ಕರ್ನಾಟಕ : ಮುಷ್ಕರದಿಂದಾಗಿ ಸಿಇಟಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಏ. 23 : ಸಾರಿಗೆ ಸಂಘಟನೆಗಳು ಏ.30ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮೇ. 12 ಮತ್ತು 13ರಂದು ಪರೀಕ್ಷೆಗಳು ನಡೆಯಲಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕುರಿತು ಆದೇಶ ಹೊರಡಿಸಿದೆ. ಏ.29 ಮತ್ತು 30ರಂದು ನಡೆಯಬೇಕಾಗಿದ್ದ ಸಿಇಟಿ ಪರೀಕ್ಷೆಗಳು, ಮೇ. 12 ಮತ್ತು 13ರಂದು ನಡೆಯಲಿವೆ. ಮುಷ್ಕರದ ಹಿನ್ನಲೆಯಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳು ಬರಲು ತೊಂದರೆ ಆಗಬಹುದು ಎಂದು ಸರ್ಕಾರ ಪರೀಕ್ಷೆ ಮುಂದೂಡಲು ಸೂಚನೆ ನೀಡಿತ್ತು. [ಏ.30ರಂದು ಬಸ್ಸಿಲ್ಲ]

ಪರೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ವಿದ್ಯಾರ್ಥಿಗಳು http://www.kea.kar.nic.in ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ. ಅಂದಹಾಗೆ ದ್ವಿತೀಯ ಪಿಯುಸಿ ಫಿಲಿತಾಂಶ ಮೇ ತಿಂಗಳ ಮೊದಲ ವಾರದಲ್ಲಿ ಪ್ರಕಟಗೊಳ್ಳಲಿದೆ.[ಸಿಇಟಿ ವೇಳಾಪಟ್ಟಿ]
ಮುಷ್ಕರ ಏಕೆ : 'ರಸ್ತೆ ಸಾರಿಗೆ ಮತ್ತು ಸುರಕ್ಷತಾ ಕಾಯ್ದೆ 2015'ದನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಏ.30ರಂದು ಕೇಂದ್ರ ರಸ್ತೆ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಬಂದ್ಗೆ ಕರೆ ನೀಡಿವೆ. ಕರ್ಣಾಟಕದಲ್ಲಿಯೂ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಮುಷ್ಕರಕ್ಕೆ ಬೆಂಬಲ ನೀಡಿವೆ. ಆದ್ದರಿಂದ ಬಸ್ಸುಗಳು ರಸ್ತೆಗಿಳಿಯುವುದಿಲ್ಲ. [ಮೇ ಮೊದಲ ವಾರ ದ್ವಿತೀಯ ಪಿಯು ಫಲಿತಾಂಶ]












Click it and Unblock the Notifications