ಸಚಿವರ ಕಚೇರಿ, ನಿವಾಸಗಳಿಗಾಗಿ 7.64 ಕೋಟಿ ವೆಚ್ಚ
ಬೆಂಗಳೂರು, ನವೆಂಬರ್ 21 : ರಾಜ್ಯದ ಸಚಿವರ ಕಚೇರಿ ಮತ್ತು ಸರ್ಕಾರಿ ನಿವಾಸಗಳ ದುರಸ್ತಿ, ನವೀಕರಣ ಹಾಗೂ ಪೀಠೋಪಕರಣಗಳಿಗಾಗಿ ಸರ್ಕಾರ 7.64 ಕೋಟಿ ವೆಚ್ಚ ಮಾಡಿದೆ. 2014ರ ಜನವರಿಯಿಂದ ಇಲ್ಲಿಯ ತನಕ ಇಷ್ಟು ಹಣವನ್ನು ಖರ್ಚು ಮಾಡಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ. ಗೋಪಾಲಯ್ಯ (ಜೆಡಿಎಸ್) ಪ್ರಶ್ನೆಗೆ ವಿಧಾನಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಈ ಕುರಿತು ಉತ್ತರ ನೀಡಿದ್ದಾರೆ. ಅತ್ಯಾವಶಕ ಕಾಮಗಾರಿಗಳನ್ನು ಮಾತ್ರ ವೆಚ್ಚವನ್ನು ಮಿತಿಗೊಳಿಸಿ ನಿರ್ವಹಿಸಲಾಗಿರುತ್ತದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ. [ಲೋಕಾ ಪದಚ್ಯುತಿ ನಿರ್ಣಯ ಸೋಮವಾರ ಮಂಡನೆ]

ಎಷ್ಟು ಖರ್ಚು? : 2014ರ ಜನವರಿಯಿಂದ 2015ರ ನವೆಂಬರ್ ತನಕ ಸಚಿವರ ಕಚೇರಿ ಹಾಗೂ ಅಧಿಕೃತ ನಿವಾಸಗಳ ದುರಸ್ತಿ/ಅಭಿವೃದ್ಧಿ/ನವೀಕರಣ ಹಾಗೂ ಪೀಠೋಪಕರಣಗಳಿಗಾಗಿ 7.64 ಲಕ್ಷ ರೂ. ಗಳನ್ನು ಸರ್ಕಾರ ವೆಚ್ಚ ಮಾಡಿದೆ. [ಸಚಿವರ ನಿವಾಸ ನವೀಕರಣಕ್ಕೆ ಕೋಟಿ-ಕೋಟಿ ಖರ್ಚು]
ಸಚಿವರ ಕಚೇರಿಗಳ ದುರಸ್ತಿ/ಅಭಿವೃದ್ಧಿ/ನವೀಕರಣಕ್ಕಾಗಿ ರೂ. 1.41 ಕೋಟಿ, ಕಚೇರಿಗಳಿಗೆ ಒದಗಿಸಲಾದ ಪೀಠೋಪಕರಣಗಳಿಗಾಗಿ ರೂ. 1.26 ಕೋಟಿ, ನಿವಾಸಗಳ ದುರಸ್ತಿ/ಅಭಿವೃದ್ಧಿ/ನವೀಕರಣಕ್ಕಾಗಿ 3.75 ಕೋಟಿ ರೂ. ಮತ್ತು ನಿವಾಸಗಳ ಪೀಠೋಪಕರಣಗಳಿಗೆ 1.20 ಕೋಟಿ ವೆಚ್ಚ ಮಾಡಲಾಗಿದೆ.
ಅಂದಹಾಗೆ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ಕೃಷ್ಣ, ಕಾವೇರಿ ಗೃಹಗಳಿಗೆ ಬೆಡ್ಶೀಟ್, ಪಿಲ್ಲೋ, ಟವಲ್, ಕಾಲು ಚೀಲ, ಕುಷನ್ ಕವರ್ಗಳಿಗಾಗಿ ಬರೋಬ್ಬರಿ 14 ಲಕ್ಷ 34 ಸಾವಿರ ರೂಪಾಯಿ ಖರ್ಚು ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿತ್ತು.
-
ಮಾರ್ಚ್ 15ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
KAS ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದ KPSC: 384 ಗೆಜೆಟೆಡ್ ಪ್ರೊಬೇಷನರ್ಸ್ ಸಂದರ್ಶನ ಮುಂದೂಡಿಕೆ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
ಮಾರ್ಚ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ












Click it and Unblock the Notifications