"ಯಾವ ಪೊಲೀಸ್ ಠಾಣೆ ಎಂಬುದಕ್ಕೂ ಮೊತ್ತ ನಿಗದಿ; ದುಡ್ಡು ಕೈ ಸೇರಿದರಷ್ಟೇ ವರ್ಗಾವಣೆ"
ಬೆಂಗಳೂರು, ನವೆಂಬರ್ 01: ಪೊಲೀಸರ ಟೊಪ್ಪಿ ಬದಲಿಸುವ ಕುರಿತು ಸರಕಾರ ಯೋಚಿಸಿದೆ. ಅವರ ಕೈಗಳನ್ನು ಶಕ್ತಿಯುತವಾಗಿ ಮಾಡುವ ಕಡೆ ಗಮನಿಸಿಲ್ಲ. ದುಡ್ಡು ಕೊಡದೆ ಟ್ರಾನ್ಸ್ಫರ್ ಆಗುವುದಿಲ್ಲ, ವರ್ಗಾವಣೆಗೆ ಯಾವ ಪೊಲೀಸ್ ಠಾಣೆ ಎಂಬುದಕ್ಕೆ ನಿಗದಿತ ಮೊತ್ತ ಇದೆ. ದುಡ್ಡು ಕೈ ಸೇರಿದರಷ್ಟೇ ವರ್ಗಾವಣೆ ಆಗುತ್ತದೆ ಎಂದು ಕೇಂದ್ರ ಸಚಿವರಾದ ಕು.ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ನನ್ನ ಕ್ಷೇತ್ರದ ಪೊಲೀಸ್ ಠಾಣೆಗಳಲ್ಲಿ ಆರು ತಿಂಗಳಿಗೊಮ್ಮೆ 10 ತಿಂಗಳಿಗೆ ಒಮ್ಮೆ ವರ್ಗಾವಣೆ ಮಾಡುತ್ತಾರೆ. ಪದೇಪದೇ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸುತ್ತಾರೆ. ಯಾಕೆ? ಒಂದು ಸಾರಿ ದುಡ್ಡು ಕೊಟ್ಟರೆ ಅದರ ಮೌಲ್ಯ 10 ತಿಂಗಳಿಗೆ ಮಾತ್ರ. ಆಮೇಲೆ ಉಳಿಯಲು ಹೊಸದಾಗಿ ದುಡ್ಡು ಕೊಡಬೇಕು. ಇಲ್ಲವಾದರೆ ಅವರಿಗೆ ವರ್ಗಾವಣೆ ಮಾಡಿ, ಹೆಚ್ಚು ದುಡ್ಡು ಕೊಡುವವರು ಬರುತ್ತಾರೆ ಎಂದು ಟೀಕಿಸಿದರು. ದುಡ್ಡು, ವರ್ಗಾವಣೆ ವ್ಯವಹಾರದಿಂದ ನಮ್ಮ ಅಧಿಕಾರಿಗಳು ಆತ್ಮವಿಶ್ವಾಸ ಕಳಕೊಂಡಿದ್ದಾರೆ ಎಂದರು.

ಕೆಲಸದ ಬದಲಾಗಿ ದುಡ್ಡು ಹೆಚ್ಚು ಮಹತ್ವದ್ದಾಗುತ್ತಿದೆ. ಕರ್ನಾಟಕದಲ್ಲಿ ಕಳೆದ 2 ವರ್ಷಗಳಲ್ಲಿ 1800ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ದೌರ್ಜನ್ಯ ಆಗಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಬಲೂನ್ ಮಾರಾಟಕ್ಕೆ ಬಂದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಆಗಿದೆ. ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ನಡೆಯಿತು. ಸರಕಾರ ಬಂದೊಡನೆ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಬೆಳಗಾವಿ ನಗರದಲ್ಲೇ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ನನ್ಯ ನಡೆದಿತ್ತು ಎಂದು ಗಮನ ಸೆಳೆದರು.
ಬೆಂಗಳೂರಿನಲ್ಲಿ ಉಪನ್ಯಾಸಕರು ಅತಿಥಿ ಉಪನ್ಯಾಸಕರ ಮೇಲೆ ಅತ್ಯಾಚಾರ ಮಾಡುತ್ತಾರೆ. ಮೂಡಬಿದಿರೆಯ ಉಪನ್ಯಾಸಕರು ಬೆಂಗಳೂರಿಗೆ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಅತ್ಯಾಚಾರ ಮಾಡುತ್ತಾರೆ. ಮಲತಂದೆ ತನ್ನ ಮಗಳ ಮೇಲೆ ಮಾಡುತ್ತಾನೆ. ಕೆಲಸ ಹುಡುಕಿಕೊಂಡು ಬಂದ ಬಿಹಾರದ ಕುಟುಂಬ, ಒಡಿಶಾದ ಕುಟುಂಬದ ಮಕ್ಕಳು ಓಡಾಡುತ್ತಿದ್ದರೆ ಅವರನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡುತ್ತಿದ್ದಾರೆ. ಕರ್ನಾಟಕ, ಬೆಂಗಳೂರಿನಲ್ಲಿ ಈ ಧೈರ್ಯ ಹೇಗೆ ಬಂತು? ಈ ಸರಕಾರ ಸತ್ತಿರುವುದೇ ಇದಕ್ಕೆ ಕಾರಣ ಎಂದು ಕಿಡಿಕಾರಿದರು.
ಅವರ ಕುರ್ಚಿಯ ಮೇಲಾಟ, ಮುಖ್ಯಮಂತ್ರಿ ಯಾರಾಗಬೇಕು? ಯಾರು ಸಚಿವರಾಗಬೇಕು? ಯಾರು ಉಪ ಮುಖ್ಯಮಂತ್ರಿ ಆಗಬೇಕು? ಯಾರು ಮಂತ್ರಿಗಿರಿ ಉಳಿಸಿಕೊಳ್ಳಬೇಕು? ಯಾರು ಮಂತ್ರಿಗಿರಿ ಗಳಿಸಿಕೊಳ್ಳಬೇಕು?- ಈ ಮೇಲಾಟದಲ್ಲಿ ಜನರು ಪ್ರಾಣ ಕಳಕೊಳ್ಳುತ್ತಿದ್ದಾರೆ. ಕಳೆದೆರಡು, ಎರಡೂವರೆ ವರ್ಷಗಳಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾತಿ ಸಮೀಕ್ಷೆಗೆ ಒತ್ತಡಪೂರ್ವಕವಾಗಿ ಕಳಿಸಿದ್ದು, ಅಲ್ಲಿ ಆರಕ್ಕಿಂತ ಹೆಚ್ಚು ಜನ ಸತ್ತಿದ್ದಾರೆ. 15ಕ್ಕೂ ಹೆಚ್ಚು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಮೊದಲ ಬಾರಿಗೆ ಗುತ್ತಿಗೆದಾರರು ಕರ್ನಾಟಕದಲ್ಲಿ ದಯಾಮರಣ ಕೊಡಿ ಎಂದು ಪತ್ರ ಬರೆದಿದ್ದಾರೆ. ಇವರು ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಮಹಿಳೆಯರ ಪ್ರಾಣಕ್ಕೆ ಗ್ಯಾರಂಟಿ ಕೊಡುವವರು ಯಾರು ಎಂದು ಕೇಳಿದರು.
ಸಿಎಂ ಯಾರಾಗುತ್ತಾರೆ? ಸಚಿವ ಸಂಪುಟ ಬದಲಿಸುವಿರಾ ಎಂಬುದು ನಮಗೆ ಸಂಬಂಧಿಸಿಲ್ಲ. ನಮ್ಮ ಜನರು, ಮಹಿಳೆಯರು, ಬಾಲಕಿಯರಿಗೆ ರಕ್ಷಣೆ ಕೊಡಿ ಎಂದು ಅವರು ಸರಕಾರವನ್ನು ಆಗ್ರಹಿಸಿದರು. ಸರಕಾರ ಸ್ಪರ್ಶಜ್ಞಾನ ಕಳಕೊಂಡಿದೆಯೇ? ಕಣ್ಣು ಕಾಣುತ್ತದೆಯೇ ಇಲ್ಲವೇ? ಕಿವಿ ಕೇಳಿಸುತ್ತದೆಯೇ ಇಲ್ಲವೇ ಎಂದು ತಿಳಿಯುತ್ತಿಲ್ಲ. ಕನಿಷ್ಠ ಪಕ್ಷ ಈಗಲಾದರೂ ಎಚ್ಚತ್ತುಕೊಳ್ಳಿ. ಈ ಆತ್ಮಹತ್ಯೆ, ಕೊಲೆಗಳನ್ನು ತಪ್ಪಿಸಿ ಎಂದು ಆಗ್ರಹಿಸಿದರು.
ನೀವು ಯಾರನ್ನಾದರೂ ಮುಖ್ಯಮಂತ್ರಿ ಮಾಡಿ. ಆದರೆ, ಮಹಿಳಾ ರಕ್ಷಣೆ ನಿಮ್ಮ ಆದ್ಯತೆಯಾಗಿರಲಿ. ಗೃಹ ಸಚಿವರು ಏನು ಕೆಲಸ ಮಾಡುತ್ತಿದ್ದಾರೆಂದು ಗೊತ್ತಿಲ್ಲ, ರಾಜ್ಯದ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಭೆ ನಡೆಸುತ್ತಾರೋ ಎಂಬುದೂ ಗೊತ್ತಿಲ್ಲ. ಗೃಹ ಸಚಿವರು ವಿವಿಧ ಜಿಲ್ಲೆಗಳಲ್ಲಿ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಬೇಕು. ಕಾನೂನು- ಸುವ್ಯವಸ್ಥೆಯ ಪರಿಶೀಲನೆ ಮಾಡಬೇಕು. ಆದರೆ, ಇವರು ಬೆಂಗಳೂರು ಬಿಟ್ಟು ಹೊರಟರೆ ತುಮಕೂರು ಎಂಬಂತಿದೆ ಎಂದು ಆಕ್ಷೇಪಿಸಿದರು.
-
ಡಿಕೆಶಿ ನನ್ನದು ಹಾಲು-ಜೇನಿನಂತಹ ಸಂಬಂಧ, ಹುಳಿ ಹಿಂಡಲು ಬರಬೇಡಿ: ಅಶೋಕ್-ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್ -
ಒಕ್ಕೂಟ ವ್ಯವಸ್ಥೆ ಸಂವಿಧಾನದ ಮೂಲಭೂತ ರಚನೆಯ ಭಾಗ: ತಮಿಳುನಾಡು ಸಿಎಂ ಸ್ಟಾಲಿನ್ ಪತ್ರಕ್ಕೆ ಸಿದ್ದರಾಮಯ್ಯ ಉತ್ತರ -
ಕರ್ನಾಟಕ ರಾಜಕೀಯದಲ್ಲಿ ಫೋನ್ ಟ್ಯಾಪಿಂಗ್ ಚರ್ಚೆ ಜೋರು: ಗೃಹ ಸಚಿವರು ಹೇಳಿದ್ದೇನು? -
ಹೋರಾಟಗಳ ಮೂಲಕ ಪಾಠ ಕಲಿತು ಬಂದವನು ನಾನು: ಡಿಸಿಎಂ ಡಿ.ಕೆ. ಶಿವಕುಮಾರ್ | DK Shivakumar -
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸುವ ವಿಚಾರ, ಕೇಂದ್ರ ಸರ್ಕಾರಕ್ಕೆ ಡಿಸಿಎಂ ಮಹತ್ವದ ಮನವಿ | DK Shivakumar -
ಮಾಗಡಿ ಜನರಿಗೆ ಕಾವೇರಿ, ಹೇಮಾವತಿ, ಎತ್ತಿನಹೊಳೆ ನೀರು: ಸಿಹಿಸುದ್ದಿ ಕೊಟ್ಟ ಡಿ.ಕೆ.ಶಿವಕುಮಾರ್ -
ಬೆಂಗಳೂರಲ್ಲಿ ನೀರಿನ ಮಾಫಿಯಾ, 1 ಟ್ಯಾಂಕರ್ ನೀರಿಗೆ 3000 ರೂ: ಅಕ್ರಮ ಟ್ಯಾಂಕರ್ ಜಪ್ತಿಗೆ ಎಎಪಿ ಆಗ್ರಹ -
ಒಂದೇ ವರ್ಷದಲ್ಲಿ 800 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ 23ರ ಹರೆಯದ ಅಂಜಲಿ ಸರ್ದಾನಾ -
Viral : ರ್ಯಾಪಿಡೋ ಬುಕ್ ಮಾಡಿದವನಿಗೆ ಕಾದಿತ್ತು ಬಿಗ್ ಶಾಕ್: ತನ್ನ ಶಾಲೆಯ 'ಕ್ಲಾಸ್ ಟಾಪರ್' ಈಗ ರ್ಯಾಪಿಡೋ ರೈಡರ್ -
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್












Click it and Unblock the Notifications