ಐಐಟಿ : 3 ಜಿಲ್ಲೆಗಳತ್ತ ಬೊಟ್ಟು ತೋರಿಸಿದ ಸಿದ್ದರಾಮಯ್ಯ
ಬೆಳಗಾವಿ, ಜು.03 : ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಸ್ಥಾಪಿಸಲು ಮೂರು ಜಿಲ್ಲೆಗಳ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ಗೆ ಶುಕ್ರವಾರ ತಿಳಿಸಿದರು.
ಬೆಳಗಾವಿಯಲ್ಲಿ
ನಡೆಯುತ್ತಿರುವ
ಮುಂಗಾರು
ಅಧಿವೇಶನದ
5ನೇ
ದಿನದ
ಕಲಾಪದಲ್ಲಿ
ಎನ್.ಎಸ್.ಭೋಸರಾಜ್
ಅವರ
ಪ್ರಶ್ನೆಗೆ
ಉತ್ತರ
ನೀಡಿದ
ಮುಖ್ಯಮಂತ್ರಿಗಳು,
ರಾಜ್ಯದಲ್ಲಿ
ಐಐಟಿಯನ್ನು
ಸ್ಥಾಪಿಸುವ
ಸಂಬಂಧ
ರಾಯಚೂರು,
ಹುಬ್ಬಳ್ಳಿ-ಧಾರವಾಡ
ಮತ್ತು
ಮೈಸೂರು
ಜಿಲ್ಲೆಗಳನ್ನು
ಕೇಂದ್ರ
ಸರ್ಕಾರಕ್ಕೆ
ಶಿಫಾರಸು
ಮಾಡಲಾಗಿದೆ
ಎಂದು
ಹೇಳಿದರು.
[ರಾಯಚೂರಿನಲ್ಲಿ
ಐಐಟಿ
ಸ್ಥಾಪನೆಗೆ
ಆದ್ಯತೆ]
ಭೋಸರಾಜ್ ಅವರು ಐಐಟಿಯನ್ನು ಸ್ಥಾಪಿಸಲು ರಾಯಚೂರು ಸೂಕ್ತ ಸ್ಥಳವಾಗಿದೆ. ರೈಲು ಸಂಪರ್ಕ, ಹೈದ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಳಗೊಂಡಂತೆ ಎಲ್ಲಾ ಮೂಲಭೂತ ಸೌಕರ್ಯಗಳು ರಾಯಚೂರಿನಲ್ಲಿವೆ. ಐಐಟಿ ಸ್ಥಾಪನೆ ಮಾಡಿದರೆ, ಜಿಲ್ಲೆಯ ಶೈಕ್ಷಣಿಕ ಪರಿಸ್ಥಿತಿಯೂ ಸುಧಾರಿಸಲಿದೆ ಎಂದರು. [ಐಐಟಿ ಸ್ಥಾಪನೆಗೆ ಬೆಳಗಾವಿ ಉತ್ತಮ ಸ್ಥಳ]
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ರಾಯಚೂರಿನಲ್ಲಿ ಐಐಟಿ ಸ್ಥಾಪನೆಯಾದರೆ ತುಂಬಾ ಸಂತೋಷ. ರಾಜ್ಯ ಸರ್ಕಾರದಿಂದ ರಾಯಚೂರು ಸೇರಿದಂತೆ ಮೂರು ಜಿಲ್ಲೆಗಳನ್ನು ಶಿಫಾರಸು ಮಾಡಲಾಗಿದ್ದು, ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ವಿವರಣೆ ನೀಡಿದರು. [ಅಸಲಿಗೆ, ಕರ್ನಾಟಕಕ್ಕೆ ಐಐಟಿ ಅಗತ್ಯವಿದೆಯಾ?]
ಕೇಂದ್ರ ಸರ್ಕಾರ 2014-15ನೇ ಸಾಲಿನ ಬಜೆಟ್ನಲ್ಲಿ ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿತ್ತು. ಅಂದಿನಿಂದ ಐಐಟಿ ಎಲ್ಲಿ ಸ್ಥಾಪನೆಯಾಗಬೇಕು? ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.