Get Updates
Get notified of breaking news, exclusive insights, and must-see stories!

Karnataka election 2023: ಮತದಾನ ವೇಳೆ ಬಳಸುವ ಶಾಹಿ ಬಗ್ಗೆ ನಿಮಗೆ ಗೊತ್ತಿರದ ಇತಿಹಾಸ

ಬೆಂಗಳೂರು, ಮೇ 09: ಕರ್ನಾಟಕ ರಾಜ್ಯ ಚುನಾವಣಾ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬುಧವಾರ ಮೇ 10ರಂದು ಮತಗಟ್ಟೆಗಳ ಮುಂದೆ ಜನ ಸರಿತಿ ಸಾಲಿನಲ್ಲಿ ನಿಂತ ಮತದಾನ ಮಾಡುತ್ತಾರೆ. ತಾವು ಮತದಾನ ಮಾಡಿದ್ದೇವೆ ಎಂದು ಹೇಳಲು ಅವರು ಕೈಬೆರಳಿಗೆ ಹಾಕಿರುವ ಶಾಹಿ ಗುರುತನ್ನು ತೋರಿಸುತ್ತಾರೆ. ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಾಹಿ ಹಿಂದಿನ ಇತಿಹಾಸ ಇಲ್ಲಿ ತಿಳಿಯೋಣ.

ಭಾರತದ ಪ್ರಜಾಪ್ರಭುತ್ವದಲ್ಲಿ ಚುನಾವಣೆ-ಮತದಾನವನ್ನು ಒಂದು ಹಬ್ಬದಂತೆ ಎಲ್ಲರೂ ಆಚರಿಸುತ್ತಾರೆ. ಜನಸಾಮಾನ್ಯರಿಂದ ಹಿಡಿದು ಪ್ರಯೋಬ್ಬರ ಅರ್ಹ ಮತದಾರರು ಮತದಾನ ಮಾಡುತ್ತಾರೆ. ಮತ ಹಾಕಿ ಹೊರ ಬಂದು ಸೋಷಿಯಾ ಮೀಡಿಯಾಗಳಿಗೆ, ಮಾಧ್ಯಮಗಳ ಮುಂದೆ ಶಾಹಿ ಗುರುತು ತೋರಿಸಿ ನಗೆ ಬೀರುತ್ತಾರೆ. ಈ ಶಾಹಿಗೆ ಹತ್ತಾರು ವರ್ಷಗಳ ಹಿಂದಿನಿಂದಲೇ ಬಳಕೆಯಲ್ಲಿದೆ. ಅಲ್ಲದೇ ಶಾಹಿಗೂ ಮೈಸೂರು ರಾಜಮನೆತಕ್ಕೂ ಸಂಬಂಧ ಸಹ ಇದೆ ಎಂದು ನ್ಯೂಸ್ 18 ವರದಿ ಮಾಡಿದೆ.

Karnataka Election 2023: history of ink used in elections, Know more

ಆರಂಭಿಕವಾಗಿ ಬಳಸಿ ಶಾಹಿಯಿಂದ ಹಿಡಿದು 2023ರ ಚುನಾವಣೆವರೆಗೂ ಬಳಸುತ್ತಿರುವ ಶಾಹಿಯ ಉತ್ಪಾದನೆ ಮೈಸೂರು ಒಡೆತನದ 'ಮೈಸೂರು ಪೇಂಟ್ಸ್ ಆಮ್ಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆ'ಯಲ್ಲಿಯೇ ಆಗುತ್ತಿದೆ. ಮೈಸೂರು ಮಹಾರಾಜರಾದ ನಾಲ್ಕನೇ ಕೃಷ್ಣರಾಜ ಒಡೆಯರ್ ಅಂದಿನ ಕಾಲದಲ್ಲಿ ಭಾರೀ ಶ್ರೀಮಂತರು. ಈ ರಾಜವಂಶವು ಚಿನ್ನದ ಗಣಿ ಹಾಗೂ ಇನ್ನಿತರ ಕಂಪನಿಗಳನ್ನು ಹೊಂದಿದ್ದರು. ಅವರು ಹಲವು ಕಂಪನಿಗಳನ್ನು ಹೊಂದದ್ದರು, ಅದರಲ್ಲಿ ಪೇಂಟ್ಸ್ ಹಾಗೂ ವಾರ್ನಿಶ್ ಉತ್ಪಾದಿಸುವ ಕಂಪನಿಗಳು ಇದ್ದವು.

ಮೊದಲ ಚುನಾವಣೆಯಲ್ಲಿ ಮೋಸ: ಶಾಹಿ ಬಳಕೆಗೆ ಚಿಂತನೆ

ಭಾರತೀಯ ಇತಿಹಾಸದಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದದ್ದು 1951-52 ರಲ್ಲಿ ಎನ್ನಲಾಗಿದೆ. ಇದು ಮೊದಲ ಚುನಾವಣೆ ಆಗಿದ್ದರಿಂದ ಸಾಕಷ್ಟು ಮೋಸ ನಡೆದದ್ದು ಅಂದಿನ ಚುನಾವಣಾಧಿಕಾರಿಗಳ ಗಮನಕ್ಕೆ ಬಂತು. ಹೀಗಾಗಿ ಅವರು ಚುನಾವಣೆ ಮತದಾನದಲ್ಲಿ ಇಂತಹ ಮೋಸ, ಒಬ್ಬ ವ್ಯಕ್ತಿಯೇ ಎರಡು ಬಾರಿ ಇಲ್ಲವೇ ಅದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಬಾರದೆಂದು ನಿರ್ಧರಿಸಿ ಶಾಹಿ ಬಳಕೆ ತಂತು.

ಈ ಸಂಬಂಧ ಅಂದು ರಾಜ್ಯ ಚುನಾವಣೆ ಆಯೋಗವು ನ್ಯಾಷನಲ್ ಫಿಸಿಕಲ್ ಲ್ಯಾಬರೇಟರಿ ಆಫ್ ಇಂಡಿಯಾವನ್ನು ಸಂಪರ್ಕಿಸಿ ಸುಲಭವಾಗಿ ಕೈಯಿಂದ ಅಳಿಸಲಾಗದ ಮತ್ತು ಕೆಲವು ದಿನ ಕೈಯಲ್ಲಿಯೇ ಉಳಿದು ಬಿಡುವ ಶಾಹಿಯನ್ನು ತಮಗಾಗಿ ಉತ್ಪಾದಿಸುವಂತೆ ಕೇಳಿಕೊಂಡಿತು.

Karnataka Election 2023: history of ink used in elections, Know more

1962ರ ಚುನಾವಣೆಯಲ್ಲಿ ಶಾಹಿ ಬಳಕೆ

ಇದಾದ ಬಳಿಕ ಶಾಹಿ ಉತ್ಪಾದಿಸಿ ಚುನಾವಣೆ ಪ್ರಕ್ರಿಯೆ ಬಳಕೆಗಾಗಿ ಕೊಡುವಂತೆ 'ಮೈಸೂರು ಪೇಂಟ್ಸ್ ಆಮ್ಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆ' ಅನ್ನು ಸಂಪರ್ಕಿಸಲಾಯಿತು. ಅದರಂತೆ ಶಾಹಿ ಉತ್ಪಾದಿಸಿ ಕೊಡುತ್ತಿರುವ ಮೈಸೂರು ಸಂಸ್ಥೆ ಇಂದಿಗೂ ಮುಂದುವರೆಸಿದೆ. 1962ರಲ್ಲಿ ಇದನ್ನು ಮೊದಲ ಬಾರಿಗೆ ದೇಶದಲ್ಲಿ ಬಳಕೆ ಮಾಡಲಾಯಿತು. ಇದರಿಂದ ಅಂದು ಮತದಾನ ವೇಳೆ ಆಗುತ್ತಿದ್ದ ಮೋಸ ತಡೆಗಟ್ಟಲು ಸಾಧ್ಯವಾಯಿತು.

ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೇ ವಿದೇಶಗಳಿಗೂ ಶಾಹಿ ತಯಾರಿಸಿ ಕೊಡುತ್ತಿದೆ. ಕರ್ನಾಟಕ ಒಂದು ಜಿಲ್ಲೆ ಅದರಲ್ಲೂ ರಾಜವಂಶಸ್ಥರ ಮನೆತನಕ್ಕೆ ಸೇರಿದ ಸಂಸ್ಥೆವೊಂದು ವಿದೇಶಗಳಿಗೆ ಶಾಹಿ ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ. ಕೆನಡಾ, ಸಿಂಗಾಪೂರ್, ಅಫ್ಘಾನಿಸ್ತಾನ್, ಟರ್ಕಿ ಸೇರಿದಂತೆ ಸುಮಾರು 35 ರಾಷ್ರಗಳೂ ನಮ್ಮ ಮೈಸೂರಿನಿಂದಲೇ ಶಾಹಿಯನ್ನು ಪಡೆಯುತ್ತಿವೆ.

ಪ್ರತಿ ವರ್ಷ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿನ ಮತಗಟ್ಟೆಗಳ ವ್ಯಾಪ್ತಿಯ ಜನರ ಸಂಖ್ಯೆಗೆ ತಕ್ಕಂತೆ ಶಾಹಿಯನ್ನು ಆರ್ಡರ್ ಮಾಡಿ ಪಡೆಯಲಾಗುತ್ತಿದೆ. ಇದನ್ನು ಹೇಗೆ ಉತ್ಪಾದಿಸುತ್ತಾರೆ ಎಂಬ ವಿಷಯ ಕಾರಣಾಂತರಗಳಿಂದ ಇಂದಿಗೂ ಗೌಪ್ಯವಾಗೇ ಇಡಲಾಗಿದೆ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಿಲ್ವರ್ ನೈಟ್ರೇಟ್ ಘಟಕಾಂಶ ಇರುವುದರಿಂದ ಮತದಾರ ಬೆರಳಿನ ಮೇಲೆ ಹಾಕಿದ ಮೂರು ನಾಲ್ಕು ವಾರಗಳವರೆಗೆ ಅಳಿಯದಂತೆ ಉಳಿದುಕೊಳ್ಳವಷ್ಟು ಸಾಮರ್ಥ್ಯ ಈ ಶಾಹಿಗೆ ಇದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+