ಜೆಡಿಎಸ್ ವಿರುದ್ಧ ಸಮರಕ್ಕೆ ಸುಮಲತಾಗೆ ಬೆಂಬಲ ನೀಡಿದ ರೈತ ಸಂಘ
ಮಂಡ್ಯ, ಮಾರ್ಚ್ 20: ಜೆಡಿಎಸ್ ವಿರುದ್ಧ ಸಮರ ಸಾರಿರುವ ಮಂಡ್ಯ ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಮಂಡ್ಯ ರೈತ ಸಂಘ ಬೆಂಬಲ ಘೋಷಿಸಿದೆ.
ಸುಮಲತಾ ಅವರಿಗೆ ಮಂಡ್ಯದ ರೈತ ಸಂಘ ಬೆಂಬಲ ನೀಡಿರುವುದನ್ನು ಇಂದು ಸುಮಲತಾ ಅವರೇ ಬಹಿರಂಗ ಸಮಾವೇಶದಲ್ಲಿ ಹೇಳಿದರು. ಅವರಿಗೆ ಕೃತಜ್ಞತೆಯಾಗಿ ಹಸಿರು ಶಾಲು ಹೊದ್ದುಕೊಂಡರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ ರೈತ ಸಂಘವು ಪಕ್ಷೇತರ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಘೋಷಿಸಿತ್ತು. ಆದರೆ ಅವರು ಜೆಡಿಎಸ್ನ ಅಭ್ಯರ್ಥಿ ಎದುರು ಸೋತರು.

ಮಂಡ್ಯದಲ್ಲಿ ರೈತ ಸಂಘ ಗಟ್ಟಿಯಾಗಿದ್ದು, ಅವರ ಬೆಂಬಲ ಸಿಕ್ಕಿರುವುದು ಸುಮಲತಾ ಅವರಿಗೆ ನೈತಿಕ ಬೆಂಬಲ ದೊರೆತಂತಾಗಿದೆ. ಚಿತ್ರರಂಗದ ಹಲವು ಪ್ರಮುಖರು ಸಹ ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ.












Click it and Unblock the Notifications