Get Updates
Get notified of breaking news, exclusive insights, and must-see stories!

BJP President: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮಹತ್ವ ಮಾಹಿತಿ ನೀಡಿದ ವಿಜಯೇಂದ್ರ

ಬೆಂಗಳೂರು, ಫೆಬ್ರವರಿ 06: ರಾಜ್ಯದ ಅಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರಿಯೆ ಯಾವುದೇ ಸಮಯದಲ್ಲಿ ಬೇಕಾದ್ರು ನಡೆಯಬಹುದು. 20ನೇ ತಾರೀಖಿನ ಒಳಗೆ ಎಲ್ಲವೂ ಮುಗಿಯುತ್ತೆ ಅನ್ನೋ ಮಾಹಿತಿಗಳು ಬರ್ತಿವೆ. ಪಕ್ಷದ ಆಂತರಿಕ ಭಿನ್ನಮತ 20ನೇ ತಾರೀಖಿನ ಒಳಗೆ ಮುಗಿದು ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರು ಮಹತ್ವದ ಮಾಹಿತಿಯನ್ನ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಲವರು ನನ್ನ ಬಗ್ಗೆ ಪಕ್ಷದ ಬಗ್ಗೆ ನಾನಾ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದ ಅಧ್ಯಕ್ಷನಾಗಿ ನಾನು ಹೇಳಿಕೆ ಕೊಟ್ರೆ ಸರಿಯಲ್ಲ, ಕಾರ್ಯಕರ್ತರಿಗೂ ನೋವಾಗುತ್ತೆ ಅದಕ್ಕೆ ಮಾತಾಡ್ತಿಲ್ಲ. ಶ್ರೀ ರಾಮುಲು ಅವರು ನನಗೆ ಅನುಭವ ಇಲ್ಲ ಅಂತ ಹೇಳಿದ್ದಾರೆ. ರಾಜ್ಯದ ಅಧ್ಯಕ್ಷನಾಗಿ ನನಗೆ ಅನುಭವ ಇಲ್ಲದೆ ಇರಬಹುದು. ಆದರೆ, ಪಕ್ಷದ ಕಾರ್ಯಕರ್ತನಾಗಿ ನನಗೆ ಅನುಭವ ಇದೆ. ಪಕ್ಷದ ಕಾರ್ಯದರ್ಶಿಯಾಗಿ, ಯುವಮೋರ್ಚಾ ಅಧ್ಯಕ್ಷನಾಗಿ, ಪಕ್ಷದ ಉಪಾಧ್ಯಕ್ಷನಾಗಿ ನನಗೆ ಅನುಭವ ಇದೆ. ನಮ್ಮ ಕಾರ್ಯಕರ್ತರು ನನ್ನನ್ನು ಪ್ರಿತಿಯಿಂದ ವಿಜಯಣ್ಣ ಅಂತಾ ಕರೀತಾರೆ ಎಂದು ಹೇಳಿದರು.

Vijayendra Gave Important Information About Election For The Post Of State President

ನನ್ನ ಕೆಲಸದ ಬಗ್ಗೆ ಹಿರಿಯರಿಗೆ ಎಷ್ಟು ತೃಪ್ತಿ ಇದೆಯೋ ಗೊತ್ತಿಲ್ಲ, ಆದರೆ ಕಾರ್ಯಕರ್ತರಿಗೆ ತೃಪ್ತಿ ಇದೆ. ಶಿಕಾರಿಪುರದಲ್ಲಿ ಮದುವೆ ಮನೆಗೆ ಹೋಗಿದ್ದಾಗ ಏನಾದರೂ ಮಾಡಿ ಪಕ್ಷದ ಗಲಾಟೆ ನಿಲ್ಲಿಸಿ ಎಂದು ಮಹಿಳೆಯರು ಮನವಿ ಮಾಡಿದರು. ಯಡಿಯೂರಪ್ಪನವರ ತೇಜೋವಧೆ ಮಾಡುತ್ತಿರುವವರನ್ನು ತಡೆಯುವ ಕೆಲಸವನ್ನು ಹಿರಿಯರು ಮಾಡಲಿ. ಅವರ ಬಗ್ಗೆ ಹಿರಿಯರು ವರಿಷ್ಠರ ಗಮನಕ್ಕೆ ತರಲಿ, ಒಂದು ವರ್ಷದಿಂದ ಯಡಿಯೂರಪ್ಪನವರ ತೇಜೋವಧೆ, ಅವಮಾನ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಹೈಕಮಾಂಡ್ ಬೆಂಬಲ, ಸಂತೋಷ್ ಬೆಂಬಲ ಇದೆ ಎಂಬುದೆಲ್ಲಾ ಸತ್ಯಕ್ಕೆ ದೂರ. ಇದಕ್ಕೆ ಹೈಕಮಾಂಡ್ ನಾಯಕರ ಯಾವುದೇ ಬೆಂಬಲ ಇಲ್ಲ.

ಭಿನ್ನಮತ ಶಮನಕ್ಕೆ ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕೆಂಬ ಬೊಮ್ಮಾಯಿ‌ ಆಗ್ರಹ ವಿಚಾರವಾಗಿ ಮಾತನಾಡಿ, ತಟಸ್ಥ ಬಣವನ್ನೂ ನಾನು ನೋಡಿದ್ದೇನೆ. ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕು ಅಂತಾದರೆ ಮೊದಲು ಯಡಿಯೂರಪ್ಪನವರನ್ನು ಬೈಯುವುದನ್ನು ಮೊದಲು ನಿಲ್ಲಿಸಬೇಕು. ಅದನ್ನು ಅವರು ಮಾಡಬೇಕು, ಯಡಿಯೂರಪ್ಪ ಅವರನ್ನು ತೇಜೋವಧೆ ಮಾಡುವುದನ್ನು ನೋಡಿಕೊಂಡು ನೀವು ಸುಮ್ಮನೆ ಇರುತ್ತೀರಿ ಅಂತಾದರೆ?
ರಾಜ್ಯಾಧ್ಯಕ್ಷನಾಗಿ ಏನು ಮಾಡಬೇಕು ಎಂಬ ಅರಿವು ನನಗೆ ಇದೆ ಎಂದು ಹೇಳಿದರು.

ಹೊಂದಾಣಿಕೆ ರಾಜಕೀಯ ಅಂತಾದರೆ ಮೈಸೂರು ಪಾದಯಾತ್ರೆ ನಡೆಯುತ್ತಿತ್ತಾ? ಈ ರೀತಿ ಹೇಳಿಕೆಯಿಂದ ಕಾರ್ಯಕರ್ತರಿಗೆ ಅವಮಾನ ಮಾಡಲಾಗುತ್ತಿದೆ. ವಿಜಯೇಂದ್ರಗೆ ಅಪಮಾನ ಮಾಡಲಿ, ಆದರೆ ಕಾರ್ಯಕರ್ತರಿಗೆ ಅಪಮಾನ ಮಾಡುವುದು ಬೇಡ. ಗೊಂದಲಕ್ಕೆ ತೆರೆ ಎಳೆಯಬೇಕು, ವಿಜಯೇಂದ್ರ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬ ಆಪಾದನೆ ಸರಿಯಲ್ಲ. ಮೊದಲ ಬಾರಿಗೆ ಶಾಸಕನಾಗಿ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇನೆ, ಯಾವುದೋ ಎರಡು ಹೋರಾಟಕ್ಕೆ ಗೈರಾದರೆ ಅದು ಹೊಂದಾಣಿಕೆ ರಾಜಕೀಯ ಅಲ್ಲ.ಯತ್ನಾಳ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಬಳಿಕ ಅದಕ್ಕೆಲ್ಲಾ ಒಂದೊಂದಾಗಿ ಉತ್ತರ ಕೊಡುತ್ತೇನೆ. ಈಗ ಮಾತಾಡಲು ಹೋದರೆ ನನಗೂ ಅವರಿಗೂ ವ್ಯತ್ಯಾಸ ಇಲ್ಲ ಎಂದರು.

ಎಲ್ಲರೂ ಒಪ್ಪುವಂತಹ ರಾಜ್ಯಾಧ್ಯಕ್ಷ ಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬೆಂಗಳೂರು ಶಾಸಕರ ಸಭೆ ಕರೆದಾಗ ಇದನ್ನು ಚರ್ಚೆ ಮಾಡುತ್ತೇನೆ. ಯಡಿಯೂರಪ್ಪನವರ ತೇಜೋವಧೆ ನಡೆಯುತ್ತಿರುವಾಗ ಅದನ್ನು ಹಿರಿಯರು ನಿಲ್ಲಿಸುತ್ತಿಲ್ಲ ಎಂಬ ನೋವು ಯಡಿಯೂರಪ್ಪನವರ ಮಗನಾಗಿ, ರಾಜ್ಯಾಧ್ಯಕ್ಷನಾಗಿ ನನಗೆ ಇದೆ ಎಂದು ವಿಜಯೇಂದ್ರ ಅವರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+