ಕೋಲಾರದಲ್ಲಿ ನಿರ್ಮಾಣ ಹಂತದ ಚೌಲ್ಟ್ರಿಚಾವಣಿ ಕುಸಿದು ಮೂವರ ಸಾವು
ಕೋಲಾರ, ಫೆಬ್ರವರಿ 09: ನಿರ್ಮಾಣ ಹಂತದಲ್ಲಿದ್ದ ಕಲ್ಯಾಣ ಮಂಟಪದ ಚಾವಣಿ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲ್ಲೂಕಿನ ಚಲುವನಹಳ್ಳಿ ಗೇಟ್ ಬಳಿಯ ಬಾಲಾಜಿ ಕಲ್ಯಾಣ ಮಂಟಪ ಕಾಮಗಾರಿ ನಡೆಯುತ್ತಿದ್ದು, ಮಂಟಪದ ಚಾವಣಿ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರ ಮೂಲದ ಪ್ರಮೋದ್ (25), ಮಾಮು (45) ಧರ್ಮೇಂದ್ರ (27) ಮೃತಪಟ್ಟವರು. ಅಬ್ದುಲ್ ಹಾಗೂ ರಾಕೇಶ್ ಗಾಯಗೊಂಡ ಕಾರ್ಮಿಕರು. ಇವರೆಲ್ಲರೂ ಕಟ್ಟಡ ಕೆಲಸಕ್ಕೆಂದು ಬಿಹಾರದಿಂದ ಇಲ್ಲಿಗೆ ಬಂದಿದ್ದರು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications