Get Updates
Get notified of breaking news, exclusive insights, and must-see stories!

ಕರ್ನಾಟಕ ಬಂದ್... ಅಕ್ಟೋಬರ್ 16 ಗುರುವಾರ ರಜೆ ಘೋಷಣೆ ಸಾಧ್ಯತೆ... School Holiday

ಶಾಲಾ & ಕಾಲೇಜುಗಳಿಗೆ ರಜೆ ಘೊಷಣೆ... ಹೀಗೆ ಪದೇ, ಪದೇ ಕರ್ನಾಟಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ಅದರಲ್ಲೂ, ಕಳೆದ ಕೆಲವು ತಿಂಗಳಿಂದ ಶಾಲಾ & ಕಾಲೇಜುಗಳಿಗೆ ಭರ್ಜರಿ ರಜೆಗಳು ಸಿಕ್ಕಿವೆ. ಮೊನ್ನೆ ಮೊನ್ನೆ ಕರ್ನಾಟಕ ಸರ್ಕಾರ ಹೊಸ ಘೋಷಣೆ ಹೊರಡಿಸಿ, ಸರ್ಕಾರಿ & ಅನುದಾನಿತ ಶಾಲೆಗಳ ದಸರಾ ರಜೆ ವಿಸ್ತರಣೆ ಮಾಡಿದೆ. ಆದ್ರೆ ಕರ್ನಾಟಕ ಖಾಸಗಿ ಶಾಲಾ & ಕಾಲೇಜುಗಳು ಈಗ ಮಾಮೂಲಿಯಂತೆ ಆರಂಭವಾಗಿವೆ. ಆದರೆ ಇದೀಗ ದಿಢೀರ್ ಒಂದು ಸುದ್ದಿ ಸಂಚಲನ ಸೃಷ್ಟಿಸಿದೆ. ಕರ್ನಾಟಕ ಬಂದ್... ಅಕ್ಟೋಬರ್ 16 ಗುರುವಾರ ರಜೆ ಘೋಷಣೆ ಸಾಧ್ಯತೆ...

ರಜೆ.. ರಜೆ.. ರಜೆ... ಹೀಗೆ 2025 ವರ್ಷವನ್ನು ಕನ್ನಡಿಗರು ಎಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ. ಯಾಕಂದ್ರೆ ಕರ್ನಾಟಕ ರಾಜ್ಯದಲ್ಲಿ ಪದೇ ಪದೇ ರಜೆಗಳು ಸಿಕ್ಕಿದ್ದೇ 2025 ವರ್ಷದಲ್ಲಿ. ಹೀಗೆಲ್ಲಾ ಭಾರಿ ಭರ್ಜರಿ ರಜೆ ನೀಡಿರುವ 2025 ವರ್ಷದಲ್ಲಿ ಮತ್ತೊಂದು ಸುದ್ದಿ ಇದೀಗ ಹಬ್ಬಿದೆ. ಪ್ರತಿಭಟನೆ, ಮುಷ್ಕರ, ಮಳೆ, ಹಬ್ಬ, ಜಯಂತಿ ಸೇರಿದಂತೆ ಹಲವು ಕಾರಣಗಳಿಗೆ ಸಿಕ್ಕಿರುವ ರಜೆ ಇದೀಗ ಮತ್ತೊಮ್ಮೆ ಬಂದಿದೆ. ಅಂದಹಾಗೆ ಈ ಬಾರಿ ಬಂದ್ ಮಾಡಿ ರಜೆ ಕೊಡಿಸಲು ಕೆಲವರು ತಯಾರಿ ನಡೆಸುತ್ತಿದ್ದಾರೆ ಅಂತೆ...

School Holiday May Announce In Karnataka On October 13 Of 2025 For This Reason

ಕರ್ನಾಟಕ ಬಂದ್... ಅಕ್ಟೋಬರ್ 16 ಗುರುವಾರ...

ಹೌದು, ಕರ್ನಾಟಕದಲ್ಲಿ ಮತ್ತೊಮ್ಮೆ ಬಂದ್ ಮಾಡಲು ತಯಾರಿ ಇದೀಗ ಸಾಗಿದೆ. ಕೆಲವು ದಿನಗಳ ಹಿಂದೆ ಭಾರತ್ ಬಂದ್ ಮಾಡಿದ್ದಾಗ ಕೂಡ ಕರ್ನಾಟಕ ಬಂದ್ ಮಾಡಲಾಗಿತ್ತು. ಹೀಗಾಗಿ ರಜೆ ಘೋಷಣೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಕರ್ನಾಟಕ ಬಂದ್ ಮಾಡಲು ತಯಾರಿ ನಡೆದಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಇಂತಹ ಸಮಯದಲ್ಲೇ ದಿಢೀರ್ ಕರ್ನಾಟಕ ಬಂದ್... ಅಕ್ಟೋಬರ್ 16 ಗುರುವಾರ ರಜೆ ಘೋಷಣೆ ಸಾಧ್ಯತೆ ಎಂಬ ಸುದ್ದಿ ಭಾರಿ ಸಂಚಲನ ಸೃಷ್ಟಿ ಮಾಡಿದೆ...

ಕರ್ನಾಟಕ ಬಂದ್ ಗ್ಯಾರಂಟಿ?

ಅಂದಹಾಗೆ ನಟ ದರ್ಶನ್ ತೂಗುದೀಪ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೇಕು ಬೇಕು ಅಂತಾ ಕಷ್ಟ ಕೊಡ್ತಿದ್ದಾರೆ. ನಟ ದರ್ಶನ್ ತೂಗುದೀಪ್ ಅವರಿಗೆ ಸರಿಯಾದ ಸೌಲಭ್ಯ ಕೊಡುತ್ತಿಲ್ಲ. ಆದರೂ ರೌಡಿಶೀಟರ್ & ಬೇರೆಯವರೆಲ್ಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ನಾವು ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ನ್ಯಾಯ ಒದಗಿಸುತ್ತೇವೆ, ಪ್ರತಿಭಟನೆ ಮೂಲಕ ನಮ್ಮ ಆಕ್ರೋಶ ಹೊರ ಹಾಕುತ್ತೀವಿ ಅಂತಾ ಇದೀಗ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆ ಶುರು ಮಾಡಿದ್ದಾರೆ. ಈ ಮೂಲಕ ಅಕ್ಟೋಬರ್ 16 ಗುರುವಾರ ನಾವು ಕರ್ನಾಟಕ ಬಂದ್ ಮಾಡಲಿದ್ದೇವೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಆದರೆ ಕರ್ನಾಟಕ ಬಂದ್ ಮಾಡಲು ಪರ್ಮಿಷನ್ ಸಿಗುತ್ತಾ? ಅನ್ನೋ ಚರ್ಚೆ ಶುರುವಾಗಿದೆ... ಇದಕ್ಕೆಲ್ಲಾ ಉತ್ತರ ಸಿಗಲು ಕಾದು ನೋಡಬೇಕಿದೆ...

ರೇಣುಕಾಸ್ವಾಮಿ ಕೊಲೆ ನಂತರ ಸಂಚಲನ!

ಅಂದಹಾಗೆ ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ ಆಗಿದ್ದ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಇಡೀ ಜೀವನ ಈಗ ಸಂಕಷ್ಟಕ್ಕೆ ಸಿಲಕಿದೆ. ಹೀಗಿದ್ದಾಗ ಚಾಪೆ, ದಿಂಬು, ಬ್ಲಾಂಕೆಟ್ ಪಡೆಯೋಕೆ ಕೂಡ ನರಳಾಟ ಶುರುವಾಗಿದೆ. ಅದರಲ್ಲೂ ನಟ ದರ್ಶನ್ ತೂಗುದೀಪ್ ಅವರ ಜೀವನ ರೇಣುಕಾಸ್ವಾಮಿ ಕೊಲೆ ಕೇಸ್ ನಂತರ ಹೊಸ ಹೊಸದಾಗಿ ತಿರುವು ಪಡೆಯುತ್ತಿದ್ದು & ಡೆವಿಲ್ ಸಿನಿಮಾ ರಿಲೀಸ್ ಆಗುವ ಮೊದಲೇ ಆಘಾತ ಕೂಡ ಎದುರಾಗಿದೆ. ಹೀಗಾಗಿ ಬೇಕು ಅಂತಲೇ ನಟ ದರ್ಶನ್ ಅವರಿಗೆ ಹೀಗೆಲ್ಲಾ ತೊಂದರೆ ಕೊಡುತ್ತಿದ್ದಾರೆ ಅಂತಾ ಆರೋಪಿಸಿ ಇದೀಗ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರಂತೆ ದರ್ಶನ್ ಅವರ ಅಭಿಮಾನಿಗಳು. ಹಾಗೇ ಬೃಹತ್ ಹೋರಾಟ ನಡೆಸಿ, ಮನವಿ ಪತ್ರವನ್ನು ಸಿಎಂಗೆ ತಲುಪಿಸಿ ನಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸುತ್ತೇವೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಾ ಇದ್ದಾರೆ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು.

ಡೆವಿಲ್ ಸಿನಿಮಾ ದೊಡ್ಡ ಹಿಟ್...

ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ತಮ್ಮ ನೆಚ್ಚಿನ ನಟನ ಡೆವಿಲ್ ಸಿನಿಮಾಗೆ ಬೆಂಬಲವಾಗಿ ನಿಂತಿದ್ದಾರೆ. ಅಲ್ಲದೆ ಈ ಸಿನಿಮಾ ಪಕ್ಕಾ 200 ಡೇಸ್ ಅಂತಾ ಚಾಲೆಂಜ್ ಹಾಕುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗಾಗಿ ಆದಷ್ಟು ಬೇಗನೇ ನಟ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರಲಿ, ಆ ಮೂಲಕ ಡೆವಿಲ್ ಸಿನಿಮಾ ರಿಲೀಸ್ ಸಮಯದಲ್ಲಿ ಸಾಕಷ್ಟು ಸಹಾಯ ಆಗಲಿ ಅಂತಾ ಬೇಡಿಕೊಳ್ಳುತ್ತಿದ್ದಾರೆ ಕೋಟಿ ಕೋಟಿ ಫ್ಯಾನ್ಸ್. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಮಸ್ಯೆ ಮಾಡುತ್ತಾ, ಸರಿಯಾಗಿ ಸೌಲಭ್ಯ ಕೊಟ್ಟಿಲ್ಲ ಅಂತಾ ಈಗ ಅಭಿಮಾನಿಗಳು ಆಕ್ರೋಶ ಕೂಡ ಹೊರ ಹಾಕುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+