ಕೊಪ್ಪಳದಲ್ಲಿ ಭಾನುವಾರ ಉದ್ಯೋಗ ಮೇಳ
ಕೊಪ್ಪಳ, ನ.22 : ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮೀಣ ನಿರುದ್ಯೋಗ ಯುವ ಅಭ್ಯರ್ಥಿಗಳಿಗೆ ಕೌಶಲ್ಯಾಧಾರಿತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ನ. 23ರ ಭಾನುವಾರ ಏರ್ಪಡಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.
ಶ್ರೀ
ಹುಲಿಗೆಮ್ಮದೇವಿ
ದೇವಸ್ಥಾನದ
ಬಳಿ
ಉದ್ಯೋಗ
ಮೇಳ
ನಡೆಯಲಿದೆ.
ಯೋಜನೆಯಡಿ
ಒಟ್ಟು
5118
ಅಭ್ಯರ್ಥಿಗಳು
ಸ್ವಯಂ
ಉದ್ಯೋಗ
ಹಾಗೂ
ವೃತ್ತಿ
ಕೌಶಲ್ಯಕ್ಕೆ
ಅರ್ಹತೆ
ಪಡೆದುಕೊಂಡಿದ್ದಾರೆ.
ಉದ್ಯೋಗ
ಮೇಳದಲ್ಲಿ
ಸುಮಾರು
50
ವಿವಿಧ
ಕಂಪನಿಗಳು
ಭಾಗವಹಿಸಲಿವೆ.
[ಹೆಚ್ಚಿನ
ಮಾಹಿತಿ
ಇಲ್ಲಿದೆ
ನೋಡಿ]
ಭಾಗವಹಿಸುವ ಕಂಪನಿಗಳು : ಆಶಾ ಎಲೆಕ್ಟ್ರಾನಿಕ್ಸ್ (ಹುಬ್ಬಳ್ಳಿ), ಫಸ್ಟ್ ಸೋರ್ಸ್ (ಹುಬ್ಬಳ್ಳಿ), ಟ್ರಾಯರ್ ಸಲ್ಯೂಷನ್ಸ್ (ಹುಬ್ಬಳ್ಳಿ), ಕನೆಕ್ಟ್ ಕನ್ಸಲ್ಟನ್ಸ್, ಗೋಲ್ಡನ್ ಕಂನ್ಸಲ್ಟೆನ್ಸಿ ( ಹುಬ್ಬಳ್ಳಿ), ಅರವಿಂದ ಮಿಲ್ಸ್, ಸಾಯಿ ಎಕ್ಸ್ಪೋರ್ಟ್ಸ್, ಶೋಭಾ ಡೆವಲಪ್ಪರ್ಸ್, ಸಾಯಿ ಕನ್ಸಲ್ಟೆನ್ಸಿ ಮುಂತಾದ ಕಂಪನಿಗಳು ಪಾಲ್ಗೊಳ್ಳಲಿವೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಬಿ.ಕಲ್ಲೇಶ್ 9481099256, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಬಸವರಾಜ ಮೂಲಿಮನಿ 9663662321 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. [130 ವಿಲೇಜ್ ಅಕೌಂಟೆಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ]
ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ : ಕೊಪ್ಪಳ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನ.23 ರಂದು ಮಧ್ಯಾಹ್ನ 3 ಗಂಟೆಗೆ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ.
ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಉದ್ಘಾಟಿಸಲಿದ್ದು, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್. ತಂಗಡಗಿ, ಆರೋಗ್ಯ ಸಚಿವ ಯು.ಟಿ. ಖಾದರ್ ಮುಂತಾದವರು ಭಾಗವಹಿಸಲಿದ್ದಾರೆ.