ಹೊಳಪು ಕಳೆದುಕೊಂಡಿತೇ ಇಳಕಲ್ ಸೀರೆ?
ಬಾಗಲಕೋಟೆ, ನ. 3: ಸಾಹಿತಿಗಳಿಗೆ, ಕವಿಗಳಿಗೆ ಸ್ಫೂರ್ತಿಯಾಗಿದ್ದ ಇಳಕಲ್ ಸೀರೆ ತನ್ನ ಹೊಳಪು ಕಳೆದುಕೊಳ್ಳುತ್ತಿದೆಯೇ? ಜನ ಮಾನಸದಿಂದ ಮರೆಯಾಗಲಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ಬಾಗಲಕೋಟೆ ಜಿಲ್ಲೆಯ ಐದು ಸಾವಿರಕ್ಕೂ ಹೆಚ್ಚು ಕೈ ಮಗ್ಗಗಳು ಅವಸಾನದ ಅಂಚು ತಲುಪಿವೆ.
5 ಸಾವಿರ ಇದ್ದ ಕೈಮಗ್ಗಗಳ ಸಂಖ್ಯೆ ವಿದ್ಯುತ್ ಮಗ್ಗಗಳ ಭರಾಟೆ ಅಡಿಯಲ್ಲಿ 500ಕ್ಕೆ ಕುಸಿದಿದೆ. ತನ್ನ ಹೆಸರಿನಿಂದಲೇ ಉತ್ತರ ಕರ್ನಾಟಕದ ಸೊಗಡನ್ನು, ಸಂಸ್ಕೃತಿಯನ್ನು ಸಾರುತ್ತಿದ್ದ ಇಳಕಲ್ ಸೀರೆ ಮಾರುಕಟ್ಟೆಯಲ್ಲಿ ಮುಂದೆ ಸಿಗುವುದಿಲ್ಲ ಎಂಬ ಮಾತು ಸತ್ಯವಾಗುವಂತೆ ಗೋಚರವಾಗುತ್ತಿವೆ.[ಕೈಮಗ್ಗ ಕೊಲ್ಲದಿರಿ, ದೇಸಿ ಸಂಸ್ಕೃತಿ, ಪರಂಪರೆ ಉಳಿಸಿ]

ಹೆಚ್ಚಿದ ಖರ್ಚಿನಿಂದ ಅನಿವಾರ್ಯವಾಗಿ ಕೆಲ ನೇಕಾರರು ವಿದ್ಯುತ್ ಮಗ್ಗಗಳತ್ತ ವಾಲಿದ್ದಾರೆ, ಪರಿಣಾಮ ಕೈ ಮಗ್ಗ ಮತ್ತು ಇಳಕಲ್ ಸೀರೆಯ ಮೊದಲಿನ ಹೊಳಪು ಕಾಣದಾಗಿದೆ. ಇನ್ನು ಕೈ ಮಗ್ಗ ದಲ್ಲೇ ಕೆಲಸ ಮಾಡುತ್ತಿರುವವರು ಜೀವನ ನಿರ್ವಹಣೆಗೂ ತೊಂದರೆ ಪಡುವಂತಾಗಿದೆ. ಒಂದು ಕಾಲದಲ್ಲಿ ಬಾಗಲಕೋಟೆ ಮತ್ತು ಗದಗ ಜಿಲ್ಲೆಯನ್ನು ಕೈ ಮಗ್ಗದ ಸೀರೆಗಳಿಂದಲೇ ಗುರುತಿಸಲಾಗುತ್ತಿತ್ತು.
ಪುರಾತನ ಕತೆ ಹೇಳುವ ವೈವಿಧ್ಯಮಯ ಇಳಕಲ್ ಸೀರೆಗಳು, ಸ್ಥಳೀಯವಾಗಿಯೇ ಸಿಗುತ್ತಿದ್ದ ಕಚ್ಚಾ ವಸ್ತುಗಳು ಕೈ ಮಗ್ಗ ಮತ್ತು ನೇಕಾರರಿಗೆ ಮೆರುಗು ತಂದುಕೊಟ್ಟಿದ್ದವು.[ಮೊಳಕಾಲ್ಮೂರು ಸೀರೆಗೂ ಹತ್ತಿದ ತೆಲಂಗಾಣ ಕಿಚ್ಚು]
ವಿದ್ಯುತ್ ಮಗ್ಗಗಳ ನೆರವಿನಲ್ಲಿ ದಿನವೊಂದಕ್ಕೆ 3-4 ಸೀರೆ ನೇಯಲು ಸಾಧ್ಯ. ಆದರೆ ಕೈ ಮಗ್ಗದಿಂದ ಕೇವಲ ಒಂದೇ ಒಂದು ಸೀರೆ ತಯಾರು ಮಾಡಿದರೆ ಹೆಚ್ಚು. ಕೈ ಮಗ್ಗದಿಂದ ತಯಾರಾದ ಸೀರೆಯ ಬೆಲೆಯೂ ಜಾಸ್ತಿ. ಡಿಸೈನ್ ಗೆ ಅನುಗುಣವಾಗಿ ಒಂದು ಸೀರೆಗೆ 10,000 ರೂ. ಗಿಂತಲೂ ಅಧಿಕ ಬೆಲೆ ನೀಡಬೇಕಾಗುತ್ತದೆ. ಇದು ಕೂಡ ಕೈ ಮಗ್ಗ ನೇಕಾರರಿಗೆ ಹೊಡೆತ ನೀಡಿದೆ.
ಕೈ ಮಗ್ಗ ನೇಕಾರರು 60 ಸಾವಿರಕ್ಕಿಂತ ಹೆಚ್ಚಿನ ಹಣ ತೊಡಗಿಸಿ ವಿದ್ಯುತ್ ಮಗ್ಗಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಚ್ಚಾ ವಸ್ತಗಳ ಪೂರೈಕೆ ಮತ್ತು ಮಾರುಕಟ್ಟೆ ಆಧರಿಸಿ ಹೊಸ ನೇಕಾರರು ಧೈರ್ಯ ಮಾಡಿ ವಿದ್ಯುತ್ ಮಗ್ಗ ಖರೀದಿಸಿದರೂ ತಯಾರಾಗುವ ಸೀರೆ ಗುಣಮಟ್ಟ ಕಳಪೆ. ಒಟ್ಟಿನಲ್ಲಿ ನೇಕಾರರು ದ್ವಂದ್ವಕ್ಕೆ ಸಿಲುಕಿದ್ದಾರೆ ಎಂದು ಇಳಕಲ್ ಕೈಮಗ್ಗ ನೇಕಾರರ ಸಮಿತಿ ಕಾರ್ಯದರ್ಶಿ ಅಶೋಕ್ ಹೇಳುತ್ತಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications