ಸಿದ್ದರಾಮಯ್ಯ ಹೆಲಿಕಾಪ್ಟರ್ನಲ್ಲಿ ಬೆಂಕಿ, ತನಿಖೆಗೆ ಆದೇಶ
ಬೆಂಗಳೂರು, ಜ.12 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವ ಕೆಜೆ ಜಾರ್ಜ್ ಆದೇಶಿಸಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳ ಭದ್ರತಾ ಲೋಪವಿರುವ ಕುರಿತು ತನಿಖೆ ನಡೆಯಲಿದೆ.
ಶನಿವಾರ
ಬೆಂಗಳೂರಿನ
ಎಚ್ಎಎಲ್
ವಿಮಾನ
ನಿಲ್ದಾಣದಲ್ಲಿ
ಸಿಎಂ
ಸಿದ್ದರಾಮಯ್ಯ
ಅವರ
ಹೆಲಿಕಾಪ್ಟರ್ನಲ್ಲಿ
ಬೆಂಕಿ
ಕಾಣಿಸಿಕೊಂಡಿತ್ತು.
ಮೈಸೂರಿಗೆ
ಪ್ರಯಾಣಿಸಬೇಕಿದ್ದ
ಸಿಎಂ
ಹೆಲಿಕಾಪ್ಟರ್
ಏರಿ
ಕುಳಿತಿದ್ದಾಗ,
ಸೈಲೆನ್ಸರ್ನಲ್ಲಿ
ಬೆಂಕಿ
ಕಾಣಿಸಿಕೊಂಡಿತ್ತು.
ಭದ್ರತಾ
ಸಿಬ್ಬಂದಿ
ಸಿದ್ದರಾಮಯ್ಯ
ಅವರನ್ನು
ತಕ್ಷಣ
ಕೆಳಗಿಸಿ
ಅನಾಹುತ
ತಪ್ಪಿಸಿದ್ದರು.
[ಹೆಲಿಕಾಪ್ಟರ್
ಅವಘಡದಿಂದ
ಸಿದ್ದು
ಪಾರಾದದ್ದು
ಹೇಗೆ?]
ಸೋಮವಾರ ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಗೃಹ ಸಚಿವ ಕೆಜೆ ಜಾರ್ಜ್ ಆದೇಶ ನೀಡಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳ ಭದ್ರತಾ ವೈಫಲ್ಯವಿರುವ ಕುರಿತು ತನಿಖೆ ನಡೆಯಲಿದೆ. [ಸಿಎಂ ಪಯಣಿಸಬೇಕಿದ್ದ ಹೆಲಿಕಾಪ್ಟರಲ್ಲಿ ಬೆಂಕಿ]
ವಿಐಪಿಗಳು ಸಾಗುವ ಹೆಲಿಕಾಪ್ಟರ್ ಪರೀಕ್ಷಾರ್ಥವಾಗಿ ಮೊದಲು ಹಾರಾಟ ನಡೆಸಬೇಕಿತ್ತು. ಆದರೆ, ಪ್ರಭಾತಂ ಏವಿಯೇಷನ್ನ ಇಸಿ 135 ಹೆಲಿಕಾಪ್ಟರ್ ಪರೀಕ್ಷಾರ್ಥ ಹಾರಾಟ ನಡೆಸಿರಲಿಲ್ಲ. ಆದ್ದರಿಂದ ಈ ಕುರಿತು ತನಿಖೆ ನಡೆಯಲಿದೆ.
ಅಲ್ಲದೇ ವಿಮಾನ ನಿಲ್ದಾಣದಲ್ಲಿ ಆಂಬ್ಯುಲೆನ್ಸ್ ಮತ್ತು ಅಗ್ನಿ ಶಾಮಕ ವಾಹನಗಳ ವ್ಯವಸ್ಥೆಯನ್ನು ಮಾಡಿಕೊಂಡಿರಲಿಲ್ಲ. ಆದ್ದರಿಂದ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಕೆಜೆ ಜಾರ್ಜ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಸಿಎಂ ಜಂಟಿ ಕಾರ್ಯದರ್ಶಿ ರಾಮಯ್ಯ ಮುಂತಾದವರು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಬೇಕಿತ್ತು. ಎಲ್ಲರೂ ಹೆಲಿಕಾಪ್ಟರ್ ಹತ್ತಿ ಕುಳಿತ ನಂತರ ಬೆಂಕಿ ಕಾಣಿಸಿಕೊಂಡಿತ್ತು.