ಲಿಂಗಾಯತ vs ವೀರಶೈವ : ಎರಡೂ ಅಪ್ಪಟ ಜಂಗಮ ತತ್ವ
ವೀರಶೈವ ಮತ್ತು ಲಿಂಗಾಯತ ಬೇರೆಣಿಕೆಗಳು ಮತ್ತೆ ಇತ್ತೀಚೆಗೆ ಮುನ್ನೆಲೆಗೆ ಬರುತ್ತಿವೆ. ಸ್ಥೂಲ ಮೇಲ್ನೋಟದಲ್ಲಿ ಜೀವನಶೈಲಿ ಪೂಜಾವಿಧಾನ ಪ್ರತಿಪಾದನೆಗಳು ಒಂದೇ ಎನಿಸಿದರೂ ಆಚರಣೆಗಳಲ್ಲಿ ಕೆಲ ಸೂಕ್ಷ್ಮ ವ್ಯತ್ಯಾಸಗಳಿವೆ. ಈ ವ್ಯತ್ಯಾಸವು ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೇಳಲು ಬಲವಾದ ಹಾಗೂ ಸೂಕ್ತವಾದ ಆಧಾರಗಳಲ್ಲ.
ಶರಣ ಚಳವಳಿಯ ಯಶಸ್ಸಿನ ನಂತರ ಅನೇಕ ನಾಥ ಪಂಥಗಳು, ಮಾಹೇಶ್ವರ (ಮಹೇಶ್ವರನನ್ನು ಪೂಜಿಸುವ), ಶೈವ (ಶಿವನನ್ನು ಪೂಜಿಸುವ) ಶರಣ ಚಳುವಳಿಯಲ್ಲಿ ವಿಲೀನವಾಗಿ ಹೋದವು. ಶರಣ ಚಳುವಳಿಯ ಒಂದು ವಿಶೇಷತೆಯೆಂದರೆ ಎಲ್ಲರಿಗೂ ತಮ್ಮ ಮೂಲ ಧರ್ಮವನ್ನು, ವ್ರತ ಅಥವಾ ದೇವರುಗಳನ್ನು ಆಚರಿಸುವ ಸ್ವಾತಂತ್ರವನ್ನು ಕೊಟ್ಟು ಸಮಾಜದಲ್ಲಿ ಸಮಾನತೆಯನ್ನು ಆಚರಿಸುವುದು.
ಬಸವಣ್ಣನ ಕಾಲಾನಂತರ ಅನೇಕ ಕವಲುಗಳಾಗಿ ಮುನ್ನಡೆದ ಲಿಂಗಾಯತ ಧರ್ಮವು ಕೆಳದಿ, ಹೊಯ್ಸಳ, ವಿಜಯನಗರ ಇನ್ನಿತರ ಕಡೆ ರಾಜಾಶ್ರಯವನ್ನು ಪಡೆದು ನಿಂತರೆ ಬಸವಣ್ಣನ ಕಲ್ಯಾಣ ಕ್ರಾಂತಿ ನಡೆದೆಡೆ ತನ್ನ ಮೂಲತತ್ವಕ್ಕನುಗುಣವಾಗಿ ಪ್ರಜಾಧರ್ಮವಾಗಿಯೇ ಉಳಿಯಿತು, ವೀರಶೈವ ಮತ್ತು ಲಿಂಗಾಯತ ಎರಡೂ ಪರ್ಯಾಯ ಪದಗಳಾಗಿ ಬಳಕೆಯಲ್ಲಿವೆ. ಮೊದಲ ಬಾರಿಗೆ ವೀರಶೈವ ಪದವು ಬಸವ ಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ ಭೀಮಕವಿಯ "ಬಸವ ಪುರಾಣ" ದಲ್ಲಿ ಕಂಡು ಬರುತ್ತದೆ.

ಕೆಲ ಒಳ ಆಚರಣೆಗಳನ್ನು ಹೀಗೆ ವಿಂಗಡಿಸಬಹುದು.
ವೀರಶೈವ: ದ್ವೈತ
ಲಿಂಗಾಯತ : ಅದ್ವೈತ
ವೀರಶೈವ: 5 ಪೀಠಗಳು (ರಂಭಾಪುರಿ,ಕಾಶಿ,ಕೇದಾರ,ಉಜ್ಜಯನಿ, ಶ್ರೀಶೈಲ)
ಲಿಂಗಾಯತ: ಸ್ಥಳೀಯ ಮಠಗಳು(ಉದಾ: ಸಿದ್ದಗಂಗಾ,ಸಿರಿಗೆರೆ,ಸುತ್ತೂರು, ಬಾಲ್ಕಿ,ಗದಗ, ಕೊಪ್ಪಳ, ಅಥಣಿ, ಚಿತ್ರದುರ್ಗ ಇತ್ಯಾದಿ)
ಓದು
ವೀರಶೈವ: ಸಿದ್ಧಾಂತಶಿಖಾಮಣಿ, ವೇದಗಳು.
ಲಿಂಗಾಯತ: ವಚನಗಳು, ಶೂನ್ಯಸಂಪಾದನೆ.
ಮೂಲಪುರುಷ:
ವೀರಶೈವ: ಪಂಚ ಆಚಾರ್ಯರು. (ರೇಣುಕಾಚಾರ್ಯ, ಏಕೋರಾಮಾರಾಧ್ಯ,ಪಂಡಿತಾರಾಧ್ಯ,ಮರುಳಾರಾಧ್ಯ ವಿಶ್ವಾರಾಧ್ಯ - ಪೀಠಗಳಿಗೊಬ್ಬರು )
ಲಿಂಗಾಯತ: ಲೋಕಾಯತ ಹಿನ್ನೆಲೆ. (ಯಾರೂ ಇಲ್ಲ)
ಧಾರಣೆ:
ವೀರಶೈವ: ವಿಭೂತಿ, ಗಂಧ, ಅರಿಷಿಣ, ಕುಂಕುಮ.
ಲಿಂಗಾಯತ: ವಿಭೂತಿ
ಸಾಮ್ಯತೆಗಳು:
ಲಿಂಗಪೂಜೆ, ಲಿಂಗಧಾರಣೆ. ಲೋಕಾಯತ ಹಿನ್ನೆಲೆ, ನೀರಿನಿಂದ ಪೂಜೆ. ಉದಾ: ರುದ್ರಾಭಿಷೇಕ
(ಆರ್ಯರದು ಬೆಂಕಿಯ ಪೂಜೆ.ಉದಾ:ಹೋಮ)
ಮಡಿಮೈಲಿಗೆಗಳು:
imported as process of Brahminization.
ಹುಟ್ಟು ಸಾವಿನ ಸೂತಕಗಳು:
ಎರಡರಲ್ಲೂ ಇಲ್ಲ. ಎರಡರಲ್ಲೂ ಸತ್ತವರನ್ನು ಹೂಳಲಾಗುತ್ತದೆ. ವಿಭೂತಿ ಹೂಳುವುದರ ಸಮಯದಲ್ಲಿ ಬಳಕೆಯಾಗುವ ಬಹುಮುಖ್ಯ ಘಟಕಾಂಶ ವಿಭೂತಿ.
ಲಿಂಗಾಯತ ಎನ್ನುವುದು ಧರ್ಮವಾದರೆ ವೀರಶೈವ ಎನ್ನುವುದು ವ್ರತ! ಎರಡೂ ಅಪ್ಪಟ ಜಂಗಮ ತತ್ವಗಳು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications