2014: ಹೊಸ ವರ್ಷದ ಹೊಸ್ತಿಲಲ್ಲಿ ನಾಲ್ಕು ಮಂದಿ ಸಾವು

ಉಳಿದಂತೆ ಕೆಲವೊಂದು ಸಣ್ಣಪುಟ್ಟ ಅಹಿತಕರ ಘಟನೆಗಳು ಹೊರತುಪಡಿಸಿ ಹೆಚ್ಚೇನೂ ಅನಾಹುತಗಳು ನಡೆದಿಲ್ಲ. Rather ಜನ ಇತ್ತಿತ್ಲಾಗೆ ಜಾಗೃತರಾಗುತ್ತಿದ್ದು ಸಂಯಮ ಮತ್ತು ತುಸು ಎಚ್ಚರಿಕೆಯಿಂದ ಜನವರಿ 1ನ್ನು ಅಪ್ಪಿಕೊಳ್ಳುತ್ತಿದ್ದಾರೆ. ಜತೆಗೆ ಪೊಲೀಸ್ ಭದ್ರತೆಯೂ ಬಿಗಿಯಾಗಿದ್ದು, ಕಿಡಿಗೇಡಿಗಳಿಗೆ ಹೆಚ್ಚು ಅವಕಾಶ ಇಲ್ಲದಂತಾಗಿದೆ. ಆದರೂ...
ಬೆಂಗಳೂರಿನಲ್ಲಿ ಟೌನ್ ಹಾಲ್ ಸಮೀಪ ಯುವಕರ ಗುಂಪೊಂದು ಸಾಹಸ ಮೆರೆಯಲು ಹೋಗಿ ಒಬ್ಬನನ್ನು ಕಳೆದುಕೊಂಡಿದೆ. ಜತೆಗೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದು ಸ್ವಯಂಕೃತಾಪರಾಧವೇ ಸರಿ. (ಪುತ್ರನ ಅಂತಿಮ ಯಾತ್ರೆಯಲ್ಲಿ ಜನಸಾಗರ, ಕಣ್ಣೀರಿಟ್ಟ ಅಜರ್)
ಏನಾಯ್ತೆಂದರೆ ನಾಲ್ಕು ಮಂದಿ ಯುವಕರು ಮಧ್ಯರಾತ್ರಿಯಲ್ಲಿ ಟೌನ್ ಹಾಲ್ ಎದುರು ಸುವಿಶಾಲ ರಸ್ತೆಗಳಲ್ಲಿ ವೀಲಿಂಗ್ ಮಾಡಲು ಹೋಗಿದ್ದಾರೆ. ಅದೂ ಮೊಪೆಡ್ ದ್ವಿಚಕ್ರ ವಾಹನಗಳಲ್ಲಿ. ವೀಲಿಂಗ್ ಮೋಜಿನಲ್ಲಿದ್ದಾಗ ಒಬ್ಬ ನಿಯಂತ್ರಣ ತಪ್ಪಿದ್ದಾನೆ.
ಇದರಿಂದ ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. (ಅಜರುದ್ದೀನ್ ಗೆ ಪುತ್ರ ಶೋಕಂ ನಿರಂತರಂ) ಪರಿಣಾಮ ಒಬ್ಬ ಸೀದಾ ಯಮನ ಪಾದ ಸೇರಿದ್ದಾನೆ. 24 ವರ್ಷದ ಸಲೀಂ ಮೃತಪಟ್ಟ ಯುವಕ. ಈತ ವಾಲ್ಮೀಕಿನಗರದ ನಿವಾಸಿ. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಮತ್ತಿನಲ್ಲಿದ್ದ ಚಾಲಕ ಕಾರನ್ನು ಸೀದಾ ಚರಂಡಿಗಿಳಿಸಿದ: ಇನ್ನು, ಮಂಡ್ಯ ಜಿಲ್ಲೆ ಪಾಂಡವರಪುರ ತಾಲೂಕಿನಲ್ಲಿ ಕಾರು ಅಪಘಾತ ಸಂಭವಿಸಿದೆ. ಮತ್ತಿನಲ್ಲಿದ್ದ ಕಾರಿನ ಚಾಲಕ ಕಾರನ್ನು ಸೀದಾ ಚರಂಡಿಗೆ ಉರುಳಿಸಿದ್ದಾನೆ. ಚಾಲಕ, ಮೇಲುಕೋಟೆಯ ವಿಜಯ್ ಕುಮಾರ್ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿವಮೊಗ್ಗದ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶರಾವತಿ ಹಿನ್ನೀರಿನಲ್ಲಿ ದಂಪತಿ ಸೇರಿದಂತೆ ಒಂದೇ ಕುಟುಂಬದ ಮೂವರು ನೀರು ಪಾಲಾಗಿದ್ದಾರೆ. ಇದರ ಹೊರತಾಗಿ, ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡಿನಲ್ಲಿ ನಿನ್ನೆ ಸಂಜೆ ಬಿಎಂಟಿಸಿ ಬಸ್ಸೊಂದು ಸ್ಕೂಟರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications