ಮಮತಾ, ಪ್ರಶಾಂತ್ ಕಿಶೋರ್ ನಡುವೆ ವೈಮನಸ್ಸು, ಸಭೆ ಕರೆದ ದೀದಿ
ಕೋಲ್ಕತ್ತಾ, ಫೆಬ್ರವರಿ 12: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ವೈಮನಸ್ಸು ಮೂಡಿದೆ.
ಫೇಸ್ಬುಕ್ ಪ್ರೊಫೈಲ್ನಲ್ಲಿ ಚಂದ್ರಿಮಾ ಭಟ್ಟಾಚಾರ್ಯ ಅವರ ಖಾತೆಯಿಂದ 'ಒಬ್ಬ ವ್ಯಕ್ತಿ, ಒಂದು ಹುದ್ದೆ' ಸಂಬಂಧಿತ ವಿಚಾರವನ್ನು ಹಂಚಿಕೊಳ್ಳಲಾಗಿತ್ತು. ಇದನ್ನು ತಾವು ಹಂಚಿಕೊಂಡಿಲ್ಲ. ಪ್ರಶಾಂತ್ ಕಿಶೋರ್ ಅವರ ಐ-ಪಿಎಸಿ ಅನುಮತಿಯಿಲ್ಲದೇ ಈ ವಿಚಾರವನ್ನು ಹಂಚಿಕೊಂಡಿದೆ ಎಂದು ಅವರು ಆರೋಪಿಸಿದ್ದರು. ಅಲ್ಲದೇ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಪ್ರಸ್ತಾಪಿಸುವುದಾಗಿ ಅವರು ಹೇಳಿದ್ದರು.
ಐ-ಪಿಎಸಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವಿನ ಗೊಂದಲ ಇದೇ ಮೊದಲೇನಲ್ಲ. ಪಕ್ಷದ ಖಾತೆಯಿಂದ ಅಭ್ಯರ್ಥಿಗಳ ಪಟ್ಟಿಯನ್ನು ಹಠಾತ್ ಅಪ್ಲೋಡ್ ಮಾಡುವುದರೊಂದಿಗೆ ಐಪಿಎಸಿ ಮತ್ತು ತೃಣಮೂಲ ಕಾಂಗ್ರೆಸ್ ಪರಸ್ಪರ ಆರೋಪ- ಪ್ರತ್ಯಾರೋಪ ಆರಂಭವಾಗಿತ್ತು.

ವಾಸ್ತವವಾಗಿ ಚುನಾವಣಾ ತಂತ್ರಗಾರಿಕೆಯ ಕುರಿತು 2026 ರವರೆಗಿನ ತೃಣಮೂಲ ಕಾಂಗ್ರೆಸ್ IPAC ಜತೆ ಒಪ್ಪಂದ ಮಾಡಿಕೊಂಡಿದೆ. ಕೆಲವು ಮೂಲಗಳ ಪ್ರಕಾರ ಈ ಒಪ್ಪಂದ ಮುಗಿದಿದೆ ಎನ್ನಲಾಗಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು 'ಒಬ್ಬ ವ್ಯಕ್ತಿ, ಒಂದು ಹುದ್ದೆ' ಬಗ್ಗೆ ಮೊದಲು ಪ್ರಸ್ತಾಪಿಸಿದ್ದರು. ಜೂನ್ 5 ರಂದು ಅದನ್ನು ಅಂಗೀಕರಿಸಲಾಗಿತ್ತು. ಆದರೆ, ಪ್ರಸ್ತುತ ಪಕ್ಷದ ಬೆಳವಣಿಗೆಗಳ ಬಗ್ಗೆ ಅವರಿಗೆ ಅಸಮಾಧಾನವಿದೆ. ಅವರು ಇಂದಿನ ಸಭೆಯಲ್ಲಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
'ಒಬ್ಬ ವ್ಯಕ್ತಿ, ಒಂದು ಹುದ್ದೆ' ಸಿದ್ಧಾಂತದ ಪ್ರಕಾರ, ಒಬ್ಬ ವ್ಯಕ್ತಿ ಕೇವಲ ಒಂದು ಹುದ್ದೆಯನ್ನು ಹೊಂದಬಹುದಾಗಿದೆ. ಪ್ರಸ್ತುತ ಈ ವಿಚಾರ ಪಕ್ಷದೊಳಗೆ ವಾಗ್ವಾದಕ್ಕೆ ಕಾರಣವಾಗಿದೆ ಎಂದು ವರದಿಗಳು ಹೇಳಿವೆ. ಟಿಎಂಸಿ ನಾಯಕ ಸೌಗತ ರಾಯ್ ಅವರು ಕಳೆದ ವಾರ ಈ ಸಿದ್ಧಾಂತದ ಪರ ಮಾತನಾಡಿದ್ದಾರೆ..
ವಾಸ್ತವವಾಗಿ, ಪಕ್ಷವು ಕೂಡ ಈ ಘೋಷಣೆಯ ಪ್ರಚಾರವನ್ನು ನಿರಾಕರಿಸಿದೆ. ಸಚಿವ ಫಿರ್ಹಾದ್ ಹಕೀಮ್ ''ಈ ಅಭಿಯಾನವನ್ನು ಪಕ್ಷವು ಅನುಮೋದಿಸಿಲ್ಲ. ಅದಕ್ಕೆ ಇನ್ನೂ ನಾಲ್ಕು ಸಾಲುಗಳಿವೆ. ಈ ಸಿದ್ಧಾಂತವು ಬದಲಾಗಬಹುದು, ಟಿಎಂಸಿ ಹೈಕಮಾಂಡ್ ಅದನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿದೆ'' ಎಂದು ಹೇಳಿದ್ದಾರೆ.
ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಮಾಡಿರುವ ಆರೋಪವನ್ನು I-PAC ನಿರಾಕರಿಸಿದೆ ಮತ್ತು TMC ಮತ್ತು ಅದರ ನಾಯಕರ ಡಿಜಿಟಲ್ ಖಾತೆಗಳನ್ನು ಅದು ನಿರ್ವಹಿಸುವುದಿಲ್ಲ ಎಂದು ಹೇಳಿದೆ. ಐ-ಪಿಎಸಿ ಟ್ವೀಟ್ ಮಾಡಿ, "ಐ-ಪಿಎಸಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಮತ್ತು ಅದರ ಯಾವುದೇ ನಾಯಕರ ಯಾವುದೇ ಡಿಜಿಟಲ್ ಆಸ್ತಿಗಳನ್ನು ನಿರ್ವಹಿಸುವುದಿಲ್ಲ.
ಯಾರಾದರೂ ಅಂತಹ ಹೇಳಿಕೆಗಳನ್ನು ಮಾಡುತ್ತಿದ್ದರೆ ಅವರು ಬಹಿರಂಗವಾಗಿ ಸುಳ್ಳು ಹೇಳುತ್ತಿದ್ದಾರೆ ಅಥವಾ ಅವರಿಗೆ ತಿಳಿದಿಲ್ಲ. ಅವರ ಅಥವಾ ಅವರ ನಾಯಕರ ಡಿಜಿಟಲ್ ಆಸ್ತಿಗಳನ್ನು (ದುರುಪಯೋಗ) ಆರೋಪಿಸಲಾಗಿದೆಯೇ ಅಥವಾ ಇಲ್ಲವೇ ಎಐಟಿಸಿ ಪರಿಶೀಲಿಸಬೇಕು ಎಂದಿದೆ.
ಕಳೆದ ವರ್ಷ ಜುಲೈನಲ್ಲಿ, ಎಐಟಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಪಕ್ಷದ ನಾಯಕರೊಂದಿಗಿನ ಸಭೆಯಲ್ಲಿ ಒಬ್ಬ ವ್ಯಕ್ತಿ, ಒಂದು ಹುದ್ದೆ ಅಭಿಯಾನವನ್ನು ಪ್ರೋತ್ಸಾಹಿಸಿದ್ದರು. ಇತ್ತೀಚೆಗೆ ನಡೆದ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಈ ನೀತಿಯನ್ನು ನಿರ್ವಹಿಸುವುದು ಕಂಡುಬಂದಿಲ್ಲ. ಇದು ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು ಈ ಕುರಿತು ಮಮತಾ ಬ್ಯಾನರ್ಜಿ ಸಭೆ ಕರೆದಿದ್ದಾರೆ.












Click it and Unblock the Notifications