ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಪುರ: ದಲಿತನನ್ನು ವಿವಾಹವಾಗಿದ್ದ ಗರ್ಭಿಣಿಯ ಸಜೀವ ದಹನ

|
Google Oneindia Kannada News

ವಿಜಯಪುರ, ಜೂನ್ 6: ಮನೆಯವರ ಒಪ್ಪಿಗೆ ಇಲ್ಲದೆ ದಲಿತನೊಬ್ಬನನ್ನು ಮದುವೆಯಾದ ಮಹಿಳೆಯನ್ನು, ಆ ಮಹಿಳೆಯ ಕುಟುಂಬದ ಸದಸ್ಯರೇ ಸಜೀವವಾಗಿ ಸುಟ್ಟು ಕೊಂದ ಘಟನೆ ವಿಜಯಪುರ ಜಿಲ್ಲೆಯ ಗುಂಡನಕಾಳ ಎಂಬ ಹಳ್ಳಿಯಲ್ಲಿ ನಡೆದಿದೆ.

ಬಾನು ಬೇಗಂ(21) ಎಂಬ ಯುವತಿ ಸಾಯಬಣ್ಣ ಶರಣಪ್ಪ ಕೊನ್ನೂರು(24) ಎನ್ನುವವರನ್ನು ಪ್ರೀತಿಸುತ್ತಿದ್ದರು. ಮನೆಯವರ ವಿರೋಧ ವ್ಯಕ್ತವಾಗಿದ್ದರಿಂದ ಇಬವರಿಬ್ಬರೂ ಗೊವಾಕ್ಕೆ ಹೋಗಿ ಮದುವೆಯಾಗಿದ್ದರು.[ದಾವಣಗೆರೆ: ಪ್ರಿಯಕರನ ಎದುರೇ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ]

Honour killing: A pregnant woman dies in Vijayapur

ನಂತರ ಗರ್ಭಿಣಿಯಾದ ಆಕೆ, ಈಗಲಾದರೂ ತಂದೆ-ತಾಯಿ ತನ್ನನ್ನು ಒಪ್ಪಿಕೊಳ್ಳಬಹುದೆಂದು ಪಾಲಕರ ಬಳಿ ಬಂದಿದ್ದಾಳೆ. ಆದರೆ ಮನೆಗೆ ಬಂದ ಮಗಳು ಅಳಿಯನ ಮೇಲೆ ಹಲ್ಲೆ ನಡೆಸಿ, ಗರ್ಭಿಣಿ ಮಗಳನ್ನು ಸಜೀವ ದಹನ ಮಾಡಿದ ಕುಟುಂಬದ ನಿರ್ದಯತೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಹೆತ್ತ ಮಕ್ಕಳನ್ನು ಪಾಲಕರೇ ಸಾಯಿಸುತ್ತಿರುವುದು ನಿಜಕ್ಕೂ ಶೋಚನೀಯ.

English summary
In a tragic incident of honour killing, a pregnant woman in Vijayapur district Karnataka, was burnt alive by her family members for allegedly marrying a Dalit man. The incident took place in a village called Gundanakala in the Vijayapur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X