ಅಂತರ ರಾಜ್ಯ ಸಂಚಾರ; ಸಿಹಿ ಸುದ್ದಿ ಕೊಟ್ಟ ಕರ್ನಾಟಕ ಪೊಲೀಸ್
ಬೆಂಗಳೂರು, ಮೇ 22 : ಕರ್ನಾಟಕದಿಂದ ಅಂತರ ರಾಜ್ಯ ಸಂಚಾರ ನಡೆಸುವ ಜನರಿಗೆ ಕರ್ನಾಟಕದ ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ಮುಂದೆ ಅಂತರ ರಾಜ್ಯ ಸಂಚಾರ ಮಾಡಬೇಕಾದರೆ ಕರ್ನಾಟಕ ಪೊಲೀಸರು ನೀಡುವ ಪಾಸು ಪಡೆಯುವ ಅಗತ್ಯವಿಲ್ಲ.
Recommended Video
ಶುಕ್ರವಾರ ಡಿಜಿ& ಐಜಿಪಿ ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ಹೋಗಲು ಪಾಸುಗಳ ಅಗತ್ಯವಿಲ್ಲ (ಒನ್ ವೇ) ಎಂದು ಹೇಳಿದ್ದಾರೆ. ಆದರೆ, ಜನರು ತಾವು ಪ್ರಯಾಣ ಮಾಡುವ ರಾಜ್ಯದ ಒಪ್ಪಿಗೆಯನ್ನು ಪಡೆದಿರಬೇಕಾಗುತ್ತದೆ.
ಅಂತರ ಜಿಲ್ಲಾ ಸಂಚಾರ ಪಾಸು; ಪೊಲೀಸರ ಮಹತ್ವದ ಆದೇಶ
ಇಷ್ಟು ದಿನ ಜನರು ಅಂತರ ರಾಜ್ಯ ಪ್ರಯಾಣ ಮಾಡಲು ಕರ್ನಾಟಕ ಪೊಲೀಸರು ನೀಡುವ ಪಾಸು ಪಡೆಯಬೇಕಿತ್ತು. ಅವರು ಪ್ರಯಾಣ ಮಾಡುವ ರಾಜ್ಯದ ಪಾಸುಗಳನ್ನು ಪಡೆಯಬೇಕಿತ್ತು. ಆದರೆ, ಈಗ ಕರ್ನಾಟಕದ ಪೊಲೀಸರ ಒಪ್ಪಿಗೆ ಬೇಕಿಲ್ಲ.
ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ
ವಿಮಾನ ಪ್ರಯಾಣಿಕರ ಗಮನಕ್ಕೆ : ಬೇರೆ ರಾಜ್ಯಗಳಿಂದ ವಿಮಾನ ಸಂಚಾರಕ್ಕಾಗಿ ಕರ್ನಾಟಕಕ್ಕೆ ಬರುವ ಪ್ರಯಾಣಿಕರು ಕ್ವಾರಂಟೈನ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಅವರು ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಬಹುದು ಎಂದು ಕರ್ನಾಟಕ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕ್ವಾರಂಟೈನ್; ಹೋಟೆಲ್ ದರ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ
ವಿಮಾನ ಪ್ರಯಾಣಕ್ಕಲ್ಲದೇ ಬೇರೆ ಕಾರಣಕ್ಕಾಗಿ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಜನರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಆದರೆ, ಅಂತರಾಷ್ಟ್ರೀಯ ವಿಮಾನ ಏರಲು ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲ.
No pass is required from Karnataka to go out of state ( one way) if you have written consent of the receiving state.
— DGP KARNATAKA (@DgpKarnataka) May 22, 2020
ಕರ್ನಾಟಕ ಪೊಲೀಸರು ಎರಡು ದಿನದ ಹಿಂದೆ ಅಂತರ ಜಿಲ್ಲಾ ಸಂಚಾರಕ್ಕೆ ಪಾಸು ಪಡೆಯುವುದು ಬೇಡ ಎಂದು ಸ್ಪಷ್ಟಪಡಿಸಿದ್ದರು. ಈಗ ಅಂತರರಾಜ್ಯ ಪಾಸುಗಳನ್ನು ತೆಗೆದುಹಾಕಲಾಗಿದೆ.