Get Updates
Get notified of breaking news, exclusive insights, and must-see stories!

ವಿಶ್ವಾಸಮತ ಯಾಚನೆಗೆ ಸಿಎಂಗೆ ಹೊಸ ಡೆಡ್‌ಲೈನ್ ನೀಡಿದ ರಾಜ್ಯಪಾಲರು

Recommended Video

      Karnataka Crisis : ಎಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಹೊಸ ಡೆಡ್‌ಲೈನ್ ನೀಡಿದ ರಾಜ್ಯಪಾಲರು

      ಬೆಂಗಳೂರು, ಜುಲೈ 19: ವಿಶ್ವಾಸಮತ ಯಾಚನೆಗೆ ಸಿಎಂ ಅವರಿಗೆ ನೀಡಿದ್ದ 1: 30 ರ ಗಡುವು ಮೀರಿದ್ದರೂ ವಿಶ್ವಾಸಮತ ಯಾಚನೆ ಮಾಡಿಲ್ಲವಾದ್ದರಿಂದ ಈಗ ಮತ್ತೊಮ್ಮೆ ಹೊಸ ಡೆಡ್‌ಲೈನ್ ಅನ್ನು ರಾಜ್ಯಪಾಲರು ಸಿಎಂ ಅವರಿಗೆ ನೀಡಿದ್ದಾರೆ.

      Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

      ಮರುಜ್ಞಾಪನಾ ಪತ್ರವನ್ನು ಸಿಎಂ ಅವರಿಗೆ ರವಾನಿಸಿರುವ ರಾಜ್ಯಪಾಲರು ಸಂಜೆ 6 ಗಂಟೆ ಒಳಗೆ ಬಹುಮತವನ್ನು ಸಾಬೀತು ಮಾಡಿ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ನಿರ್ದೇಶನ ನೀಡಿದ್ದಾರೆ.

      ನಿನ್ನೆ ಮಧ್ಯಾಹ್ನ ಸಿಎಂ ಅವರಿಗೆ ಪತ್ರ ಬರೆದಿದ್ದ ರಾಜ್ಯಪಾಲರು, 15 ಜನ ಶಾಸಕರು ನನಗೆ ರಾಜೀನಾಮೆ ಪತ್ರಿ ನೀಡಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ, ನಿಮಗೆ ಬಹುಮತ ಇಲ್ಲವೆಂಬ ಅನುಮಾನವಿದೆ ಹಾಗಾಗಿ ಶುಕ್ರವಾರ ಮಧ್ಯಾಹ್ನ 1:30 ರ ಒಳಗಾಗಿ ವಿಶ್ವಾಸಮತ ಯಾಚನೆ ಮಾಡಿ ಎಂದು ಸೂಚಿಸಿದ್ದರು.

      Governor instructed chief minister to prove majority before today evening 6

      ಆದರೆ ಇಂದು ಸದನದಲ್ಲಿ ಈ ವಿಷಯ ಚರ್ಚೆಯಾಗಿ, ರಾಜ್ಯಪಾಲರು ಹೀಗೆ ಸದನದ ಕಾರ್ಯಕಲಾಪದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲವೆಂದು ಚರ್ಚೆ ಮಂಡಿಸಿದರು. ಇದರ ಪರ ವಿರೋಧ ಚರ್ಚೆಯೂ ಸಾಕಷ್ಟು ನಡೆಯಿತು, ಆದರೆ ರಾಜ್ಯಪಾಲರು ನೀಡಿದ್ದ ಸಮಯದ ಒಳಗೆ ವಿಶ್ವಾಸಮತ ಯಾಚನೆ ಆಗಲಿಲ್ಲ.

      ತಮ್ಮ ನಿರ್ದೇಶನವನ್ನು ಪಾಲಿಸಿಲ್ಲವಾದ್ದರಿಂದ ರಾಜ್ಯಪಾಲರು ಮತ್ತೆ ಮರುಜ್ಞಾಪನಾ ಪತ್ರವನ್ನು ರವಾನಿಸಿದ್ದಾರೆ. ಹೊಸ ಸೂಚನೆಯಂತೆ ಸಿಎಂ ಅವರು ಇಂದು ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಯಾಚನೆ ಮಾಡಬೇಕಿದೆ.

      ರಾಜ್ಯಪಾಲರ ಪರಿಷ್ಕೃತ ಸೂಚನೆಯನ್ನು ಸಿಎಂ ಅವರು ಪಾಲಿಸುತ್ತಾರಾ? ಅಥವಾ ಮತ್ತೆ ನಿರ್ದೇಶನವನ್ನು ಉಲ್ಲಂಘಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+