ಕೊಡಗು; ಹಳ್ಳಕ್ಕೆ ಬಿದ್ದ ಕೆಎಸ್ಆರ್ಟಿಸಿ ಐರಾವತ ಬಸ್
ಕೊಡಗು, ಜನವರಿ 10 : ಕೆಎಸ್ಆರ್ಟಿಸಿಯ ಐರಾವತ ಬಸ್ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ಕೊಡಗಿನಲ್ಲಿ ನಡೆದಿದೆ. ಹಲವು ಪ್ರಯಾಣಿಕರರಿಗೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದೆ.
ಶುಕ್ರವಾರ ಮುಂಜಾನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಬಳಿ ಈ ಅಪಘಾತ ನಡೆದಿದೆ. ಬೆಳಗ್ಗಿನ ದಟ್ಟ ಮಂಜಿನ ಕಾರಣ ಚಾಲಕನ ನಿಯಂತ್ರಣ ತಪ್ಪಿ ಬಸ್ ಹಳ್ಳಕ್ಕೆ ಉರುಳಿದೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ; ಅರ್ಜಿ ಹಾಕಿ
ಅಪಘಾತದಲ್ಲಿ ಕೆಲವು ಪ್ರಯಾಣಿಕರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಬೇರೊಂದು ವಾಹನದಲ್ಲಿ ಅವರಿಗೆ ಸಂಚಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ.
ರಾಮನಗರ; ಭೀಕರ ಅಪಘಾತ 3 ಸಾವು, 6 ಜನರಿಗೆ ಗಾಯ
ಅಪಘಾತಗೊಂಡ ಬಸ್ ಮೈಸೂರಿನಿಂದ ಗೋಣಿಕೊಪ್ಪಲು ಮಾರ್ಗವಾಗಿ ಕೇರಳಕ್ಕೆ ಹೊರಟಿತ್ತು. ಅಪಘಾತದಲ್ಲಿ ಬಸ್ ಜಖಂಗೊಂಡಿದ್ದು, ಗಾಜುಗಳು ಪಡಿಯಾಗಿವೆ.
ಬಿಎಂಟಿಸಿ ಬಸ್ ಬ್ರೇಕ್ ಫೇಲ್, ಸರಣಿ ಅಪಘಾತ: ಓರ್ವ ಸಾವು
ಯಾದಗಿರಿಯಲ್ಲಿ 3 ಸಾವು : ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಆಟೋ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ಯಾದಗಿರಿ ಹೊರವಲಯದ ಗಡೇಸೂರ್ ಗೇಟ್ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಯಾದಗಿರಿಯಿಂದ ವಡಗೇರಾಗೆ ತೆರಳುತ್ತಿದ್ದ ಆಟೋ ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿದೆ.