Rain Alert: ಮಳೆ.. ಮಳೆ.. 72 ಗಂಟೆಗಳಲ್ಲಿ ಮತ್ತೆ ಮಳೆ ಆರ್ಭಟ ಶುರು...
ಮಳೆ.. ಮಳೆ.. ಮಳೆ.. ಹೀಗೆ ಪದೇ ಪದೇ ಮಳೆ ಬಗ್ಗೆ ಕೇಳಿ ಕೇಳಿ ಸುಸ್ತಾಗಿದ್ದರೂ ಮಳೆರಾಯ ಮಾತ್ರ ಸೈಲೆಂಟ್ ಆಗುತ್ತಿಲ್ಲ ಬದಲಾಗಿ ವೈಲೆಂಟ್ ಆಗುತ್ತಿದ್ದು ಮತ್ತಷ್ಟು ಮಳೆ ಸುರಿಯುತ್ತಾ ಇದೆ. ಇದೇ ರೀತಿ ಇದೀಗ ಮತ್ತೆ ಮಳೆರಾಯ ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಅದರಲ್ಲೂ ಮಳೆಯ ಕಾರಣಕ್ಕೆ ಈಗಾಗಲೇ ಹಲವು ಸಮಸ್ಯೆ ಎದುರಾಗಿ ಇನ್ನೇನು ಬಿಡು ಈಗಲಾದರೂ ಮಳೆ ನಿಂತು ಹೋಯ್ತಲ್ಲ ಅಂತಾ ಕನ್ನಡಿಗರು ಖುಷಿಪಡುವ ಸಮಯದಲ್ಲೇ, ಮಳೆ.. ಮಳೆ.. 72 ಗಂಟೆಗಳಲ್ಲಿ ಮತ್ತೆ ಮಳೆ ಆರ್ಭಟ ಶುರು...
ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ... ಹೀಗೆ ಈ ಪದ್ಯವನ್ನು ಈಗ ಉಲ್ಟಾ ಹೇಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಉಯ್ಯೋ ಉಯ್ಯೋ ಮಳೆರಾಯ ಬದಲಾಗಿ, ನಿಲ್ಲೋ ನಿಲ್ಲೋ ಮಳೆರಾಯ ಅನ್ನೋ ಪರಿಸ್ಥಿತಿ ಎದುರಾಗಿದೆ. ಯಾಕಂದ್ರೆ ಅಷ್ಟೊಂದು ಮಳೆ ಸುರಿದ ಕಾರಣ ಕನ್ನಡ ನಾಡಿನಲ್ಲಿ ಹಸಿ ಬರ ಶುರುವಾಗುವ ಆತಂಕ ಎದುರಾಗಿದೆ. ಮಳೆ ಬರದೇ ಇದ್ದರೆ ಒಣ ಬರ, ಹಾಗೇ ಅತಿಯಾಗಿ ಮಳೆ ಬಿದ್ದರೆ ಅದರಿಂದ ಸೃಷ್ಟಿ ಅಗುವ ಪ್ರಾಕೃತಿಕ ವಿಕೋಪಕ್ಕೆ ಹಸಿ ಬರ ಎನ್ನಬಹುದು. ಇಂತಹ ಸಮಯದಲ್ಲೇ... ಮುಂದಿನ 72 ಗಂಟೆಗಳಲ್ಲಿ ಮತ್ತೆ ಮಳೆ ಆರ್ಭಟ ಶುರು...

ಮಳೆ ಆರ್ಭಟದ ನಡುವೆ ರಜೆ ಘೋಷಣೆ?
ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಮತ್ತೆ ಘೋರ ಮಳೆ ಸುರಿಯುವ ಬಗ್ಗೆ ಮುನ್ನೆಚ್ಚರಿಕೆ ಸಿಕ್ಕಿದೆ. ನವೆಂಬರ್ 05 ಬುಧವಾರ ನಂತರ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ. ಮಳೆ ಸುರಿಯುತ್ತಿರುವ ರೀತಿಗೆ ಜನ ಬೆಚ್ಚಿ ಬಿದ್ದಿದ್ದು, ಯಾಕಪ್ಪ ಚಳಿಗಾಲ ಎಂಟ್ರಿ ಆಗುತ್ತಿದ್ದರೂ ಮಳೆ ಆರ್ಭಟ ಕಡಿಮೆ ಆಗಿಲ್ಲ ಅಂತಾ ಗೊಣಗುವಂತೆ ಆಗಿದೆ. ಈ ರೀತಿ ಮಳೆ ಕಡಿಮೆ ಆಗುವ ಬದಲಾಗಿ ಈಗ ಮಳೆ ಮತ್ತೆ ತನ್ನ ಆರ್ಭಟ ತೋರಿಸಲು ಸಜ್ಜಾಗಿದೆ. ಹೀಗೆ ಇದ್ದಾಗ 72 ಗಂಟೆಗಳಲ್ಲಿ ಮತ್ತೆ ಮಳೆ ಆರ್ಭಟ ಶುರುವಾಗುವ ಮುನ್ಸೂಚನೆ ಇದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ?
ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಅಂದಹಾಗೆ ಇದೀಗ ದಕ್ಷಿಣ ಕರ್ನಾಟಕ ಭಾಗದಲ್ಲಿ ಬೆಂಗಳೂರು, ಮೈಸೂರು, ರಾಮನಗರ ಮತ್ತು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಸುರಿಯುವ ಮೂನ್ಸೂಚನೆ ಸಿಗುತ್ತಿದೆ. ಈ ನಡುವೆ ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಮೂಲಕ ಮಳೆ ಬಗ್ಗೆ ಮತ್ತೆ ಭಯ ಶುರುವಾಗಿದ್ದು, ಯಾವಾಗ ಮಳೆ ನಿಂತು ನೆಮ್ಮದಿ ಸಿಗುತ್ತೆ ಅಂತಾ ಜನರು ಕಾಯುತ್ತಿದ್ದಾರೆ. ಯಾಕಂದ್ರೆ, ಈಗಾಗಲೇ ಸಾಕು ಸಾಕು ಅಂತಾ ಹೇಳುವಷ್ಟು ಮಳೆ ಸುರಿದಿದ್ದರೂ ಮತ್ತೆ ಮಳೆ ಆರ್ಭಟ ನಿಲ್ಲುತ್ತಿಲ್ಲ ಎಂಬ ಬೇಸರ ಹೊರಹಾಕ್ತಾ ಇದ್ದಾರೆ ಕನ್ನಡಿಗರು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications