Get Updates
Get notified of breaking news, exclusive insights, and must-see stories!

ಹೊಸ ಸರ್ಕಾರದ ಮುಂದಿವೆ ಅನೇಕ ಸವಾಲುಗಳು: ಗ್ಯಾರಂಟಿ ಯೋಜನೆಗಳ ಕಥೆ ಏನು?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಸರ್ಕಾರ ರಚನೆ ಮಾಡುವ ಸಿದ್ಧತೆಯಲ್ಲಿದೆ. ಅಧಿಕಾರ ಹಂಚಿಕೆಯಿಂದ ಹಿಡಿದು ಗ್ಯಾರಂಟಿಗಳನ್ನು ಪೂರೈಸುವವರೆಗೆ ಕಾಂಗ್ರೆಸ್ ಮುಂದಿರುವ ಸವಾಲುಗಳ ಪಟ್ಟಿ ಸಾಕಷ್ಟು ದೊಡ್ಡದಾಗಿದೆ. ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದೆ, ಕಾಂಗ್ರೆಸ್ ಸ್ವಲ್ಪ ಯಾಮಾರಿದರೂ ಅದು ಬಿಜೆಪಿಗೆ ದೊಡ್ಡ ಲಾಭ ಮಾಡಿಕೊಡಲಿದೆ.

ಲೋಕಸಭಾ ಚುನಾವಣೆಗೂ ಮುನ್ನವೇ ಬಿಬಿಎಂಪಿ ಮತ್ತು ಪಂಚಾಯಿತಿ ಚುನಾವಣೆಗಳು ರಾಜ್ಯದಲ್ಲಿ ನಡೆಯಲಿವೆ. ಬಿಜೆಪಿ ಆಡಳಿತ ವಿರೋಧಿ ಅಲೆಯಲ್ಲಿ ಗೆಲುವಿನ ದಡ ಸೇರಿರುವ ಕಾಂಗ್ರೆಸ್, ತನ್ನ ಜನಪರ ಕೆಲಸಗಳಿಂದ ಮಾತ್ರವೇ ಮುಂದಿನ ಚುನಾವಣೆಗಳನ್ನು ಗೆಲ್ಲಲು ಸಾಧ್ಯ.

 Many Challenges To New Congress Government In Karnataka : How They Fulfill Guarantees?

ಅಧಿಕಾರ ಹಂಚಿಕೆ ವಿಚಾರದಲ್ಲಿ ಕೆಲವರ ಅಸಮಾಧಾನ ಸ್ಫೋಟಗೊಳ್ಳಬಹುದಾದರು, ಕೈ ನಾಯಕರು ಎಲ್ಲರನ್ನೂ ಸಮಾಧಾನ ಪಡಿಸಿ, ಒಗ್ಗಟ್ಟಿನಲ್ಲಿ ಹೋಗುವುದು ಸದ್ಯದ ಪರಿಸ್ಥಿತಿಯಲ್ಲಿ ಬಹಳ ಮುಖ್ಯವಾಗಲಿದೆ. ಇದರ ಜೊತೆಗೆ ಹೊಸ ಬಜೆಟ್, ಸರ್ಕಾರಿ ನೌಕರರ ಬೇಡಿಕೆಗಳು, ಹೊಸ ನೀತಿ ನಿಯಮ ರೂಪಿಸುವುದು ಸೇರಿದಂತೆ ಹಲವು ಸವಾಲುಗಳು ಹೊಸ ಸರ್ಕಾರದ ಮುಂದಿವೆ.

ಅಧಿಕಾರಕ್ಕೆ ಬಂದ ತಕ್ಷಣ ಮೊದಲನೇ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಐದು ಉಚಿತಗಳನ್ನು ಈಡೇರಿಸಲು ಸರ್ಕಾರ ವರ್ಷಕ್ಕೆ ಅಂದಾಜು 45 ಸಾವಿರ ಕೋಟಿ ರುಪಾಯಿ ಬೇಕಾಗುತ್ತದೆ ಎಂದು ಹೇಳಲಾಗಿದೆ. ಈ ಹಣವನ್ನು ನೂತನ ಸರ್ಕಾರ ಹೇಗೆ ಹೊಂದಿಸುತ್ತದೆ ಎನ್ನುವುದು ಕೂಡ ಮುಖ್ಯವಾಗಿದೆ.

ಉಚಿತ ವಿದ್ಯುತ್ ಯೋಜನೆಗೆ ವಾರ್ಷಿಕ ಅಂದಾಜು 9000 ಕೋಟಿ ರುಪಾಯಿ ಬೇಕಾಗುತ್ತದೆ ಎಂದು ಹೇಳಲಾಗಿದೆ, ಇನ್ನು ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರುಪಾಯಿ ಹಣ ನೀಡುವ ಯೋಜನೆಗೆ ವಾರ್ಷಿದ 36,000 ಕೋಟಿ ರುಪಾಯಿ ಬೇಕಾಗುತ್ತದೆ. ಇವೆರಡೂ ಯೋಜನೆ ಜಾರಿ ಮಾಡಲೇ ಅಂದಾಜು 45 ಸಾವಿರ ಕೋಟಿ ಹಣ ಬೇಕಾಗುತ್ತದೆ.

ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡುವ ಯೋಜನೆಗೆ ಅಂದಾಜು 45 ಸಾವಿರ ಕೋಟಿ ರುಪಾಯಿ ಬೇಕಾಗಲಿದೆ ಎಂದು ಹೇಳಲಾಗಿದ್ದು, ವಿದ್ಯಾರ್ಥಿ ವೇತನಕ್ಕೆ 5 ಸಾವಿರ ರುಪಾಯಿ ಬೇಕಾಗುವ ಅಂದಾಜಿದೆ, ರಾಜ್ಯದ ಬಜೆಟ್ ಗಾತ್ರ 3 ಲಕ್ಷ ಕೋಟಿ ಇದ್ದು, ಇದರಲ್ಲಿ 1 ಲಕ್ಷ ಕೋಟಿಗಿಂತ ಅಧಿಕ ಹಣವನ್ನು ಉಚಿತ ಕೊಡುಗೆಗಳಿಗೆ ಮೀಸಲಿಡಬೇಕಾಗುತ್ತದೆ. ಇದರ ಹೊರೆಯನ್ನು ನಿಭಾಯಿಸುವುದು ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ.

ಮತಾಂತ ನಿಷೇಧ ಕಾಯ್ದೆ, ಹಿಜಾಬ್ ನಿಷೇಧ ವಿಚಾರ

ಬಿಜೆಪಿ ಆಡಳಿತದ ಅವಧಿಯಲ್ಲಿ ಜಾರಿಗೆ ಬಂದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು, ಇದರೆ ಜೊತೆ ಗೋಹತ್ಯೆ ನಿಷೇಧವನ್ನು ಕೂಡ ಹಿಂಪಡೆಯುವುದಾಗಿ ಹೇಳಿತ್ತು. ಒಂದು ಕಾಂಗ್ರೆಸ್ ಇವುಗಳನ್ನು ಬದಲಾವಣೆ ಮಾಡಲು ಹೊರಟರೆ ಬಿಜೆಪಿಯಿಂದ ದೊಡ್ಡ ವಿರೋಧ ವ್ಯಕ್ತವಾಗಲಿದೆ. ಇದು ಕಾಂಗ್ರೆಸ್‌ ಅನ್ನು ಹಿಂದೂ ವಿರೋಧಿ ಎಂದು ಕೂಡ ಬಿಜೆಪಿ ಬಿಂಬಿಸುವ ಸಾಧ್ಯತೆ ಇದೆ. ಈ ಸೂಕ್ಷ್ಮವನ್ನು ಹೇಗೆ ನಿಭಾಯಿಸುತ್ತದೆ ಎಂದು ನೋಡಬೇಕಿದೆ.

ಜಾತಿ ಗಣತಿ ವರದಿ, ಮೀಸಲಾತಿ ಹೆಚ್ಚಳ

ಸಿದ್ದರಾಮಯ್ಯ ಸರ್ಕಾರದ ಆಡಳಿತ ಇದ್ದಾಗ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಗಣತಿ ಮಾಡಿಸಲಾಗಿದೆ. ಆ ವರದಿಯನ್ನು ಬಹಿರಂಗಪಡಿಸಿ, ಜಾರಿ ಮಾಡಬೇಕಾಗುತ್ತದೆ. ಇದು ಕೂಡ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ. ಇದರ ಜೊತೆ ಪಠ್ಯ ಬದಲಾವಣೆ ವಿವಾದ, ಟಿಪ್ಪು ಸುಲ್ತಾನ್ ವಿವಾದವನ್ನು ಕಾಂಗ್ರೆಸ್ ಬಗೆಹರಿಸಬೇಕಾಗುತದೆ.

ತಾನು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ. ಪರಿಶಿಷ್ಠ ಜಾತ ಮತ್ತು ವರ್ಗ, ಮುಸ್ಲಿಮರ ಅಲ್ಪಸಂಖ್ಯಾತ ಮೀಸಲಾತಿ ಮತ್ತೆ ಜಾರಿಗೆ ತರುವ ಆಶ್ವಾಸನೆ ನೀಡಿದ್ದರು. ಮೀಸಲಾತಿ ಪ್ರಮಾಣವನ್ನು ಶೇ. 75ಕ್ಕೆ ಹೆಚ್ಚಿಸಿ ಎಲ್ಲಾ ವರ್ಗಗಳಿಗೆ ನ್ಯಾಯ ಕೊಡುವ ಭರವಸೆ ನೀಡಿದ್ದು, ಈ ವಿಚಾರವನ್ನು ಕೂಡ ಸೂಕ್ಷ್ಮವಾಗಿ ನಿಭಾಯಿಸಬೇಕಾದ ಹೊಣೆ ಕಾಂಗ್ರೆಸ್ ಸರ್ಕಾರದ ಮೇಲಿದೆ.

