ಸಿಎಂ ಪರಿಹಾರ ನಿಧಿಗೆ ಹರಿದುಬಂದ ದೇಣಿಗೆ: ಜನತೆಗೆ ಲೆಕ್ಕಕೊಟ್ಟ ಎಚ್ಡಿಕೆ
ಬೆಂಗಳೂರು, ಆಗಸ್ಟ್ 25: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಂಕಷ್ಟಕ್ಕೆ ಒಳಗಾದ ಕೊಡಗು ಮತ್ತು ಇತರೇ ಜಿಲ್ಲೆಗಳ ಸಂತ್ರಸ್ತರಿಗೆ ನೆರವಾಗಲೆಂದು ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಹರಿದುಬಂದ ದೇಣಿಗೆಯ ಲೆಕ್ಕವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
'ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಕೃತಿ ವಿಕೋಪ 2018'ರ ಖಾತೆಗೆ ದಿನಾಂಕ 25/08/2018ರ ವರೆಗೆ ಸಲ್ಲಿಕೆಯಾಗಿರುವ ದೇಣಿಗೆ ಮೊತ್ತದ ವಿವರ ಈ ರೀತಿಯಿದೆ: (ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ)
> ಧನಾದೇಶ/ ಡಿ.ಡಿ ಗಳ ಮೂಲಕ ಸಲ್ಲಿಕೆಯಾಗಿರುವ ಮೊತ್ತ : ರೂ.14,01,89,688.00 (ಒಟ್ಟ 153 ಧನಾದೇಶ/ ಡಿ.ಡಿ ಗಳ ಮೂಲಕ ಸಲ್ಲಿಕೆಯಾಗಿದೆ)
> ಆನ್ಲೈನ್ (Pay TM ಒಳಗೊಂಡಂತೆ)ಖಾತೆಗೆ ಸಲ್ಲಿಕೆಯಾಗಿರುವ ಮೊತ್ತ : ರೂ. 9,13,93,177. 44
> ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಆಯ್ದ ದೇವಸ್ಥಾನಗಳ ನಿಧಿಯಿಂದ : ರೂ. 12,00,00,000.00
> ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ವತಿಯಿಂದ: ರೂ. 5,00,00,000.00
> ಹಟ್ಟಿ ಚಿನ್ನದ ಗಣಿ ಕಂಪನಿಯಿಂದ: ರೂ. 2,50,00,000.00
> ಸಂಘ ಸಂಸ್ಥೆಗಳು ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಿರುವ ಭರವಸೆಯ ಮೊತ್ತ : ರೂ. 2,50,00,000. 00 (ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (ನೋಂ) & (ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)
> ಇತರ: ರೂ. 1,00,00,000.00
ಒಟ್ಟು ಇದುವರೆಗೆ ಸಂಗ್ರಹವಾದ ದೇಣಿಗೆ : ರೂ. 46,15,82,865.44
ರಾಜ್ಯದಲ್ಲಿನ ಪ್ರಕೃತಿ ವಿಕೋಪ / ಅತಿವೃಷ್ಟಿಯಲ್ಲಿ ನೊಂದ ಸಂತ್ರಸ್ತರಿಗೆ ಸಹಾಯ ಮಾಡುವ ದಾನಿಗಳು ಈ ಕೆಳಕಂಡ ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ 2018ರ ಖಾತೆಗೆ ದೇಣಿಗೆ ಸಲ್ಲಿಸ ಬಹುದಾಗಿರುತ್ತದೆ.
ಖಾತೆಯ
ಹೆಸರು
:
ಮುಖ್ಯಮಂತ್ರಿಯವರ
ಪರಿಹಾರ
ನಿಧಿ
-
ಪ್ರಕೃತಿ
ವಿಕೋಪ
2018.
ಬ್ಯಾಂಕ್
ಹೆಸರು
:
ಸ್ಟೇಟ್
ಬ್ಯಾಂಕ್
ಆಫ್
ಇಂಡಿಯಾ
ಶಾಖೆ
:
ವಿಧಾನಸೌಧ
ಖಾತೆ
ಸಂಖ್ಯೆ
:
37887098605
ಐ.ಎಫ್.ಎಸ್.ಸಿ.
ಕೋಡ್
:
ಎಸ್ಬಿಐಎನ್
0040277
ಎಂ.ಐ.ಸಿ.ಆರ್.
ಸಂಖ್ಯೆ
:
560002419