ಸಚಿವರ ಕಚೇರಿ, ನಿವಾಸಗಳಿಗಾಗಿ 7.64 ಕೋಟಿ ವೆಚ್ಚ
ಬೆಂಗಳೂರು, ನವೆಂಬರ್ 21 : ರಾಜ್ಯದ ಸಚಿವರ ಕಚೇರಿ ಮತ್ತು ಸರ್ಕಾರಿ ನಿವಾಸಗಳ ದುರಸ್ತಿ, ನವೀಕರಣ ಹಾಗೂ ಪೀಠೋಪಕರಣಗಳಿಗಾಗಿ ಸರ್ಕಾರ 7.64 ಕೋಟಿ ವೆಚ್ಚ ಮಾಡಿದೆ. 2014ರ ಜನವರಿಯಿಂದ ಇಲ್ಲಿಯ ತನಕ ಇಷ್ಟು ಹಣವನ್ನು ಖರ್ಚು ಮಾಡಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ. ಗೋಪಾಲಯ್ಯ (ಜೆಡಿಎಸ್) ಪ್ರಶ್ನೆಗೆ ವಿಧಾನಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಈ ಕುರಿತು ಉತ್ತರ ನೀಡಿದ್ದಾರೆ. ಅತ್ಯಾವಶಕ ಕಾಮಗಾರಿಗಳನ್ನು ಮಾತ್ರ ವೆಚ್ಚವನ್ನು ಮಿತಿಗೊಳಿಸಿ ನಿರ್ವಹಿಸಲಾಗಿರುತ್ತದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ. [ಲೋಕಾ ಪದಚ್ಯುತಿ ನಿರ್ಣಯ ಸೋಮವಾರ ಮಂಡನೆ]

ಎಷ್ಟು ಖರ್ಚು? : 2014ರ ಜನವರಿಯಿಂದ 2015ರ ನವೆಂಬರ್ ತನಕ ಸಚಿವರ ಕಚೇರಿ ಹಾಗೂ ಅಧಿಕೃತ ನಿವಾಸಗಳ ದುರಸ್ತಿ/ಅಭಿವೃದ್ಧಿ/ನವೀಕರಣ ಹಾಗೂ ಪೀಠೋಪಕರಣಗಳಿಗಾಗಿ 7.64 ಲಕ್ಷ ರೂ. ಗಳನ್ನು ಸರ್ಕಾರ ವೆಚ್ಚ ಮಾಡಿದೆ. [ಸಚಿವರ ನಿವಾಸ ನವೀಕರಣಕ್ಕೆ ಕೋಟಿ-ಕೋಟಿ ಖರ್ಚು]
ಸಚಿವರ ಕಚೇರಿಗಳ ದುರಸ್ತಿ/ಅಭಿವೃದ್ಧಿ/ನವೀಕರಣಕ್ಕಾಗಿ ರೂ. 1.41 ಕೋಟಿ, ಕಚೇರಿಗಳಿಗೆ ಒದಗಿಸಲಾದ ಪೀಠೋಪಕರಣಗಳಿಗಾಗಿ ರೂ. 1.26 ಕೋಟಿ, ನಿವಾಸಗಳ ದುರಸ್ತಿ/ಅಭಿವೃದ್ಧಿ/ನವೀಕರಣಕ್ಕಾಗಿ 3.75 ಕೋಟಿ ರೂ. ಮತ್ತು ನಿವಾಸಗಳ ಪೀಠೋಪಕರಣಗಳಿಗೆ 1.20 ಕೋಟಿ ವೆಚ್ಚ ಮಾಡಲಾಗಿದೆ.
ಅಂದಹಾಗೆ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ಕೃಷ್ಣ, ಕಾವೇರಿ ಗೃಹಗಳಿಗೆ ಬೆಡ್ಶೀಟ್, ಪಿಲ್ಲೋ, ಟವಲ್, ಕಾಲು ಚೀಲ, ಕುಷನ್ ಕವರ್ಗಳಿಗಾಗಿ ಬರೋಬ್ಬರಿ 14 ಲಕ್ಷ 34 ಸಾವಿರ ರೂಪಾಯಿ ಖರ್ಚು ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿತ್ತು.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ












Click it and Unblock the Notifications