ಇದರ ಜೊತೆಯಲ್ಲೇ ಅಂಗನವಾಡಿ ಕಾರ್ಯಕರ್ತೆಯರ ವೇತನ 11,500 ರಿಂದ 15 ಸಾವಿರಕ್ಕೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 7,500 ರಿಂದ 10,000 ಕ್ಕೆ ಹೆಚ್ಚಿಸುವ ಭರವಸೆ ಈಡೇರಿಸಬೇಕಾಗಿದೆ. ಇದರ ಜೊತೆ ಬಿಸಿ ಊಟದ ಅಡಿಗೆ ಯವರಿಗೆ ಮಾಸಿಕ ಗೌರವಧನ 3600 ರಿಂದ 6 ಸಾವಿರಕ್ಕೆ ಹೆಚ್ಚಿಸುವ ಭರವಸೆ ನೀಡಿತ್ತು.

ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡಿದ್ದ ಕಾಂಗ್ರೆಸ್ ಈಗ ಯೋಜನೆಯನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಈಗಾಗಲೇ 6000 ಕೋಟಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಸಹ ಘೋಷಿಸಿದೆ, ತಮಿಳುನಾಡಿನ ವಿರೋಧದ ನಡುವೆ ಯಾವ ರೀತಿ ಈ ಯೋಜನೆ ಜಾರಿ ಮಾಡುತ್ತದೆ ಎಂದು ಕಾದು ನೋಡಬೇಕಿದೆ.

ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಜಾರಿ ಮಾಡಲು ವಾರ್ಷಿಕ 11 ಸಾವಿರ ಕೋಟಿ ರುಪಾಯಿ ಹೆಚ್ಚುವರಿಯಾಗಿ ಬೇಕಾಗುತ್ತದೆ. ಎನ್​ಪಿಎಸ್ ನೌಕರರು ಹಳೆಯ ಪಿಂಚಣಿ ಯೋಜನೆಗೆ ಒತ್ತಾಯಿಸಿದ್ದರು, ಕಾಂಗ್ರೆಸ್ ಇದನ್ನು ಈಡೇರಿಸುವ ಭರವಸೆ ನೀಡಿದ್ದು, ಇದಕ್ಕಾಗಿ ಸಂಪನ್ಮೂಲವನ್ನು ಹೊಂದಿಸಬೇಕಾಗುತ್ತದೆ.

ಕಾಂಗ್ರೆಸ್ ಯೋಜನೆಗಳಿಗೆ ಮರುಜೀವ?

ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ಗೆ 2023ರ ಮಾರ್ಚ್ 31ರ ವರೆಗೆ ವೆಚ್ಚ ನಿರ್ವಹಣೆಯ ತನಕ ಸದನದ ಒಪ್ಪಿಗೆ ಪಡೆದಿದ್ದರು. ಹೊಸ ಸರ್ಕಾರ ಈಗ ಹೊಸ ಬಜೆಟ್‌ ರೂಪಿಸಬೇಕಿದೆ. ಕಾಂಗ್ರೆಸ್ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಮುಚ್ಚುವ ಹಂತದಲ್ಲಿದೆ, ಹಲವು ತಿಂಗಳಿನಿಂದ ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನಗಳು ಬಿಡುಗಡೆಯಾಗಿಲ್ಲ ಇದೆಲ್ಲದಕ್ಕೂ ಕಾಂಗ್ರೆಸ್ ಸರ್ಕಾರ ಹಣ ಹೊಂದಿಸಿಕೊಳ್ಳಬೇಕಿದೆ.

ಡಬಲ್ ಎಂಜಿನ್ ಬಿಜೆಪಿ ಸರ್ಕಾರದ ಅವಧಿಯಲ್ಲೇ ರಾಜ್ಯಕ್ಕೆ ಸಿಗಬೇಕಾದ ಜಿಎಸ್‌ಟಿ ಪಾಲು ಸಿಕ್ಕಿಲ್ಲ, ಇನ್ನು ಕೇಂದ್ರ ಸರ್ಕಾರದ ಜೊತೆ ಸಾಮರಸ್ಯ ಕಾಪಾಡಿಕೊಂಡು ರಾಜ್ಯದ ಜಿಎಸ್‌ಟಿ ಪಾಲನ್ನು ಪಡೆಯುವ ಹೊಣೆ ಕೂಡ ಹೊಸ ಸರ್ಕಾರದ ಮೇಲೆ ಬಿದ್ದಿದೆ. ಪ್ರತಿ ವರ್ಷ ಸುಮಾರು 3 ಲಕ್ಷ ಕೋಟಿ ರುಪಾಯಿ ಜಿಎಸ್‌ಟಿ ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+