Get Updates
Get notified of breaking news, exclusive insights, and must-see stories!

ಸ್ಪೀಕರ್ ಮಾಡಿರೆಂದು ಕೇಳಿರಲಿಲ್ಲ, ಅದು ವರಿಷ್ಠರ ಆದೇಶ: ರಮೇಶ್ ಕುಮಾರ್‌

ಕೋಲಾರ, ಮೇ 30: 'ನನ್ನನ್ನು ಸಭಾಧ್ಯಕ್ಷನನ್ನಾಗಿ ಮಾಡಿರೆಂದು ನಾನು ಯಾವ ಕಾಂಗ್ರೆಸ್‌ ಮುಖಂಡರನ್ನೂ ಕೇಳಿರಲಿಲ್ಲ, ಅದು ಹೈಕಮಾಂಡ್ ಆದೇಶ ಹಾಗಾಗಿ ಪಾಲಿಸಿದ್ದೇನೆ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದರು.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಮಾಡುವ ಮೂಲಕ ನನ್ನ ಕೈ-ಬಾಯಿ ಕಟ್ಟಿಹಾಕ ಬಹುದು ಎಂದು ಯಾದರೂ ಅಂದು ಕೊಂಡಿದ್ದರೆ ಅದು ಸುಳ್ಳು, ಆ ರೀತಿಯ ಪ್ರಯತ್ನ ಮಾಡಿದವರನ್ನೇ ಕಟ್ಟಿ ಹಾಕುತ್ತೇನೆ ಎಂದು ಅವರು ಹೇಳಿದರು.

ಸಚಿವ ಸ್ಥಾನ ಬಿಟ್ಟು ಸ್ಪೀಕರ್ ಸ್ಥಾನ ಸ್ವೀಕರಿಸಿದಕ್ಕೆ ಬೇಸರವಿಲ್ಲ ಎಂದ ಅವರು, ಸ್ಪೀಕರ್ ಆದ ತಕ್ಷಣ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬುದು ಸುಳ್ಳು, ಇನ್ನೂ ಹೆಚ್ಚಿನ ಅಭಿವೃದ್ಧಿಯಾಗುತ್ತದೆ, ಜೂನ್ 7 ರಂದು ಕೆ.ಸಿ.ವ್ಯಾಲಿಯನ್ನು ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರು ಉದ್ಘಾಟಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

I would not ask any body to make me as speaker: Ramesh Kumar

ಇದೇ ಕೆ.ಸಿ.ವ್ಯಾಲಿಯನ್ನು ಈ ಹಿಂದೆ ಕುಮಾರಸ್ವಾಮಿ ಅವರು ವಿರೋಧಿಸಿದ್ದರು ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವರೇ ಅದನ್ನು ಉದ್ಘಾಟಿಸಲಿದ್ದಾರೆ. ಈಗ ಅವರು ವಿರೋಧಿಸುವಂತಿಲ್ಲ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+