ಸೈಟ್ ಮೇಲೆ ಸೈಟು ಹೊಡೆದಿದ್ದ ಕಾಳೇಗೌಡನ ಆಸ್ತಿ ವಿವರ
ಮಂಡ್ಯ, ಫೆಬ್ರವರಿ 08 : ಫಾರ್ಟಿ ಬೈ ಸಿಕ್ಸ್ಟಿ ಸೈಟಿರಲಿ ಟ್ವೆಂಟಿ ಬೈ ಥರ್ಟಿ ಸೈಟು ಕೊಳ್ಳುವುದೆಂದರೆ ಮಧ್ಯಮ ವರ್ಗದವರಿಗೆ ಗಗನ ಕುಸುಮ. ಅಂಥದ್ದರಲ್ಲಿ ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ತಲಾ ಮೂರ್ನಾಲ್ಕು ದೊಡ್ಡ ಸೈಟುಗಳನ್ನು ಕೊಂಡಿದ್ದನೆಂದರೆ ಈತನ ಹಸಿವು ಎಷ್ಟಿರಬೇಕು ಊಹಿಸಿಕೊಳ್ಳಿ!
ಇಷ್ಟು ಮಾತ್ರವಲ್ಲ ಕೋಟಿಗಟ್ಟಲೆ ಕಿಸಾನ್ ವಿಕಾಸ್ ಪತ್ರ, ಕೆಜಿಗಟ್ಟಲೆ ಚಿನ್ನ ಬೆಳ್ಳಿ ಆಭರಣಗಳು ಈ ಕಾಳೇಗೌಡ ಎಂಬ ಸಹಾಯಕ ಇಂಜಿನಿಯರ್ ಪೇರಿಸಿಟ್ಟುಕೊಂಡಿರುವ ಆಸ್ತಿಗಳು. ಪ್ರಾಮಾಣಿಕತೆಯ ಕಪಾಳಕ್ಕೆ ಬಿಗಿಯುವಂತೆ ಆಸ್ತಿಪಾಸ್ತಿ ಮಾಡಿಟ್ಟುಕೊಂಡಿದ್ದಾರೆ. ಮಿಸ್ಟರ್ ಕಾಳೇಗೌಡ.[PWD ಎಂಜಿನಿಯರ್ ಮನೆಮೇಲೆ ದಾಳಿ, ಸಿಕ್ಕಾಪಟ್ಟೆ ವಶ!]

ಮಂಡ್ಯದ ವಿ.ವಿ ನಗರದ 23ನೇ ಕ್ರಾಸ್ನಲ್ಲಿ ವಾಸವಿದ್ದಾರೆ ಕಾಳೇಗೌಡ. ಪ್ರಸ್ತುತ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಸಹಾಯಕ ಇಂಜೀನಿಯರ್ ಆಗಿದ್ದಾರೆ. ಅಂದ ಹಾಗೆ ಅಷ್ಟೊಂದು ಸೈಟು, ಚಿನ್ನ ಮಾಡಿಟ್ಟಿದ್ದು ಯಾರಿಗಾಗಿಯೋ?
ನ್ಯಾಯಾಲಯದ ಅನುಮತಿ ಪಡೆದು ಮಂಡ್ಯದಲ್ಲಿರುವ ಕಾಳೇಗೌಡನ ಮನೆ, ಕಚೇರಿ, ಮಂಡ್ಯದ ಮಾರಗೌಡನಹಳ್ಳಿಯಲ್ಲಿರುವ ಕಾಳೇಗೌಡನ ಅತ್ತೆ ಜಯಮ್ಮ, ಮೈಸೂರಿನಲ್ಲಿ ಕಾಳೇಗೌಡ ರವರ ಭಾವಮೈದುನನಾದ ಎಂ.ಎಂ.ಸುರೇಶ್ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಅಕ್ರಮವಾಗಿ ಸಂಪಾದಿಸಿರುವ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವ ತಮ್ಮ ಹೆಸರಿನಲ್ಲಿರುವ ಹಾಗೂ ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಿ ಸದರಿ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
1. ಮೈಸೂರು ತಾಲ್ಲೂಕು ಜಯಪುರದಲ್ಲಿ 60*40 ಅಳತೆಯ ನಿವೇಶನ
2. ಮೈಸೂರು, ಕಾವೇರಿ ನಗರದಲ್ಲಿ 30*60 ಅಳತೆಯ ನಿವೇಶನ
3. ಬೆಂಗಳೂರು ನಗರ ತಾವರೆಕೆರೆಯಲ್ಲಿ 30*40 ಅಳತೆಯ ನಿವೇಶನ
4. ಮೈಸೂರಿನಲ್ಲಿ 60*40 ಅಳತೆಯ ನಿವೇಶನ
5. ವಿವಿ ನಗರ, ಮಂಡ್ಯದಲ್ಲಿ 40*60 ಅಳತೆಯ ನಿವೇಶನ
6. ವಿವೇಕಾನಂದ ನಗರದಲ್ಲಿ 40*60 ಅಳತೆಯ ನಿವೇಶನ
7. ಮಂಡ್ಯ ನಗರ ವಿವಿ ನಗರದಲ್ಲಿ ಎರಡು ಅಂತಸ್ತಿನ ನಿವೇಶನ 40*60ರಲ್ಲಿ
8. ಸುಮಾರು 1 ಕೋಟಿ 39 ಲಕ್ಷದಷ್ಟು ಕಿಸಾನ್ ವಿಕಾಸ್ ಪತ್ರ
9. ಸುಮಾರು 1/2 ಕೆ.ಜಿ ಚಿನ್ನದ ಆಭರಣ
10. ಸುಮಾರು 1 ಕೆ.ಜಿ 300 ಗ್ರಾಂ ಬೆಳ್ಳಿ ಆಭರಣ
11. ಸುಮಾರು 15 ಲಕ್ಷ ರೂಗಳ ಠೇವಣಿ
12. ಎಲ್ಐಸಿ ಪಾಲಿಸಿ ಸುಮಾರು 25 ಲಕ್ಷ
13. 1 ಕಾರು ಹಾಗೂ 3 ಮೋಟಾರ್ ಸೈಕಲ್
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications