ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇನ್ನೂ 2-3ದಿನ ಮಳೆ
ಬೆಂಗಳೂರು, ಅಕ್ಟೋಬರ್ 13: ಬಂಗಾಳ ಕೊಲ್ಲಿಯಲ್ಲಿ ಚಂಡ ಮಾರುತದಿಂದಾಗಿ ಇನ್ನೂ 2-3 ದಿನ ದಕ್ಷಿಣ ಒಳನಾಡು ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿ ನೀಡುವ 'ಸ್ಕೈಮೆಟ್ ವೆದರ್' ಹೇಳಿದೆ.
In Pics:ಕುಂಭದ್ರೋಣ ಮಳೆಗೆ ಮುಳುಗುತಿಹುದು ಬೆಂಗಳೂರು
ಕರ್ನಾಟಕದ ಇತರ ಭಾಗಗಳಲ್ಲೂ ಮಳೆಯಾಗಲಿದೆ ಎಂದು ಅದು ಮುನ್ಸೂಚನೆ ನೀಡಿದೆ.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ

ಈ ಕಡೆ ಅರಬ್ಬೀ ಸಮುದ್ರದಲ್ಲಿಯೂ ಮೇಲ್ಮೈ ಸುಳಿಗಾಳಿ ಬೀಸಲು ಆರಂಭಿಸಿದ್ದು ಕರಾವಳಿ ಕರ್ನಾಟಕದಲ್ಲಿಯೂ ಇನ್ನೂ 2 ದಿನ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಕರ್ನಾಟಕದಲ್ಲಿ ಮಳೆ ಕಡಿಮೆ ಬೀಳಲಿದೆ. ಆದರೆ, ಅಲ್ಲಲ್ಲಿ ಹಗುರವಾಗಿ ಮಳೆ ಬೀಳಬಹುದು ಎಂದು 'ಸ್ಕೈಮೆಟ್ ವೆದರ್' ಹೇಳಿದೆ.
ಒಟ್ಟಾರೆ ಇನ್ನೂ 2-3 ದಿನಗಳ ಕಾಲ ಸಂಪೂರ್ಣ ಕರ್ನಾಟಕ ರಾಜ್ಯ ಮಳೆಗೆ ಸಾಕ್ಷಿಯಾಗಲಿದೆ.












Click it and Unblock the Notifications