ಲಕ್ಕುಂಡಿಯಲ್ಲಿ ಮುಂದುವರಿದ ಉತ್ಖನನ: ಅಗೆದಷ್ಟು ಸಿಗುತ್ತಿವೆ ಪ್ರಾಚೀನ ಅವಶೇಷಗಳು
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ದೊರೆತ ಬಳಿಕ 'ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ'ದ ಅಧಿಕಾರಿಗಳು ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಉತ್ಖನನ ಕಾರ್ಯ ಮುಂದುವರಿಸಿದ್ದಾರೆ. ಇದೀಗ ಮತ್ತೊಂದು ಶಿಲಾಯುಗದ ಕೈಕೊಡಲಿ ಹಾಗೂ ಕಂಬದ ಬೋಧಿಗೆ ಪತ್ತೆ ಆಗಿದೆ. ಇದನ್ನು ವಶಕ್ಕೆ ಪಡೆದ ಅಧಿಕಾರಿಗಳು ಟ್ಯಾಗ್ ಹಾಕಿದ್ದು, ಪರಿಶೀಲಿಸುತ್ತಿದ್ದಾರೆ.
ಲಕ್ಕುಂಡಿಯಲ್ಲಿ ಸರ್ಕಾರದ ವತಿಯಿಂದ ಉತ್ಖನನ ಕಾರ್ಯ ಮುಂದುವರಿದಿದೆ. ಐದನೇ ದಿನದ ಉತ್ಖನನ ಕಾರ್ಯದಲ್ಲಿ ಸೋಮವಾರ ನವಶಿಲಾಯುಗದ ಕೈ ಕೊಡಲಿ ಮತ್ತು ಬೋಧಿಗೆ ಪ್ರಾಚ್ಯ ಅವಶೇಷ ದೊರೆತಿದೆ. ಕೈ ಕೊಡಲಿ ಆಕಾರದ ಕಲ್ಲು ಜೊತೆಗೆ ಕಂಬದ ಮೇಲೆ ಆಸೆರೆಯಾಗುವ (ದೇವಸ್ಥಾನಗಳಲ್ಲಿ ಕಂಬದ ಮೇಲೆ ಆಸೆರೆಗೆ ಅಳವಡಿಸಿರುವ ಅಗಲ ಆಕಾರದ ಶಿಲೆ) ಕಲ್ಲು ಬೋಧಿಗೆ ಪತ್ತೆ ಆಗಿದೆ. ಇದರ ಕುರಿತು ಪ್ರಾಚ್ಯವಸ್ತು ತಜ್ಞರು ತನಿಖೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿಗಳು ಸಿಗಲಿವೆ ಎಂದು 'ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ' ಸದಸ್ಯ ಸಿದ್ದು ಪಾಟೀಲ್ ಅವರು ತಿಳಿಸಿದ್ದಾರೆ.

ಉತ್ಖನನ ಕಾರ್ಯದ ನಾಲ್ಕನೇ ದಿನ ಭಾನುವಾರ (ಜನವರಿ 18) ರಂದು ನವ ಶಿಲಾಯುಗದಲ್ಲಿ ಬಳಕೆ ಆಗಿತ್ತು ಎನ್ನಲಾದ ಆಯುಧ ಮಾದರಿಯ ಕಲ್ಲು ಪತ್ತೆ ಆಗಿತ್ತು. ಈ ಕಲ್ಲಿನ ಬಳಕೆ, ಇತಿಹಾಸ ಪತ್ತೆಗೆ ತಜ್ಞರು ಮುಂದಾಗಿದ್ದಾರೆ.
ಮುಂದುವರಿದ ಲಕ್ಕುಂಡಿ ಉತ್ಖನನ ಕಾರ್ಯ
ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನ ಸಮೀಪದ ಗಂಗವ್ವ ರಿತ್ತಿ ಎಂಬುವವರು ಹೊಸ ಮನೆ ಕಟ್ಟಲು ಪಾಯ ಅಗೆಯುವ ವೇಳೆ ನಿಧಿ ಸಿಕ್ಕಿತ್ತು. ಅದಾದ ಬಳಿಕ ಮತ್ತೊಂದು ಗ್ರಾಮದ ಮತ್ತೊಂದು ಪ್ರದೇಶದಲ್ಲಿ ಮುತ್ತು, ಹವಳ ಸಿಕ್ಕಿದ್ದವು. ಬಳಿಕ ಸರ್ಕಾರ ಇಲ್ಲಿ ಮತ್ತಷ್ಟು ಪ್ರಾಚೀನ ವಸ್ತುಗಳು, ನಿಧಿ ಅಥವಾ ಅವಶೇಷಗಳು ಸಿಗುವ ವಿಶ್ವಾಸದಿಂದ ಉತ್ಖನನ ಕಾರ್ಯ ನಡೆಸಿದೆ. ಗ್ರಾಮದಲ್ಲಿ ಉತ್ಖನನ ಕೆಲಸಕ್ಕೆ ಸುಮಾರು 20ಕ್ಕೂ ಹೆಚ್ಚು ಮಹಿಳೆಯರು ಮತ್ತು 10ಕ್ಕೂ ಹೆಚ್ಚು ಮಂದಿ (ಒಟ್ಟು 35ಕ್ಕೂ ಅಧಿಕ ಕಾರ್ಮಿಕರು) ಕಾರ್ಮಿಕರಿಂದ ಉತ್ಖನನ ಕೆಲಸ ನಡೆಸಲಾಗುತ್ತಿದೆ.
ಮಹಿಳೆ ಹಾಗೂ ಪುರುಷ ಕಾರ್ಮಿಕರಿಗೆ ಪ್ರತಿ ದಿನಕ್ಕೆ 347 ರೂಪಾಯಿ ಯಂತೆ ಕೂಲಿ ನೀಡಲಾಗುತ್ತಿದೆ. ನಿತ್ಯ ಎಂಟು ಗಂಟೆಗಳ ಕಾಲ ದುಡಿಸಿಕೊಳ್ಳುತ್ತಾರೆ. ಇಷ್ಟು ಕಡಿಮೆ ಕೂಲಿ ಸಾಕಾಗುವುದಿಲ್ಲ. ಕೂಲಿ ಹಣವನ್ನು 600 ರೂಪಾಯಿಗೆ ಏರಿಕೆ ಮಾಡುವಂತೆ ಕಾರ್ಮಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಾಧಿಕಾರವು ಯಾವುದೇ ತೀರ್ಮಾನ ಮಾಡಿಲ್ಲ. ಮುಂದಿನ ಎರಡು ತಿಂಗಳ ವರೆಗೆ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರಿಯಲಿದೆ.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications