಬೇರೆ ಕಲಾತಂಡಗಳಿಂದ ನಾಟಕಗಳ ಪ್ರದರ್ಶನ ನಡೆಯಲಿದೆ.
ನಾಟಕೋತ್ಸವಕ್ಕೆ ನವಂಬರ್ 25 ರಿಂದ ವಿದ್ಯುಕ್ತ ಚಾಲನೆ ದೊರೆಯಲಿದ್ದು, ನಾಗಮಂಗಲದ ಸರ್ಕಾರಿ ಜೂನಿಯರ್ ಕಾಲೇಜು ಒಳಾಂಗಣದಲ್ಲಿ, ವೇದಿಕೆಯನ್ನು ಕನ್ನಡದ ಚಿತ್ರರಂಗದ ನಾಯಕ ನಟಿ ದಿವಂಗತ ಲೀಲಾವತಿಯವರ ಹೆಸರಿನ ವೇದಿಕೆಯ ಮುಖಾಂತರ, ಈ ನಾಟಕೋತ್ಸವ ಆರಂಭಗೊಳ್ಳಲಿದೆ.

ನಾಗಮಂಗಲ ತಾಲೂಕಿನ ಕಲೆಯ ತವರೂರಾಗಿ ಸಾಹಿತ್ಯ ಶೈಕ್ಷಣಿಕ ಧಾರ್ಮಿಕ ಕಲಾ ಸಾಂಸ್ಕೃತಿಕ ಕಲಾ ಪರಂಪರೆಯ ರಂಗಭೂಮಿಯ ಒಡಲಾಗಿರುವ ನಾಗಮಂಗಲ ರಾಜ್ಯ ರಾಷ್ಟ್ರಮಟ್ಟದಲ್ಲೂ ಕೀರ್ತಿಗಳಿಸಿದೆ. ಈ ನೆಲದಲ್ಲಿ ತನ್ನದೇ ಆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಇಲ್ಲಿ ಹಲವು ವರ್ಷಗಳಿಂದ ಕನ್ನಡ ಸಂಘದ ರಂಗ ಪರಂಪರೆಯು ನಾಟಕೋತ್ಸವದ ಹೆಜ್ಜೆ ಹಾಕುತಾ ಬರಲಾಗುತ್ತಿದೆ.
ಈ ಬಾರಿಯ ನಾಟಕೋತ್ಸವದಲ್ಲಿ ನವಂಬರ್ 25 ನಂಗ್ಯಾಕೋ ಡೌಟು, ನವಂಬರ್ 26 ಪರಸಂಗದ ಗೆಂಡೆತಿಮ್ಮ , ನವಂಬರ್ 27 ಕಾಕದೋಷ, ನವಂಬರ್ 28 ದೇವರ ಹೆಣ, ನವಂಬರ್ 29 ದಾರಾ ಶಿಕೋ, ನವಂಬರ್ 30 ಚಾರು ವಸಂತ, ಡಿಸೆಂಬರ್ 1ರಂದು ದ್ರೌಪತಿ ಹೇಳ್ತವ್ಳೆ ನಾಟಕಗಳು ನಡೆಯಲಿವೆ. ಇನ್ನು ನಾಗಮಂಗಲ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕಲಾ ಶಾರದೆ ಲೀಲಾವತಿ ನೆನಪಿನ ವೇದಿಕೆಯಲ್ಲಿ ನವಂಬರ್ 25 ಸಂಜೆ 5.30ಕ್ಕೆ ಕನ್ನಡ ಕಾದಂಬರಿ ಕಾರರಾದ ಶ್ರೀ ಕುಂ ವೀರಭದ್ರಪ್ಪನವರು ಉದ್ಘಾಟನೆ ಮಾಡಲಿದ್ದಾರೆ. ರಂಗ ಗೌರವ ನಟ ರಂಗಕರ್ಮಿ ದೊಡ್ಡಣ್ಣ ಅವರು ಕೂಡ ಭಾಗವಹಿಸಲಿದ್ದಾರೆ.

ಈ ಕುರಿತಂತೆ ಮಾತನಾಡಿದ ಕನ್ನಡ ಸಂಘದ ಅಧ್ಯಕ್ಷರಾದ ಆಲಮೇಲು ಅವರು, 'ನಾಗರಂಗ ನಾಟಕೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸುವ ಮುಖಾಂತರ ನಾಟಕಗಳ ಯಶಸ್ವಿಗೆ ಸಹಕರಿಸಬೇಕು' ಎಂದು ಮನವಿ ಮಾಡಿದರು. ಈ ವೇಳೆ ಸಂಘದ ನಿರ್ದೇಶಕರಾದ ಬಾಲಕೃಷ್ಣ, ಉಲ್ಲಾಸ್ ಮೊದಲಾದವರು ಹಾಜರಿದ್ದರು. ಮಂಡ್ಯ, ಬೆಂಗಳೂರು, ಮೈಸೂರು ಹಾಗೂ ಸಮೀಪದ ನಾಟಕ ಪ್ರಿಯರು ಈ ಕಾರ್ಯಕ್ರಮಕ್ಕೆ ಆಗಮಿಸಿ ವಿವಿಧ ರೀತಿಯ ನಾಟಕಕಗಳನ್ನು ನೋಡಬಹುದಾಗಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications